ಹೆಚ್ಚಿನ ಬೆಲೆಗೆ ಮಾರಾಟ ಮಾಡಿದರೆ ಕ್ರಮ
Team Udayavani, Apr 19, 2020, 5:48 PM IST
ಕೂಡ್ಲಿಗಿ: Koodligi:, ವರ್ತಕರ ಸಂಘದ ಸಭೆ, A meeting of the merchants' association
ಕೂಡ್ಲಿಗಿ: ಪಟ್ಟಣದ ವರ್ತಕರು ಮಾರುಕಟ್ಟೆ ಬೆಲೆಗಿಂತ ಹೆಚ್ಚಿನ ಬೆಲೆ ಮಾರಾಟ ಮಾಡುವುದನ್ನು ಬಿಡಬೇಕು. ಇಲ್ಲವಾದರೆ ಕಿರಾಣಿ ಅಂಗಡಿಗಳ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಹಶೀಲ್ದಾರ್ ಹೇಳಿದರು.
ತಾಲೂಕು ಆಡಳಿತ ಕಚೇರಿಯಲ್ಲಿ ತಾಲೂಕು ಕಿರಾಣಿ ವರ್ತಕರ ಸಂಘದ ಸಭೆಯಲ್ಲಿ ಮಾತನಾಡಿ, ಕಿರಾಣಿ ಮಾಲೀಕರು ಅಗತ್ಯ ವಸ್ತುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪ ಮಾಡುತ್ತಿದ್ದಾರೆ ಎಂದು ತಿಳಿಸಿದರು. ಅಂಗಡಿ ಮಾಲೀಕರು ಅಂಗಡಿಗಳ ಮುಂದೆ ದರಪಟ್ಟಿಯನ್ನು ನೇತು ಹಾಕಿ ಗ್ರಾಮದಿಂದ ಬಂದಂತಹ ಜನರು ಗಮನಿಸಿ ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳುತ್ತಾರೆ. ಹಾಗೆಯೇ ಅಂಗಡಿಯವರು ಗುಟ್ಕಾ ಮಾರಾಟ ನಿಷೇಧ ಮಾಡಬೇಕು ಎಂದರು.
ಇಓ ಬಸಣ್ಣ, ಶಾಸಕರ ಆಪ್ತ ಸಹಾಯಕ ಶೀಕಾಂತ, ಸ. ನೌಕರರ ಸಂಘದ ಅಧ್ಯಕ್ಷ ಶಿವರಾಜ್ ಪಾಲ್ತೂರ್, ಸಿಪಿಐ ಪಂಪನಗೌಡ, ಪಿಎಸೈ ತಿಮ್ಮಣ್ಣ. ಎಸ್. ಚಾಗನೂರ್, ಉಪತಹಶೀಲ್ದಾರ್ ಉಮೇಶ ರಾಥೋಡ್, ನವೀನಕುಮಾರ ಕಂದಾಯ ನೀರಿಕ್ಷಕ ಹಾಗೂ ಪಟ್ಟಣದ ಕಿರಾಣಿ ವರ್ತಕರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?
Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ
Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ
Loksabha; ದಿಂಗಾಲೇಶ್ವರ ಶ್ರೀ ಸ್ಪರ್ಧೆಯ ಹಿಂದೆ ಕಾಣದ ಕೈಗಳ ಕೆಲಸವಿದೆ: ಅರವಿಂದ ಬೆಲ್ಲದ್
Phone Tapping; ತನಿಖೆಯಿಂದ ಸತ್ಯ ಬಯಲು: ಎಂ.ಬಿ.ಪಾಟೀಲ್