ಸೂರ್ಯನಾರಾಯಣ ರೆಡ್ಡಿ ಹುಟ್ಟುಹಬ್ಬದಲ್ಲಿ ಶಾಸಕ ಗಣೇಶ್ ಭಾಗಿ: ರೆಡ್ಡಿ ಅಭಿಮಾನಿಗಳಿಂದ ವಿರೋಧ


Team Udayavani, Dec 5, 2022, 4:38 PM IST

ಸೂರ್ಯನಾರಾಯಣ ರೆಡ್ಡಿ ಹುಟ್ಟುಹಬ್ಬದಲ್ಲಿ ಶಾಸಕ ಗಣೇಶ್ ಭಾಗಿ: ರೆಡ್ಡಿ ಅಭಿಮಾನಿಗಳಿಂದ ವಿರೋಧ

ಕುರುಗೋಡು : ಚುನಾವಣೆಗೆ ಇನ್ನೂ 6 ತಿಂಗಳ ಬಾಕಿ ಇರುವ ನಡುವೆಯೇ ಮಾಜಿ ಶಾಸಕ ನಾರಾ ಸೂರ್ಯನಾರಾಯಣ ರೆಡ್ಡಿ ಕುರುಗೋಡು ಕ್ಷೇತ್ರದಲ್ಲಿ ವಿವಿಧ ದೇವಸ್ಥಾನಗಳಿಗೆ ಪೂಜೆ ಸಲ್ಲಿಸಿ ಹುಟ್ಟುಹಬ್ಬವನ್ನು ಸಾವಿರಾರು ಅಭಿಮಾನಿಗಳ ನಡುವೆ ಅದ್ದೂರಿಯಾಗಿ ಆಚರಣೆ ಮಾಡಿಕೊಂಡಿದ್ದು, ಕುರುಗೋಡು ರಾಜಕೀಯ ಚುನಾವಣೆ ಕಾವು ಜೋರಾಗಿದೆ ಎಂಬಂತೆ ಕಾಣುತ್ತಿದೆ.

ಸೂರ್ಯನಾರಾಯಣ ರೆಡ್ಡಿ ಆಪ್ತ ಪರಮ ಶಿಷ್ಯನಾದ ಹಾಲಿ ಶಾಸಕ ಗಣೇಶ್ ಹಾಗೂ ರೆಡ್ಡಿ ಇವರ ಇಬ್ಬರ ನಡುವೆ ಕೆಲ ತಿಂಗಳಿಂದ ಅಸಮಾಧಾನ ಶುರುವಾಗಿದ್ದು, 2023 ಚುನಾವಣೆಯಲ್ಲಿ ರೆಡ್ಡಿ ರಾಮಸಾಗರ ಬಿ. ನಾರಾಯಣಪ್ಪ ಅವರಿಗೆ ಟಿಕೇಟ್ ನೀಡಿ ಗೆಲ್ಲಿಸಬೇಕು ಎಂಬ ನಿಟ್ಟಿನಲ್ಲಿ ಕುರುಗೋಡಲ್ಲಿ ಹುಟ್ಟುಹಬ್ಬ ಅದ್ದೂರಿಯಾಗಿ ಆಚರಣೆ ಮಾಡಲಾಗಿದೆ ಎಂಬ ವಿಷಯ ಹುಟ್ಟು ಹಬ್ಬದ ಸಂಭ್ರಮಕ್ಕೆ ಬಂದ ಜನರಲ್ಲಿ ಕೇಳಿ ಬಂತು.

ಇನ್ನೂ ಸಾವಿರಾರು ಅಭಿಮಾನಿಗಳಿಂದ ಹಾಗೂ ಮುಖಂಡರಿಂದ ಮಾಜಿ ಶಾಸಕರಿಂದ ವೇದಿಕೆ ಮೇಲೆ ಕೇಕ್ ಕತ್ತಿರಿಸಿ ಸೇವಿಸಿಕೊಂಡ ರೆಡ್ಡಿ ಹಾಲಿ ಶಾಸಕ ಗಣೇಶ್ ಅವರ ಕೇಕ್ ಕತ್ತರಿಸದೆ ಅಭಿಮಾನಿಗಳಿಂದ ಕಟ್ ಮಾಡಿಸಿ ಅವರಿಂದ ಶಾಸಕರಿಗೆ ತಿನಿಸಿದ ಸನ್ನಿವೇಶ ಕಂಡು ಬಂತು.

ಶಾಸಕ ಗಣೇಶ್ ರೆಡ್ಡಿಗೆ ಶುಭಾಶಯಗಳು ತಿಳಿಸಲು ವೇದಿಕೆ ಮೇಲೇರುತಿದ್ದಂತೆ ರೆಡ್ಡಿ ಅಭಿಮಾನಿಗಳು ನಾವು ಶಾಸಕರಿಗೆ ಅಹ್ವಾನ ಮಾಡಿಲ್ಲ ಯಾಕೆ ಬಂದಿದ್ದಾರೆ ಈ ಕಾರ್ಯಕ್ರಮಕ್ಕೆ ಅಂತ ವಿರೋಧ ಮಾಡಿದ ಪ್ರಸಂಗವು ನಡೆಯಿತು.

ಅಲ್ಲದೆ ಕಾರ್ಯಕ್ರಮ ಮುಗಿಯುವ ತನಕ ವೇದಿಕೆ ಮೇಲೆ ಅಭಿಮಾನಿಗಳು ಇತರರು ಹಾಜರಿದ್ದರು ಶಾಸಕ ಗಣೇಶ್ 1 ನಿಮಿಷ ಕೂಡ ವೇದಿಕೆ ಮೇಲೆ ಇರದೆ ವಿಶ್ ಮಾಡಿ ಕೆಳಗಡೆ ಇಳಿದು ಹೊರಟರು ನಂತರ ಶಾಸಕ ಗಣೇಶ್ ಅಭಿಮಾನಿಗಳು ಕೇಕೆ ಹಾಕುತ್ತಾ ಹೊರಗಡೆ ಸಾಗಿದರು.

ಕಾರ್ಯಕ್ರಮದಲ್ಲಿ ಸೂರ್ಯನಾರಾಯಣ ರೆಡ್ಡಿ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡುವ ವೇಳೆ ಸಿರುಗುಪ್ಪ ಮಾಜಿ ಶಾಸಕ ಹಾಗೂ ಬೇರೆ ಬೇರೆಯವರ ಹೆಸರು ಹೇಳಿದರು ಶಿಷ್ಯ ಶಾಸಕ ಗಣೇಶ್ ಅವರ ಹೆಸರು ಹೇಳದೆ ಭಾಷಣ ಮಾಡಿದ್ದು ಕಂಡು ಬಂತು.

ಇನ್ನೂ ಮಾದ್ಯಮದವರು ಕೇಳಿದ ಪ್ರೆಶ್ನೆಗೆ ರೆಡ್ಡಿ ಶಾಸಕ ಗಣೇಶ್ ಅವರ ಬಗ್ಗೆ ನೋ ಕಾಮೆಂಟ್ ಎಂದು ಉತ್ತರಿಸಿದರು.

2004 ರಲ್ಲಿ ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ಯಾವ ರೀತಿ ನನ್ನ ಜೊತೆ ಇದ್ರೋ ಅದೇ ರೀತಿ ಕೂಡ ಈಗಲೂ ನನ್ನ ಮೇಲೆ ಇಟ್ಟ ಪ್ರೀತಿ ವಿಸ್ವಾಸ ನಾನು ಎಂದಿಗೂ ಮರೆಯುವುದಿಲ್ಲ. ಇವತ್ತು ಇಷ್ಟೊಂದು ಜನ ಸಂಖ್ಯೆ ನೋಡಿದ್ರೆ ನಾನು ಶಾಸಕನಾಗಿದ್ದಾಗ ಮತ್ತು ಯಾವ ಮುಖ್ಯ ಮಂತ್ರಿ, ಸಚಿವರು, ಶಾಸಕರ ಕಾರ್ಯಕ್ರಮದಲ್ಲಿ ಕೂಡ ನೋಡಿಲ್ಲ ಅಂತ ಜನ ಸಂಖ್ಯೆಯಲ್ಲಿ ಸೇರಿದ್ದೀರಿ, ಯಾವತ್ತೂ ಅಧಿಕಾರ, ಹಣ ಮುಖ್ಯವಲ್ಲ ಜನರ ಪ್ರೀತಿ ವಿಸ್ವಾಸ, ವಾತ್ಸಲ್ಯ ಮುಖ್ಯ ಆದ್ದರಿಂದ ಸದಾ ಇದೆ ರೀತಿ ನಿಮ್ಮ ಪ್ರೀತಿ ಇರಲಿ ಎಂದು ಹರ್ಷ ವ್ಯಕ್ತಪಡಿಸಿದರು. ಅಲ್ಲದೆ ಕುರುಗೋಡು ಜನತೆ ಜೊತೆಗೆ ನಾನು ಯಾವಾಗಲು ಇರುತ್ತೀನಿ ಎಂದು ಭರವಸೆ ನೀಡಿದರು.

ಬೆಳಿಗ್ಗೆಯಿಂದ ಕುರುಗೋಡು ಶ್ರೀ ದೊಡ್ಡಬಸವೇಶ್ವರ ದೇವಸ್ಥಾನದಲ್ಲಿ ವಿಶೇಷ ಅಭಿಷೇಕ, ಪೂಜೆ ಕಾರ್ಯಗಳು ನೆರೆವೇರಿಸಿದರು. ನಂತರ ಶ್ರೀ ಆಂಜನೇಯ ಸ್ವಾಮಿ ಪೂಜೆ, ಸುಂಕ್ಲಮ್ಮ ದೇವಿಗೆ ವಿಶೇಷ ಪೂಜೆ, ಯಲ್ಲಾಪುರ ಕ್ರಾಸ್ ನ ಖಾದರ ಲಿಂಗ ತಾತ ಪೂಜೆ, ಶ್ರೀ ಸಿರಿಡಿ ಸಾಯಿಬಾಬಾ ಗೆ ಪೂಜೆ, ತದ ನಂತರ ಬಾದನಹಟ್ಟಿ ಗ್ರಾಮದ ಉಡುಸಲಮ್ಮ ದೇವಿಗೆ ಪೂಜೆ ಸಲ್ಲಿಸಿದರು. ತದನಂತರ ಕುರುಗೋಡು ಸುತ್ತಮುತ್ತ ಎಲ್ಲ ಸಮುದಾಯದ ದೇವಸ್ಥಾನಗಳಿಗೆ ಭೇಟಿ ನೀಡಿ ವೆಶೇಷ ಪೂಜೆ ಸಲ್ಲಿಸಿ ಹರಕೆ ತೀರಿಸಿದರು.

ಪಟ್ಟಣದ ಇಂದಿರಾ ನಗರದಿಂದ ಶ್ರೀ ದೊಡ್ಡಬಸವೇಶ್ವರ ದೇವಸ್ಥಾನಕ್ಕೆ ಮೆರವಣಿಗೆ ಮೂಲಕ ಬಂದು ಅಭಿಮಾನಿಗಳೊಂದಿಗೆ ಕೇಕ್ ಕತ್ತರಿಸಿ ಸಂಭ್ರಮಿಸಿದರು.

ಕುರುಗೋಡು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಮುಖಂಡರು ಹಾಗೂ ಕಾರ್ಯಕರ್ತರು, ಅಭಿಮಾನಿಗಳು, ಶಾಲೆಯ ಮಕ್ಕಳು ರೆಡ್ಡಿಗೆ ಸನ್ಮಾನಿಸಿ ಗೌರವಿಸಿ ಕೇಕ್ ಕತ್ತರಿಸಿದರು.

ಇದನ್ನೂ ಓದಿ: ಭಾರತ ಕ್ರಿಕೆಟ್ ತಂಡದಲ್ಲೂ ಮೀಸಲಾತಿ ನೀಡಬೇಕು: ಚೇತನ್ ಹೇಳಿಕೆಗೆ ಆಕ್ರೋಶ

ಟಾಪ್ ನ್ಯೂಸ್

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ

1-aqweq

Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್‌ ವಿರುದ್ಧ ಮುಖಾಮುಖಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

aaa

ನೇಹಾ ಕಗ್ಗೊಲೆ ಆಕಸ್ಮಿಕ, ವೈಯಕ್ತಿಕ ಸರಕಾರದ ಹೇಳಿಕೆ ವಿವಾದ, ಆಕ್ರೋಶ

1-weweqwe

Globant; ಮನೆಯಿಂದಲೇ 30,000 ಮಂದಿ ಕೆಲಸ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

1-qweqwqe

Ban in Singapore; ಎವರೆಸ್ಟ್‌ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.