ನಾಟಕ ಪ್ರದರ್ಶಿಸಿ ಕೋವಿಡ್ ಜಾಗೃತಿ
ತಮಟೆ ಬಾರಿಸಿ ಉದ್ಘಾಟಿಸಿದ ಡಿವೈಎಸ್ಪಿ ಶಿವಕುಮಾರ ಹಗಲುವೇಷಗಾರರಿಂದ ಹೊಸ ಯತ್ನ
Team Udayavani, Apr 15, 2020, 1:26 PM IST
ಕೂಡ್ಲಿಗಿ: ಡಿವೈಎಸ್ಪಿ ಶಿವಕುಮಾರ್ ತಮಟೆ ಬಾರಿಸಿ ಕಿರು ನಾಟಕಕ್ಕೆ ಚಾಲನೆ ನೀಡಿದರು.
ಕೂಡ್ಲಿಗಿ: ಕೋವಿಡ್ ವೈರಸ್ ರೋಗ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು, ಜನರನ್ನು ಬೆಚ್ಚಿಬೀಳಿಸಿ ಸಾವಿಗೆ ಶರಣಾಗಿ ನೋಡಬೇಕು ಎನ್ನುವ ಕೋವಿಡ್ ರೋಗ ಹರಡುವಿಕೆಯನ್ನು ತಡಗಟ್ಟಲು ಪ್ರಸ್ತುತ ಈ ಕಿರು ನಾಟಕ ಅವಶ್ಯಕ ಎಂದು ಡಿವೈಎಸ್ಪಿ ಶಿವಕುಮಾರ್ ಹೇಳಿದರು.
ಅವರು ತಮಟೆ ಬಾರಿಸಿ ನಾಟಕಕ್ಕೆ ಚಾಲನೆ ನೀಡಿ ಮಾತನಾಡಿದರು. ಲಾಕ್ಡೌನ್ ಹಿನ್ನೆಲೆಯಲ್ಲಿ ಕೋವಿಡ್ ವೈರಾಸ್ ನಿಯಂತ್ರಿಸಲು ಪಟ್ಟಣದಲ್ಲಿ ಜನರಿಗೆ ಜಾಗೃತಿ ಮೂಡಿಸಲು ಹಗಲು ವೇಷ ಧರಿಸಿದವರ ಶ್ರಮ ಮೆಚ್ಚುವಂತಹದ್ದು. ಜನರಲ್ಲಿ ಭಯ ಬೀಳಿಸುವ ಮೂಲಕ ಪ್ರತಿ ವಾರ್ಡ್ಗಳಲ್ಲಿ ಜಾಗೃತಿ ಮೂಡಿಸಲಾಯಿತು. ಕೋವಿಡ್ ಮಹಾಮಾರಿ ನಿಯಂತ್ರಿಸಲು ಹಗಲು ವೇಷಗಾರರಿಂದ ಕಿರು ನಾಟಕ ನೋಡಿದ ಜನರು ಕೂಡಲೇ ದಯವಿಟ್ಟು ಅನವಶ್ಯಕವಾಗಿ ಮನೆಯಿಂದ ಹೊರಗೆ ಬಾರದೆ ಜನ ಅರ್ಥಮಾಡಿಕೊಂಡು ನಮಗಾಗಿ ಪೊಲೀಸ್ ಇಲಾಖೆ ಕಷ್ಟಪಡುತ್ತಿದೆ. ಆದ ಕಾರಣ ಇದು ನಮ್ಮ ಜವಾಬ್ದಾರಿ ಎಂದು ಮನಗಂಡು ಮನೆಯಲ್ಲಿಯೇ ಇರಬೇಕು ಎಂದು ನುಡಿದರು.
ನಂತರ ಸಿಪಿಐ ಪಂಪನಗೌಡ ಮಾತನಾಡುತ್ತಾ ಜನರಲ್ಲಿ ವೈರಸ್ ಯಾರು ಮನೆಯಿಂದ ಹೊರಗಡೆ ಬಂದವರಿಗೆ ಮೊದಲ ಮೃತ್ಯುಯಾಗಿ ಸ್ಪರ್ಶಿಸುವ ಶಕ್ತಿ ಇದೆ. ಭಯಾನಕ ರೋಗಕ್ಕೆ ತುತ್ತಾಗಿ ನರಳುವ ಯಾತನೆಯಿಂದ ಕೈಬಿಟ್ಟು ಈಗಾಲಾದರೂ ಕಿರು ನಾಟಕದಿಂದ ಬದಲಾಗಿ ಹಾಗೆಯೇ ಸ್ಥಳೀಯ ರಂಗ ಕಲಾವಿದರಾಗಿ ಹಗಲು ವೇಷದಾರಿಗಳು ತಮ್ಮ ನಟನೆಯಲ್ಲಿ ಕರಗತ ಮಾಡಿಕೊಂಡು ಪಟ್ಟಣದ ಪ್ರತಿ ವಾರ್ಡ್ ಗಳಲ್ಲಿ ಸಂಚಾರಿಸುತ್ತಾ ಪಾತ್ರದಾರಿಗಳಲ್ಲಿ ಒಬ್ಬ ಯಮನು ಇನ್ನೊಬ್ಬ ಕೋವಿಡ್ ವೈರಸ್, ಮತ್ತೊಬ್ಬ ಚಿತ್ರಗುಪ್ತ ಸಂಭಾಷಣೆ ಮಾಡುತ್ತಾ ಸ್ಯಾನಿಟೈಸರ್ ಬಳಸಿ ಕೈ ಶುಚಿ ಮಾಡಿಕೊಳ್ಳಬೇಕು ಎಂದು ಜನರಲ್ಲಿ ಅರಿವು ಮೂಡಿಸಿದರು.
ಸಾಮಾಜಿಕ ಅಂತರ ಕಾಯ್ದುಕೊಂಡು ರೋಗದಿಂದ ದೂರವಿರೋಣ ಎಂದರು. ತಿಮ್ಮಣ್ಣ ಚಾಗನೂರು ಮಾತನಾಡಿ ರೋಗಕ್ಕೆ ಕಡಿವಾಣ ಹಾಕಬೇಕಾದರೆ ನಮ್ಮ ಜನ ಅಲೆದಾಟ ಕಡಿಮೆ ಮಾಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದರು. ಕಾವಲಿಶಿವಪ್ಪ, ಕಾಂಗ್ರೆಸ್ ಮುಖಂಡ ಉಮೇಶ, ಕೋಗಳಿ ಮಂಜುನಾಥ ಮತ್ತು ಪೊಲೀಸ್ ಸಿಬ್ಬಂದಿ ಹಾಗೂ ಹಗಲು ವೇಷಗಾರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Loksabha; ದಿಂಗಾಲೇಶ್ವರ ಶ್ರೀ ಸ್ಪರ್ಧೆಯ ಹಿಂದೆ ಕಾಣದ ಕೈಗಳ ಕೆಲಸವಿದೆ: ಅರವಿಂದ ಬೆಲ್ಲದ್
Phone Tapping; ತನಿಖೆಯಿಂದ ಸತ್ಯ ಬಯಲು: ಎಂ.ಬಿ.ಪಾಟೀಲ್
Bellary; ಕಾಂಗ್ರೆಸ್ ಏನೇ ಹಾರಾಟ ಮಾಡಿದರೂ ನಮಗೆ ಲಾಭ ಆಗುತ್ತದೆ: ವಿಜಯೇಂದ್ರ
Election ಬಳಿಕ ಕಾಂಗ್ರೆಸ್ ನವರು ಕೌರವರಾಗ್ತಾರೆ, ಬಿಜೆಪಿಯವರು ಪಾಂಡವರಾಗ್ತಾರೆ: ಶ್ರೀರಾಮುಲು
Ballari; ಗುರು-ಶಿಷ್ಯ ಪರಂಪರೆಗೆ ವೀರಣ್ಣ ಜ್ವಲಂತ ಸಾಕ್ಷಿ
MUST WATCH
ಹೊಸ ಸೇರ್ಪಡೆ
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ
Ban in Singapore; ಎವರೆಸ್ಟ್ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?
ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ