ನೀರಿನ ಘಟಕ ನನೆಗುದಿಗೆ-ಪರದಾಟ
ಕುಡುತಿನಿಯಲ್ಲಿ ಬೇಸಿಗೆ ಮುನ್ನವೇ ನೀರಿಗೆ ಬರ
Team Udayavani, Apr 24, 2020, 12:20 PM IST
ಕುರಗೋಡು: ಕುಡುತಿನಿಯ 6 ಮತ್ತು 19ನೇ ವಾರ್ಡಿನಲ್ಲಿ ನೀರು ಇಲ್ಲದ ಕಾರಣ ಅಲ್ಲಿನ ಜನರು ಬೇರೆ ವಾರ್ಡಿನ ಘಟಕಕ್ಕೆ ಮುಗಿಬಿದ್ದಿರುವುದು
ಕುರುಗೋಡು: ಕುಡುತಿನಿಯ 6 ಮತ್ತು 19ನೇ ವಾರ್ಡಿನಲ್ಲಿ ಸಮರ್ಪಕವಾಗಿ ನೀರು ದೊರಕದೆ ಅಲ್ಲಿನ ಜನರು ಹೈರಾಣಾಗಿದ್ದಾರೆ. ನಿತ್ಯ ಬೇರೆ ಬೇರೆ ವಾರ್ಡಿಗೆ ಅಥವಾ ಖಾಸಗಿ ಶುದ್ಧ ನೀರಿನ ಘಟಕಗಳಿಗೆ ತೆರಳಿ ಹಣ ಕೊಟ್ಟು ನೀರು ಖರೀದಿ ಮಾಡಬೇಕಾದ ಪರಿಸ್ಥಿತಿ ಇದೆ.
ಲಾಕ್ ಡೌನ್ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಬಂದೋಬಸ್ತ್ ವಿಧಿಸಲಾಗಿದ್ದು 6 ಮತ್ತು 19ನೇ ವಾರ್ಡಿನ ಜನರಿಗೆ ನೀರು ತರುವುದೇ ಕಷ್ಟಕರವಾಗುತ್ತಿದೆ. 3 ವರ್ಷಗಳ ಹಿಂದೆ ಎನ್ ಎಂಡಿಸಿ ಮತ್ತು ಪಪಂ ವತಿಯಿಂದ 6 ಮತ್ತು 19ನೇ ವಾರ್ಡಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಮಾಡಲಾಗಿತ್ತು. 6ನೇ ವಾರ್ಡಿನಲ್ಲಿರುವ ಘಟಕ ಕೆಲ ದಿನ ಕಾರ್ಯನಿರ್ವಹಿಸಿ ನಂತರ ನನೆಗುದಿಗೆ ಬಿದ್ದಿದೆ. 19ನೇ ವಾರ್ಡಿನ ಘಟಕ ನಿರುಪಯುಕ್ತಗೊಂಡಿದೆ. ಈ ಎರಡು ವಾರ್ಡ್ಗಳಿಗೆ ಸದ್ಯ ನೀರು ಸಿಗದಿದ್ದರಿಂದ ಜನರು ನಿತ್ಯ ಪರದಾಡುತ್ತಿದ್ದಾರೆ.
6 ಮತ್ತು 19ನೇ ವಾರ್ಡಿನಲ್ಲಿ ಸಮರ್ಪಕವಾಗಿ ನೀರು ಇಲ್ಲದೆ ಜನ ನಿತ್ಯ ಪರದಾಡುತ್ತಿದ್ದಾರೆ. ಅಧಿಕಾರಿಗಳು ಎಚ್ಚೆತ್ತುಕೊಂಡು ನೀರು ಒದಗಿಸದಿದ್ದರೆ ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯ.
ಟಿ.ಕೆ. ಕಾಮೇಶ, ಮುಖಂಡ
ಮೋಟಾರ್ ಸಮಸ್ಯೆಯಿಂದ 6ನೇ ವಾರ್ಡಿನ ನೀರಿನ ಘಟಕವನ್ನು ಎರಡು ದಿನದಲ್ಲಿ ವ್ಯವಸ್ಥೆ ಮಾಡಿಕೊಡಲಾಗುವುದು. 19ನೇ ವಾರ್ಡಿನ ಘಟಕ ಲ್ಯಾಂಡ್ ಆರ್ಮಿಗೆ ಸಂಬಂಧಿಸಿದ್ದು ಅವರಿಗೆ ನೋಟಿಸ್ ನೀಡಿ ವ್ಯವಸ್ಥೆ ಮಾಡಿಕೊಡಲು ತಿಳಿಸಲಾಗಿದೆ. 19ನೇ ವಾರ್ಡಿನ ಘಟಕ ಪಪಂ ವ್ಯಾಪ್ತಿಗೆ ಒಳಪಟ್ಟಿಲ್ಲ. ನಮ್ಮ ವ್ಯಾಪ್ತಿಗೆ ಒಳಪಡಿಸಿದ ದಿನವೇ ಜನರಿಗೆ ಅನುಕೂಲ ಮಾಡಿಕೊಡಲಾಗುವುದು.
ಹಿಮಾಮ್ ಸಾಹೇಬ್,
ಕುಡುತಿನಿ ಪಪಂ ಮುಖ್ಯಾಧಿಕಾರಿ
ಸುಧಾಕರ್ ಮಣ್ಣೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Loksabha; ದಿಂಗಾಲೇಶ್ವರ ಶ್ರೀ ಸ್ಪರ್ಧೆಯ ಹಿಂದೆ ಕಾಣದ ಕೈಗಳ ಕೆಲಸವಿದೆ: ಅರವಿಂದ ಬೆಲ್ಲದ್
Phone Tapping; ತನಿಖೆಯಿಂದ ಸತ್ಯ ಬಯಲು: ಎಂ.ಬಿ.ಪಾಟೀಲ್
Bellary; ಕಾಂಗ್ರೆಸ್ ಏನೇ ಹಾರಾಟ ಮಾಡಿದರೂ ನಮಗೆ ಲಾಭ ಆಗುತ್ತದೆ: ವಿಜಯೇಂದ್ರ
Election ಬಳಿಕ ಕಾಂಗ್ರೆಸ್ ನವರು ಕೌರವರಾಗ್ತಾರೆ, ಬಿಜೆಪಿಯವರು ಪಾಂಡವರಾಗ್ತಾರೆ: ಶ್ರೀರಾಮುಲು
Ballari; ಗುರು-ಶಿಷ್ಯ ಪರಂಪರೆಗೆ ವೀರಣ್ಣ ಜ್ವಲಂತ ಸಾಕ್ಷಿ