ಬಸ್ ನಿಲ್ದಾಣದಲ್ಲಿಲ್ಲ ಮೂಲ ಸೌಲಭ್ಯ!
ಬಿರು ಬಿಸಿಲಲ್ಲೇ ನಿಂತು ಬಸ್ಗಾಗಿ ಕಾಯುವ ಸ್ಥಿತಿ ಪ್ರಯಾಣಿಕರದು
Team Udayavani, Feb 17, 2020, 2:45 PM IST
ಕುರುಗೋಡು: ಐಹಾಸಿಕ ಕ್ಷೇತ್ರ ಎಂಬ ಖ್ಯಾತಿ ಪಡೆದ ಕುರುಗೋಡು ನೂತನ ತಾಲೂಕಿನಲ್ಲಿ ಸರಿಯಾದ ಬಸ್ ನಿಲ್ದಾಣದ ವ್ಯವಸ್ಥೆಯಿಲ್ಲದೆ ಪ್ರಯಾಣಿಕರು ಹಾಗೂ ಶಾಲಾ – ಕಾಲೇಜು ವಿದ್ಯಾರ್ಥಿಗಳು ನಾಡಗೌಡರ ಮುಖ್ಯ ವೃತ್ತದ ಬಳಿಯಲ್ಲಿ ಬಸ್ಗಾಗಿ ಗಂಟೆ ಗಟ್ಟಲೇ ಕಾದು ಬಿಸಿಲಲ್ಲೇ ಬೆವರು ಹರಿಸಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ.
ಈ ಹಿಂದೆ ಕುರುಗೋಡಿನ ಸರಕಾರಿ ಬಾಲಕರ ಪ್ರೌಢಶಾಲೆಯ ಎದುರುಗಡೆ 1992-93ರಲ್ಲಿ ಬಸ್ ನಿಲ್ದಾಣ ನಿರ್ಮಾಣಗೊಂಡಿತ್ತು. ಇದನ್ನು ಅಂದಿನ ಶಾಸಕ ಶಿವರಾಮರೆಡ್ಡಿ ಉದ್ಘಾಟಿಸಿದ್ದರು. ಆದರೆ ಸುಮಾರು ವರ್ಷಗಳಿಂದ ಈ ನಿಲ್ದಾಣವು ಶಿಥಿಲಾವ್ಯಸ್ಥೆಯಲ್ಲಿದ್ದು ಅದರಲ್ಲಿ ಸರಿಯಾದ ಕುಡಿಯುವ ನೀರಿನ ವ್ಯವಸ್ಥೆ ಮತ್ತು ಶೌಚಾಲಯ ಸೇರಿದಂತೆ ಮೂಲ ಸೌಲಭ್ಯಗಳಿಂದ ವಂಚಿತಗೊಂಡಿದೆ. ಸುತ್ತಮುತ್ತ ತಡೆಗೋಡೆ, ನಿಲ್ದಾಣದ ಆವರಣದಲ್ಲಿ ಸ್ವತ್ಛತೆ ಕೊರತೆಯಿಂದ ಯಾವ ಪ್ರಯಾಣಿಕರು ಬಸ್ ನಿಲ್ದಾಣದ ಕಡೆಗೆ ಹೋಗದೆ ಮುಖ್ಯ ವೃತ್ತದಲ್ಲಿ ಬಿಸಿಲಲ್ಲೆ ನಿಂತು ಬಸ್ ಕಾಯುತ್ತಿದ್ದಾರೆ.
ಇದೀಗ ಎರಡು ಮೂರು ತಿಂಗಳಿಂದ ಬಸ್ ನಿಲ್ದಾಣದ ಸುತ್ತ ತಡೆಗೋಡೆ ಕಾಮಗಾರಿ ಮತ್ತು ಆವರಣದಲ್ಲಿ ಸಿಸಿ ರಸ್ತೆ ಕಾಮಗಾರಿ ನಡೆಸುತ್ತಿದ್ದು, ತುಂಬ ಮಂದಗತಿಯಲ್ಲಿ ಕೆಲಸ ನಡೆಯುತ್ತಿರುವುದರಿಂದ ನನೆಗುದಿಗೆ ಬಿದ್ದಿದೆ. ನಿಲ್ದಾಣದ ಕಟ್ಟಡದ ಮೇಲ್ಛಾವಣಿ ಕಾಂಕ್ರೀಟ್ ಪದರು ಎಲ್ಲೆಂದರಲ್ಲಿ ಉದುರುತ್ತಿದೆ. ಅಲ್ಲದೆ ಅದಕ್ಕೆ ಸಂಪರ್ಕ ಹೊಂದಿರುವ ಬೆಡ್ಗಳು ಕೂಡ ಸಿಮೆಂಟ್ ಪದರು ಉದುರಿ ರಾಡ್ಗಳು ಹೊರಗಡೆ ಬಿದ್ದಿವೆ. ಇಷ್ಟೆಲ್ಲಾ ಸಮಸ್ಯೆಯಿಂದ ಇರುವ ಬಸ್ ನಿಲ್ದಾಣವು ಇದನ್ನೆಲ್ಲಾ ಬದಿಗಿರಿಸಿ ಅನುದಾನದ ನೆಪ ಹೇಳಿಕೊಂಡು ಕೇವಲ ತಡೆಗೋಡೆ ಮತ್ತು ಸಿಸಿ ರಸ್ತೆ ಕಾಮಗಾರಿಯನ್ನು ಮಾತ್ರ ನಡೆಸುತ್ತಿದ್ದಾರೆ.
ವೃದ್ಧರಿಗೆ ಸಮಸ್ಯೆ: ಕುರುಗೋಡಲ್ಲಿ ಬಸ್ ನಿಲ್ದಾಣದಲ್ಲಿ ಸರಿಯಾದ ವ್ಯವಸ್ಥೆ ಇಲ್ಲದಿರುವುದರಿಂದ ಮುಖ್ಯ ವೃತ್ತದಲ್ಲಿ ಬಸ್ಗಾಗಿ ನಿಲ್ಲುವ ವೃದ್ಧರಿಗೆ, ರೋಗಿಗಳಿಗೆ, ಚಿಣ್ಣರಿಗೆ ಸಮಸ್ಯೆಯಾಗುತ್ತಿದೆ. ನೆರಳಿನ ವ್ಯವಸ್ಥೆ, ಕುಳಿತುಕೊಳ್ಳವುದಕ್ಕೆ ಇಲ್ಲದಿರುವುದರಿಂದ ಕಷ್ಟಕರವಾಗಿದೆ. ಇನ್ನೂ ಕುರುಗೋಡು ಹೊರ ಪ್ರದೇಶದ ವ್ಯಾಪ್ತಿಯಲ್ಲಿರುವ ಕಲ್ಲು ಗಣಿಗಾರಿಕೆಯ ಕ್ವಾರಿಗಳಿಂದ ನಿತ್ಯ ಬೆಳಗ್ಗೆ ಮತ್ತು ಸಂಜೆ ವೇಳೆ ಕಲ್ಲುಗಳು ಸಾಗಣಿಕೆ ಮಾಡುವ ಟಿಪ್ಪರ್ಗಳು ಅಡ್ಡಾದಿಡ್ಡಿಯಾಗಿ ಓಡಾಡುತ್ತಿದ್ದು ಅದರಿಂದ ಬರುವ ಧೂಳು ಮತ್ತು ಇತರೆ ವಾಹನಗಳ ಧೂಳಿನ ಮಧ್ಯೆ ಡಬ್ಬಿ ಅಂಗಡಿಗಳ ಸಂದುಗಳಲ್ಲಿ ಬಸ್ಗಳಿಗಾಗಿ ಕಾದು ನಿಲ್ಲುವ ಅನಿವಾರ್ಯತೆ ಎದುರಾಗಿದೆ.
ವೃತ್ತದ ಬಳಿ ನೂತನ ಬಸ್ ನಿಲ್ದಾಣ ನಿರ್ಮಾಣಕ್ಕೆ ಒತ್ತಾಯ: ಈ ಹಿಂದೆ ಮುಖ್ಯವೃತ್ತದ
ಬಳಿಯಲ್ಲಿದ್ದಂತಹ ಹಳೆ ಬಸ್ ನಿಲ್ದಾಣದ ಜಾಗದಲ್ಲಿ ಪ್ರಯಾಣಿಕರಿಗೆ ನೂತನ ಬಸ್ ನಿಲ್ದಾಣದ ವ್ಯವಸ್ಥೆ ಮಾಡದೆ ಅ ಜಾಗದಲ್ಲಿ ಏಕಾಏಕಿ ಉದ್ಯಾನವನ ನಿರ್ಮಾಣ ಮಾಡಿದ್ದಾರೆ. ಆದ್ದರಿಂದ ಸುತ್ತಮುತ್ತಲಿನ 24 ಹಳ್ಳಿಯ ಜನರು ಅತಿ ಹೆಚ್ಚಿನ ಸಂಖ್ಯೆಯಲ್ಲಿ
ಕುರುಗೋಡು ತಾಲೂಕಿನಲ್ಲಿ ಪ್ರಮುಖವಾಗಿರುವ ನಾಡಗೌಡರ ಮುಖ್ಯವೃತ್ತಕ್ಕೆ ಸೇರಿಕೊಳ್ಳುತ್ತಾರೆ. ಜನರ ಪ್ರತಿಯೊಂದು ಕೆಲಸಕ್ಕೆ ನಾಡಗೌಡರ ಮುಖ್ಯವೃತ್ತದ ಬಳಿಯಲ್ಲಿ ಬಂದು ವ್ಯವಹಾರ ಸೇರಿದಂತೆ ಇತರೆ ಕಾರ್ಯಗಳು ಅಲ್ಲಿಂದ ಪ್ರಾರಂಭವಾಗುತ್ತವೆ. ಆದ್ದರಿಂದ ವೃತ್ತದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹಾಗೂ ಬೇರೆ ಕಡೆ ತೆರಳುವ ಪ್ರಯಾಣಿಕರು ದಾಸ್ತಿ ವೃತ್ತದಲ್ಲಿ ನಿಲ್ಲುವುದರಿಂದ ಅದರ ಪಕ್ಕದಲ್ಲಿ ನೂತನ ಬಸ್ ನಿಲ್ದಾಣ ನಿರ್ಮಾಣ ಮಾಡಬೇಕು ಎಂಬುವುದು ತಾಲೂಕಿನ ಪ್ರಗತಿಪರ ಸಂಘಟನೆಯವರು ಹಾಗೂ ಮುಖಂಡರ ಒತ್ತಾಯವಾಗಿದೆ.
ಜಾತ್ರೆಗೆ ಬರುವ ಭಕ್ತಾದಿಗಳಿಗೆ ತೊಂದರೆ: ಮಾ. 9ರಂದು ಕುರುಗೋಡಿನ ಅರಾಧ್ಯ ದೈವ ಶ್ರೀ
ದೊಡ್ಡಬಸವೇಶ್ವರ ಜಾತ್ರಾ ಮಹೋತ್ಸವವಿದ್ದು ಪ್ರತಿ ವರ್ಷ ಜಾತ್ರೆಗೆ ಕಂಪ್ಲಿ ಮಾರ್ಗವಾಗಿ ಬರುವ ಗಂಗಾವತಿ, ಕಲ್ಲುಕಂಬ, ಎಮ್ಮಿಗನೂರು, ಗುತ್ತಿಗನೂರು, ಕುಡಿತಿನಿ ಹೊಸಪೇಟೆ ಸೇರಿದಂತೆ ಬಹುತೇಕ ಗ್ರಾಮಗಳಿಂದ ಬರುವ ಪ್ರಯಾಣಿಕರು ಮತ್ತು ಭಕ್ತಾದಿ ಗಳ ಎತ್ತನ ಬಂಡಿ, ಬಿರು ಬಿಸಿಲಲ್ಲೇ ನಿಂತು ಬಸ್ಗಾಗಿ ಕಾಯುವ ಸ್ಥಿತಿ ಪ್ರಯಾಣಿಕರದು ಬಿರು ಬಿಸಿಲಲ್ಲೇ ನಿಂತು ಬಸ್ಗಾಗಿ ಕಾಯುವ ಸ್ಥಿತಿ ಪ್ರಯಾಣಿಕರದು ಟ್ರ್ಯಾ ಕ್ಟರ್ಗಳು, ಕಾರುಗಳು ಇತರೆ ಪ್ರತಿಯೊಂದು ವಾಹನಗಳು ಬಸ್ ನಿಲ್ದಾಣದ ಆವರಣದಲ್ಲಿ ಸೇರಿಕೊಳ್ಳುತ್ತಿದ್ದು ಈ ವರ್ಷ ನಿಲ್ದಾಣದ ಕಾಮಗಾರಿ ಮಂದಗತಿಯಲ್ಲಿ ನಡೆಯುತ್ತಿರುವುದರಿಂದ ಬರುವ ಪ್ರಯಾಣಿಕರಿಗೆ ಹಾಗೂ ಭಕ್ತಾ ದಿಗಳಿಗೆ ಸಮಸ್ಯೆಯಾಗುವ ಸಾಧ್ಯತೆ ಇದೆ.
ಈಗಾಗಲೇ ಮುಖ್ಯ ವೃತ್ತದ ಬಳಿಯಲ್ಲಿ ಹಳೆ ಬಸ್ ನಿಲ್ದಾಣವಿತ್ತು. ಅದರ ಜಾಗದಲ್ಲಿ ಉದ್ಯಾನವನ ಮಾಡಿದ್ದಾರೆ. ವೃತ್ತದಲ್ಲಿ ಹೆಚ್ಚು ಜನ ಸೇರುವುದರಿಂದ ನೂತನ ನಿಲ್ದಾಣ ಮಾಡಿದರೆ ಎಲ್ಲರಿಗೂ ಅನುಕೂಲವಾಗಲಿದೆ. ಈಗಾಗಲೇ ಇರುವ ಬಸ್ ನಿಲ್ದಾಣ ಶಿಥಿಲಾವ್ಯಸ್ಥೆ ತಲುಪಿದೆ. ಅದರಲ್ಲಿ ಸೌಲಭ್ಯಗಳು ಇಲ್ಲ. ಅಲ್ಲಿಗೆ ಯಾರು ಹೋಗುವುದಿಲ್ಲ. ನಿಲ್ದಾಣದ ಎಲ್ಲವು ದುರಸ್ತಿ ಮಾಡದೆ ಅನುದಾನ ನೆಪ ಹೇಳಿ ತಮಗೆ ಬೇಕಿದ್ದ ಕಾಮಗಾರಿ ನಡೆಸುತ್ತಿದ್ದಾರೆ. ಅದು ಮಂದಗತಿಯಲ್ಲಿ ಸಾಗುತ್ತಿದೆ. ಇದರಿಂದ ಪ್ರಯಾಣಿಕರು ಬಿಸಿಲಲ್ಲಿ ನಿಂತು ಬಸ್ಗಾಗಿ ಕಾಯಬೇಕಾದ ಸ್ಥಿತಿ ಇದೆ.
ಎಚ್.ಎಂ. ವಿಶ್ವನಾಥ ಸ್ವಾಮಿ, ಬೀದಿ ಬದಿ
ವ್ಯಾಪಾರಿಗಳ ಸಂಘದ ಜಿಲ್ಲಾ ಕಾರ್ಯದರ್ಶಿ
ಬಸ್ ನಿಲ್ದಾಣದಲ್ಲಿ ನಡೆಯುವ ಕಾಮಗಾರಿಗಳು ಮುಗಿಯುವ ಹಂತದಲ್ಲಿವೆ. ನಿಲ್ದಾಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮತ್ತು ಶೌಚಾಲಯಗಳ ವ್ಯವಸ್ಥೆ ಮಾಡಿಕೊಡುವಂತೆ ಇಂಜಿನಿಯರ್ ಗಳಿಗೆ ತಿಳಿಸಿದ್ದೇನೆ. ಇನ್ಮುಂದೆ ನಿಲ್ದಾಣದಲ್ಲಿ ಯಾರೇ ಬಂದು ಅಸ್ವಚ್ಛತೆ ವಾತಾವರಣ ನಿರ್ಮಾಣ ಮಾಡಲು ಅವಕಾಶ ಇಲ್ಲ. ನಮ್ಮ ಸಿಬ್ಬಂದಿ ಇರುತ್ತಾರೆ. ಅದರಲ್ಲಿ ಜಾತ್ರೆ ಹತ್ತಿರ ಬಂದಿರುವುದರಿಂದ ಪ್ರಯಾಣಿಕರಿಗೆ ಬೇಕಾದ ಸೌಲಭ್ಯಗಳು ನಿಲ್ದಾಣದಲ್ಲಿ ಸಿಗಲಿದೆ.
ಗಂಗಾಧರ್ ಕುರುಗೋಡು,
ಬಸ್ ಘಟಕದ ವ್ಯವಸ್ಥಾಪಕ
ಸುಧಾಕರ್ ಮಣ್ಣೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್ಆ್ಯಪ್ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ
Sathish Ninasam- Rachita Ram: ಮ್ಯಾಟ್ನಿಯಲ್ಲಿ ಹಾರರ್ ಶೋ
ಕೋರ್ಟ್ ಮೇಲೆ ಪಟ್ಟಭದ್ರರ ಒತ್ತಡ: ವಕೀಲರ ಪತ್ರ
Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ
ನಟ, ಕಾಂಗ್ರೆಸ್ ಮಾಜಿ ಸಂಸದ ಗೋವಿಂದ “ಶಿಂಧೆ ಸೇನೆ’ ಸೇರ್ಪಡೆ