ಕೋವಿಡ್ ವೈರಸ್: ಚಿತ್ರ ಬಿಡಿಸಿ ಜಾಗೃತಿ ಮೂಡಿಸಿದು
Team Udayavani, Apr 15, 2020, 4:44 PM IST
ಕುರುಗೋಡು: ಕಲಾವಿದರು ಕೋವಿಡ್ ವೈರಸ್ ನಿಯಂತ್ರಿಸಲು ಚಿತ್ರಗಳನ್ನು ಬಿಡಿಸಿ ಜಾಗೃತಿ ಮೂಡಿಸಿದರು.
ಕುರುಗೋಡು: ಪಟ್ಟಣದ ಮುಖ್ಯವೃತ್ತದಲ್ಲಿ ಚಿತ್ರ ಕಲಾವಿದರು ಕೋವಿಡ್ ವೈರಸ್ ನಿಯಂತ್ರಿಸಲು ಲಾಕ್ ಡೌನ್ ಹಿನ್ನೆಲೆಯಲ್ಲಿ ಡಾಕ್ಟರ್, ಪೊಲೀಸ್, ಪುರಸಭೆ ಮುಂಜಾಗೃತಿ ಕಾರ್ಯಗಳು ಹಾಗೂ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಚಿತ್ರಗಳನ್ನು ಬಿಡಿಸುವುದರ ಮೂಲಕ ಗಮನ ಸೆಳೆದರು.
ಚಿತ್ರಕಲಾವಿದ ಮೆಹೆಬೂಬ್ ಮಾತನಾಡಿ, ವಿಶ್ವದಲ್ಲೇ ಹೆಮ್ಮಾರಿಯಾಗಿ ಕಾಡುತ್ತಿರುವ ಕೋವಿಡ್ ವೈರಸ್ ನಿಯಂತ್ರಿಸಲು ಸರ್ಕಾರ ಹತ್ತಾರು ಕಾರ್ಯಕ್ರಮಗಳನ್ನು ರೂಪಿಸಿದೆ. ವೈರಸ್ನ್ನು ನಿಯಂತ್ರಿಸಿ ದೇಶದ ರಕ್ಷಣೆಗಾಗಿ ಡಾಕ್ಟರ್ಗಳು, ಪೊಲೀಸರು ಹಾಗೂ ಪುರಸಭೆ ಸಿಬ್ಬಂದಿ ಹೋರಾಟ ಮಾಡುತ್ತಿರುವುದು ಶ್ಲಾಘನೀಯ. ಹಾಗಾಗಿ ಅವರ ಕಾರ್ಯಗಳು ಹಾಗೂ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಸ್ಲೋಗನ್ಗಳು ಮತ್ತು ಚಿತ್ರಗಳನ್ನು ಸ್ನೇಹಿತರ ಸಹಾಯದಿಂದ ಹಾಕಿದ್ದೇವೆ ಎಂದರು. ಚಿತ್ರಕಲಾವಿದ ಮಣ್ಣೂರು ಬಸವರಾಜ್ ಮಾತನಾಡಿದರು.
ಕೋವಿಡ್ ಮಾರಿ ನಿನಗೆ ಇಲ್ಲ ದಾರಿ ಮತ್ತು ಸ್ಟೇ ಹೋಮ್ ಸೇವ್ ಲೈಫ್ ಎಂಬ ಸ್ಲೋಗನ್ನಿಂದ ಹಾಗೂ ಪೊಲೀಸ್ ಇಲಾಖೆಯವರು ಸಾರ್ವಜನಿಕರ ರಕ್ಷಣೆಗಾಗಿ ಮಾಸ್ಕ್ ಧರಿಸಿ ಹಾಗೂ ಹೊರಗಡೆ ಬರಬೇಡಿ, ಪುರಸಭೆ ಸಿಬ್ಬಂದಿ ಸ್ವಚ್ಛತೆ ಹಾಗೂ ಡಾಕ್ಟರ್ ಕೋವಿಡ್ ಸೋಂಕಿತರ ಚಿಕಿತ್ಸೆ ನೀಡುತ್ತಿರುವ ಸ್ವ-ರಚಿತ ಚಿತ್ರಗಳನ್ನು ಬಿಡಿಸಿದರು.
ದಾದಾಪೀರ್, ಕೆ.ಕಿರಣ್ಕುಮಾರ್, ಅಲಿಂ, ಪಿ.ಶೇಕ್ಷವಲಿ, ಅಮೀರ್, ಮದುಸೂದನ್, ಚಂದ್ರಸಿಂಗ್. ರವಿ, ಜೆ.ಕಿರಣ್ಕುಮಾರ್, ಮಲ್ಲಿಕಾರ್ಜುನ್, ಮಹಾಲಿಂಗ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ
ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?
Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ
Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ