ಭತ್ತ ಕಟಾವಿಗೆ ಹೆಚ್ಚಿನ ಹಣ ಆಕರಿಸಿದರೆ ಕ್ರಮ: ರೇಣುಕಾ
Team Udayavani, Apr 22, 2020, 6:00 PM IST
ಕಂಪ್ಲಿ: ತಾಲೂಕಿನ ಭತ್ತದ ಕಟಾವು ಯಂತ್ರದ ಮಾಲೀಕರ ಸಭೆಯಲ್ಲಿ ತಹಶೀಲ್ದಾರ್ ಎಂ.ರೇಣುಕಾ ಮಾತನಾಡಿದರು.
ಕಂಪ್ಲಿ: ತಾಲೂಕಿನಲ್ಲಿ ಭತ್ತದ ಕಟಾವು ಯಂತ್ರಗಳಿಗೆ ಒಂದು ಗಂಟೆಗೆ ರೂ. 2200ಗಳನ್ನು ನಿಗದಿಪಡಿಸಿದ್ದು ಇದಕ್ಕಿಂತ ಅಧಿಕ ಹಣ ಪಡೆದರೆ ಅಂತವರ ವಿರುದ್ಧ
ಕಾನೂನು ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಲಿದೆ ಎಂದು ತಹಶೀಲ್ದಾರ್ ಎಂ. ರೇಣುಕಾ ತಿಳಿಸಿದರು.
ಪಟ್ಟಣದ ತಾಲೂಕು ಕಚೇರಿಯಲ್ಲಿ ಏರ್ಪಡಿಸಿದ್ದ ತಾಲೂಕಿನ ಭತ್ತ ಕಟಾವು ಯಂತ್ರಗಳ ಮಾಲೀಕರ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರ ನಿಗಧಿ
ಪಡಿಸಿದಂತೆಯೇ ಭತ್ತದ ಕಟಾವು ಮಾಡಬೇಕು. ಹೆಚ್ಚಿನ ಬಾಡಿಗೆಗೆ ಆಗ್ರಹಿಸಿಬಾರದು. ಭತ್ತದ ಕೊಯ್ಲು ಯಂತ್ರದ ಬಾಡಿಗೆಯನ್ನು ಅಧಿಕವಾಗಿ ಪಡೆಯಲಾಗುತ್ತಿದೆ ಎನ್ನುವ ರೈತರ ದೂರಿನ ಮೇರೆಗೆ ಸಭೆಯನ್ನು ಆಯೋಜಿಸಲಾಗಿದ್ದು, ಹೆಚ್ಚಿನ ಹಣಕ್ಕಾಗಿ ರೈತರನ್ನು ಪೀಡಿಸಬಾರದು. ಮಧ್ಯವರ್ತಿಗಳಿಗೆ ಮಾಲೀಕರು ಅವಕಾಶ ಮಾಡಿಕೊಡಬಾರದು ಎಂದು ಸೂಚಿಸಿದರು.
ಸಿಪಿಐ ಡಿ. ಹುಲುಗಪ್ಪ, ಕೃಷಿ ಚಟುವಟಿಕೆಗೆ ಪೊಲೀಸರಿಂದ ತೊಂದರೆ ಆಗುವುದಿಲ್ಲ, ಆದರೆ ಇದೇ ನೆಪದಲ್ಲಿ ಪದೇ ಪದೇ ರಸ್ತೆ ಮೇಲೆ ಓಡಾಡುವುದರ ವಿರುದ್ಧ ಕ್ರಮ ಕೈಗೊಳ್ಳಲಾವುದು ಎಂದರು. ಪುರಸಭೆ ಮುಖ್ಯಾಧಿ ಕಾರಿ ರಮೇಶ್ ಬಡಿಗೇರ್, ಭತ್ತ ಕಟಾವು ಯಂತ್ರಗಳ ಮಾಲೀಕರಾದ ರಾಜಶೇಖರರೆಡ್ಡಿ, ರಮೇಶ, ಗೋವಿಂದರೆಡ್ಡಿ, ಗೋಪಾಲ್, ಖಾಜಾವಲಿ, ನಾರಾಯಣಸ್ವಾಮಿ, ವೆಂಕಟೇಶ್, ತಿಪ್ಪೇಸ್ವಾಮಿ, ರಾಮಾಂಜಿನೇಯಲು ವೆಂಕಟೇಶ್ವರರಾವು, ವಾಸು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Loksabha; ದಿಂಗಾಲೇಶ್ವರ ಶ್ರೀ ಸ್ಪರ್ಧೆಯ ಹಿಂದೆ ಕಾಣದ ಕೈಗಳ ಕೆಲಸವಿದೆ: ಅರವಿಂದ ಬೆಲ್ಲದ್
Phone Tapping; ತನಿಖೆಯಿಂದ ಸತ್ಯ ಬಯಲು: ಎಂ.ಬಿ.ಪಾಟೀಲ್
Bellary; ಕಾಂಗ್ರೆಸ್ ಏನೇ ಹಾರಾಟ ಮಾಡಿದರೂ ನಮಗೆ ಲಾಭ ಆಗುತ್ತದೆ: ವಿಜಯೇಂದ್ರ
Election ಬಳಿಕ ಕಾಂಗ್ರೆಸ್ ನವರು ಕೌರವರಾಗ್ತಾರೆ, ಬಿಜೆಪಿಯವರು ಪಾಂಡವರಾಗ್ತಾರೆ: ಶ್ರೀರಾಮುಲು
Ballari; ಗುರು-ಶಿಷ್ಯ ಪರಂಪರೆಗೆ ವೀರಣ್ಣ ಜ್ವಲಂತ ಸಾಕ್ಷಿ