ಮಂಗಳಮುಖೀಯಾಗಿಸುವ ಯತ್ನಕ್ಕೆ ಅಧಿಕಾರಿಗಳ ಬ್ರೇಕ್
Team Udayavani, Jun 12, 2020, 12:58 PM IST
ಕುರುಗೋಡು: ಎಮ್ಮಿಗನೂರು ಗ್ರಾಮದಲ್ಲಿ ಬಾಲಕನನ್ನು ಮಂಗಳ ಮುಖೀಯನ್ನಾಗಿಸುವುದನ್ನು ತಡೆದ ಅಧಿಕಾರಿಗಳು ಪೋಷಕರಿಂದ ಮುಚ್ಚಳಿಕೆ ಪತ್ರ ಬರೆಸಿಕೊಂಡರು.
ಕುರುಗೋಡು: ಪಟ್ಟಣ ಸಮೀಪದ ಎಮ್ಮಿಗನೂರು ಗ್ರಾಮದಲ್ಲಿ ಗುರುವಾರ ಬಾಲಕನನ್ನು ಮಂಗಳಮುಖೀಯನ್ನಾಗಿಸುವ ವೇಳೆ ಸ್ಥಳಕ್ಕೆ ತೆರಳಿದ ಅಧಿಕಾರಿಗಳು, ಪಾಲಕರಿಗೆ ತಿಳಿಹೇಳಿ ಮುಚ್ಚಳಿಕಗೆ ಪತ್ರ ಬರೆಸಿಕೊಂಡಿದ್ದಾರೆ.
ಗ್ರಾಮದ 7ನೇ ವಾರ್ಡಿನ ಇಂದಿರ ನಗರದಲ್ಲಿ 17 ವರ್ಷದ ಬಾಲಕನನ್ನು ಪೋಷಕರು ಮಂಗಳಮುಖೀ ಪ್ರಯತ್ನದಲ್ಲಿ ತೊಡಗಿಸಲು ಎರಡ್ಮೂರು ದಿನಗಳಿಂದ ಸಕಲ ಸಿದ್ಧತೆ ನೆಡಸಿದ್ದರು. ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಬಾಲಕನ ಕುಟುಂಬದ ಮನೆಗೆ ತೆರಳಿದ ಅಧಿಕಾರಿಗಳ ತಂಡ ಇದನ್ನು ತಡೆಹಿಡಿದ್ದಾರೆ.
ಗ್ರಾಮದ ಮಂಗಳಮುಖೀಯಾಗಲು ಸ್ವಯಂ ಇಚ್ಚೆಪಟ್ಟ ಬಾಲಕನಿಗೆ 3ನೇ ತರಗತಿಯಿಂದ ಹುಲಿಗೆಮ್ಮದೇವಿಯ ಶಕೆ ಆಸಕ್ತಿ ಹಿನ್ನೆಲೆ ಸ್ವಂತ ತಾನೇ (ಮುತ್ತು) ಕಟ್ಟಿಕೊಳ್ಳಲು ಮುಂದಾಗಿರುವುದರಿಂದ ಕುಟುಂಬ ಪೋಷಕರು ಬಾಲಕನನ್ನು ಮಂಗಳಮುಖೀಗೆ ಒಳಪಡಿಸಲು ಎಲ್ಲಾ ರೀತಿಯ ಕಾರ್ಯ ಚಟುವಟಿಕೆಯಲ್ಲಿ ತೊಡಗಿದ್ದರು.
ಅಧಿಕಾರಿಗಳಾದ ಜಿಲ್ಲಾ ಮಕ್ಕಳ ಸಂಯೋಜಕ ಚಿದಾನಂದ, ನೇತ್ರಾ, ಜಡೇಪ್ಪ, ಗ್ರಾಮ ಲೆಕ್ಕಾಧಿಕಾರಿ ಹೊನ್ನಪ್ಪ, ಮಂಜುನಾಥ, ಗ್ರಾಪಂ ಪಿಡಿಒ ತಾರುನಾಯಕ, ಗ್ರಾಪಂ ಸದಸ್ಯ ಜಡೆಪ್ಪ, ಪೊಲೀಸ್ ಪೇದೆ ಮಹಾಂತೇಶ ಹಾಗೂ ಇತರೆ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದರು. ಪೋಷಕರಿಂದ ಮುಚ್ಚಳಿಕೆ ಪ್ರಮಾಣ ಪತ್ರ ಬರೆಸಿಕೊಂಡು ಕಾನೂನು ತಿಳಿಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ
ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?
Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ
Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ
Loksabha; ದಿಂಗಾಲೇಶ್ವರ ಶ್ರೀ ಸ್ಪರ್ಧೆಯ ಹಿಂದೆ ಕಾಣದ ಕೈಗಳ ಕೆಲಸವಿದೆ: ಅರವಿಂದ ಬೆಲ್ಲದ್
MUST WATCH
ಹೊಸ ಸೇರ್ಪಡೆ
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ
ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ