ಆಂಧ್ರಕ್ಕೆ ಅಕ್ರಮ ಮದ್ಯ ಸಾಗಾಟ-ಐವರ ಬಂಧನ
Team Udayavani, Mar 29, 2022, 3:10 PM IST
ಬಳ್ಳಾರಿ: ನಗರದ ಹೊರವಲಯದಲ್ಲಿ ಅಕ್ರಮವಾಗಿ ಆಂಧ್ರಕ್ಕೆ ಮದ್ಯ ಸಾಗಿಸುತ್ತಿದ್ದ ಐವರು ಆರೋಪಿಗಳನ್ನು ಬಂಧಿಸಿರುವ ಗ್ರಾಮೀಣ ಠಾಣೆ ಪೊಲೀಸರು ಅವರಿಂದ ಸಾವಿರಾರು ರೂ. ಮೌಲ್ಯದ ಮದ್ಯ, ಆಟೋ, ಬೈಕ್ನ್ನು ವಶಪಡಿಸಿಕೊಂಡಿದ್ದಾರೆ.
ಆಂಧ್ರದ ಕುಂದನಕುರ್ತಿ ಗ್ರಾಮದ ನಾರಾ ಆಂಜಿನೇಯಲು (30), ಬಳ್ಳಾರಿಯ ರೂಪನಗುಡಿ ರಸ್ತೆ ಇರ್ಫಾನ್ (30), ಹನುಮಾನ್ ನಗರದ ವೆಂಕಟೇಶ್ (35), ಧನುಂಜಯುಲು (28), ಪುರುಷೋತ್ತಮ (35) ಬಂಧಿತ ಆರೋಪಿಗಳು. ಬಳ್ಳಾರಿ ನಗರದಿಂದ ಮದ್ಯದ ಪೌಚ್ಗಳು ತುಂಬಿದ್ದ ಬಾಕ್ಸ್ ಗಳನ್ನು ರಾಘವೇಂದ್ರ ಕಾಲೋನಿ ಮಾರ್ಗವಾಗಿ ಹೋಗಿ ರೈಲು ಮೂಲಕ ಆಂಧ್ರಕ್ಕೆ ಅಕ್ರಮವಾಗಿ ಮದ್ಯವನ್ನು ಸಾಗಿಸುತ್ತಿರುವ ಬಗ್ಗೆ ಖಚಿತ ಮಾಹಿತಿಯೊಂದಿಗೆ ದಾಳಿ ನಡೆಸಿ ಗ್ರಾಮೀಣ ಠಾಣೆ ಸಿಪಿಐ ಬಿ.ನಿರಂಜನ್ ಮತ್ತವರ ಸಿಬ್ಬಂದಿ, ಮಾ. 27ರಂದು ಭಾನುವಾರ ರಾತ್ರಿ 9.30 ಗಂಟೆ ಸುಮಾರಿಗೆ ಅಯ್ಯಪ್ಪಸ್ವಾಮಿ ದೇವಸ್ಥಾನದ ಎದುರು ದಾಳಿ ನಡೆಸಿ ಐವರು ಆರೋಪಿಗಳು, ಆಟೋ, ಬೈಕ್ ಸಮೇತ 84 ಸಾವಿರ ರೂ. ಮೌಲ್ಯದ 216 ಲೀಟರ್ ಹೇವರ್ಡ್ಸ್ ಚಿಯರ್ ವಿಸ್ಕಿ ತುಂಬಿದ ಪೌಚುಗಳು, 20 ಸಾವಿರ ರೂ. ಮೌಲ್ಯದ ಆಟೋ, 5 ಸಾವಿರ ರೂ. ಮೌಲ್ಯದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಳ್ಳಲಾಗಿದೆ ಎಂದು ಎಸ್ಪಿ ಸೈದುಲು ಅಡಾವತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ
ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?
Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ
Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ