ಭತ್ತ ಕಟಾವು ಯಂತ್ರ ದುರಸ್ತಿ ಸಮಸ್ಯೆ ಪರಿಹರಿಸಲು ಆಗ್ರಹ
Team Udayavani, Apr 13, 2020, 6:05 PM IST
ಕಂಪ್ಲಿ: ರೈತರ ಜಮೀನಿನಲ್ಲಿ ಕೃಷಿ ಯಂತ್ರಧಾರೆಯ ಭತ್ತದ ಕಟಾವು ಯಂತ್ರ ಭತ್ತವನ್ನು ಕಟಾವು ಮಾಡುತ್ತಿದೆ.
ಕಂಪ್ಲಿ: ತಾಲೂಕಿನಲ್ಲಿ ಹಿಂಗಾರು ಹಂಗಾಮಿ ಭತ್ತದ ಕಟಾವು ನಿಧಾನವಾಗಿ ವೇಗ ಪಡೆಯುತ್ತಿದೆ. ಆದರೆ ಕಟಾವು ಯಂತ್ರಗಳ ಕೊರತೆ ಕಾಣುತ್ತಿದೆ. ಈ ಮೊದಲು ಭತ್ತದ ಕಟಾವಿಗೆ ನೆರೆಯ ಆಂಧ್ರದಿಂದ ಯಂತ್ರಗಳು ಆಗಮಿಸುತ್ತಿದ್ದವು. ಆದರೆ ಲಾಕ್ಡೌನ್ನಿಂದಾಗಿ ಅಂತಾರಾಜ್ಯ ಗಡಿ ಪ್ರದೇಶ ನಿಷೇಧಿಸಲಾಗಿರುವುದರಿಂದ ಹಾಗೂ ಸ್ಥಳೀಯ ಯಂತ್ರಗಳಿಗೆ ಬೇಡಿಕೆ ಬಂದಿದೆ. ಆದರೆ ಯಂತ್ರಗಳು ದುರಸ್ತಿಗೆ ಬಂದಿರುವುದರಿಂದ ದುರಸ್ತಿಗೆ ಸಂಬಂಧಿಸಿದ ಅಂಗಡಿಗಳು, ಗ್ಯಾರೇಜುಗಳು ತೆರೆಯದ ಕಾರಣ ರೈತರಿಗೆ ಸಮಸ್ಯೆ ಆಗಿರುವುದರ ಜೊತೆಗೆ ಯಂತ್ರಗಳ ಕೊರತೆಯನ್ನೇ ಆಧಾರವಾಗಿಟ್ಟುಕೊಂಡು ಸಿಕ್ಕಾಪಟ್ಟೆ ಬಾಡಿಗೆ ಹೆಚ್ಚಿಸಲಾಗಿದೆ. ಇದರಿಂದ ರೈತರು ಪರಿತಪಿಸುವಂತಾಗಿದೆ. ಜತೆಗೆ ಇಂಧನದ ಕೊರತೆಯೂ ಕಾಡುತ್ತಿದೆ.
ವರ್ಷದಲ್ಲಿ ನಾಲ್ಕರಿಂದ ಆರು ತಿಂಗಳ ಸೀಜನ್ ಇದ್ದು, ಈ ಅವದಿಯಲ್ಲಿಯೇ ಭತ್ತದ ಕಟಾವು ಯಂತ್ರಗಳನ್ನು ದುಡಿಸಿಕೊಳ್ಳಬೇಕಾಗಿದೆ. ಪ್ರತಿ ಗಂಟೆಗೆ 2300 ರೂ ನಂತೆ ತಿಂಗಳಿಗೆ 300 ಗಂಟೆ ಕಾರ್ಯನಿರ್ವಹಿಸಿದಲ್ಲಿ ಮಾಲೀಕನಿಗೆ ಸ್ವಲ್ಪ ಹಣ ಬರುತ್ತಿತ್ತು. ಸದ್ಯ ಕಂಪ್ಲಿ ತಾಲೂಕಿನಲ್ಲಿ ಗಂಟೆಗೆ 2500 ರೂ. ಬಾಡಿಗೆ ಇದೆ. ಆದರೆ ರೈತರಿಗೆ ಇದು ಹೊರೆಯಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ರೈತರು ಗಂಟೆಗೆ 2000 ರೂ. ನಿಗದಿಪಡಿಸುವಂತೆ ಶಾಸಕರಿಗೆ ಮನವಿ ಮಾಡಿದ್ದಾರೆ.
ಇನ್ನು ಕೃಷಿ ಇಲಾಖೆ ಯಂತ್ರಧಾರೆಯಲ್ಲಿ ಕೇವಲ ಒಂದು ಕಟಾವು ಯಂತ್ರವಿದ್ದು, ಗಂಟೆಗೆ 2ಸಾವಿರ ಬಾಡಿಗೆಗೆ ನೀಡಲಾಗುತ್ತಿದ್ದು, ಸಣ್ಣಪುಟ್ಟ ರೈತರು ಇದನ್ನೇ ನೆಚ್ಚಿಕೊಂಡಿದ್ದಾರೆ. ಆದರೆ ಎಲ್ಲರಿಗೂ ಇದು ಸಿಗುವಂತಿಲ್ಲವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ
ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?
Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ
Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ
MUST WATCH
ಹೊಸ ಸೇರ್ಪಡೆ
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ