ಹೂಳೆತ್ತಿದ ಕೆರೆಗಳಿಗೆ ಬಂತು ಮರುಜೀವ
10 ವರ್ಷಗಳಿಂದ ನೀರಿಲ್ಲದೇ ಬರಡಾಗಿದ್ದ ಕೆರೆ
Team Udayavani, Oct 28, 2020, 4:49 PM IST
ಕೂಡ್ಲಿಗಿ: ಮಳೆಗಾಲದಲ್ಲಿ ನೀರು ಸಂಗ್ರಹವಾಗದೆ ಪಾಳು ಬಿದ್ದಂತಾಗಿದ್ದ ಕೆರೆಗೆ ಲಾಕ್ಡೌನ್ ಅವ ಧಿಯಲ್ಲಿ ಹೂಳೆತ್ತಿಸಿದ ಪರಿಣಾಮ ಜೀವಸೆಲೆ ಬಂದಿದೆ.
ತಾಲೂಕಿನ ಹೋಬಳಿಯ ಅಡಿಯಲ್ಲಿ ಗುಡೇಕೋಟೆ ಮತ್ತು ರಾಮದುರ್ಗಾ ಕೆರೆಗಳು ತುಂಬಿ ಹರಿಯುತ್ತಿರುವುದರಿಂದಜೀವರಾಶಿಗಳ ಸಂಕುಲಕ್ಕೆಮರುಜೀವ ಬಂದಾತಾಗಿದೆ. ಕೆರೆ ತುಂಬಿರುವುದರಿಂದ ನೂರಾರುಹೆಕ್ಟೇರ್ ಪ್ರದೇಶ ಹಸನಾಗಲುಸಾಧ್ಯವಾಗುತ್ತಿದೆ. ಸುಮಾರು 10ವರ್ಷಗಳಿಂದ ಕೆರೆಗೆ ನೀರೆ ಇಲ್ಲದೇ ಬರಡು ಭೂಮಿಯಂತೆ ಕಾಣುತ್ತಿದ್ದ ಕೆರೆ ಹೂಳೆತ್ತುವ ಮೂಲಕ ಮಳೆಗಾಲದಲ್ಲಿ ಜೀವ ಸೆಲೆ ಸೆಳೆದಂತಾಗಿದೆ.
ಬಹುತೇಕ ಹಳ್ಳಿಗಳಲ್ಲಿ ಮಳೆ ಇಲ್ಲದೇ ಪರದಾಡುವ ಪರಿಸ್ಥಿತಿನಿರ್ಮಾಣವಾಗಿತ್ತು. ಆದರೆ ಕಳೆದ ಸುಮಾರು ಆರು ತಿಂಗಳು ಕಳೆದುವಲಸೆ ಹೋದ ಜನರು ಮರಳಿಗೂಡಿನತ್ತ ದಾಪುಗಾಲು ಹಾಕಿದ್ದರು. ಕೆಲಸವಿಲ್ಲವೆಂದು ಸುಮ್ಮನೆ ಕೂಡದೆ ಕೆರೆ ಅಭಿವೃದ್ಧಿಗೆ ಕೈಹಾಕಿ ಹೂಳು ತೆಗೆದರು.
ಉದ್ಯೋಗ ಖಾತ್ರಿ ಆಸರೆ: ಗುಡೇಕೊಟೆ ಹೋಬಳಿ ಕೆರೆ ಹೂಳೆತ್ತುವ ಉದ್ದೇಶದಿಂದ ಅಂದಾಜು 60 ಲಕ್ಷ ರೂ. ಮೊತ್ತದಲ್ಲಿ 1300 ಜನರಿಗೆ ಕೆಲಸ ನೀಡಿದ್ದರಿಂದ ಬತ್ತಿದ ಕೆರೆಯಲ್ಲಿ ನೀರು ಸಂಗ್ರಹಣೆಯಾಗಿ ಕೋಡಿ ಬಿದ್ದಿದೆ.
ಕೆರೆಯಿಂದ ಲಾಭ: ಗುಡೇಕೊಟೆ ಹೋಬಳಿ ಕೆರೆ ತುಂಬಿರುವುದಕ್ಕೆ ರೈತರು ಖುಷಿ ಆಗಿದ್ದಾರೆ. ಕೆರೆ ಕೆಳಭಾಗದಲ್ಲಿ ಅಚ್ಚುಕಟ್ಟುದಾರರಿಗೆ ನೀರು ಕೋಡುತ್ತೇವೆ. ಶೇ. 50ರಿಂದ60% ನೀರು ಚೆಕ್ ಡ್ಯಾಂನಲ್ಲಿ ಸಂಗ್ರಹಣೆಯಾಗಿದೆ. ಜಿಲ್ಲಾ ಪಂಚಾಯತ ಅಡಿಯಲ್ಲಿ 21 ಕೆರೆಗಳುಇದ್ದರೆ ಅವುಗಳಲ್ಲಿ ರಾಮದುರ್ಗಾ ಕೆರೆ ಭರ್ತಿಯಾಗಿದ್ದು, 9 ಕೆರೆಗಳು ಭಾಗಶಃ ಶೇ. 40ರಷ್ಟು ತುಂಬಿವೆ. ಇನ್ನುಳಿದ 11 ಕೆರೆಗಳು ಅಲ್ಪಸ್ವಲ್ಪ ತುಂಬಿವೆ.
ಹೂಳೆತ್ತುವ ಮೂಲಕ ಕೆರೆಯಲ್ಲಿ ನೀರಿನ ಸಾಮರ್ಥ್ಯ ಹೆಚ್ಚಾಗಿದೆ. ಕೆರೆಯಲ್ಲಿ ನೀರು ನಿಲುಗಡೆಯಿಂದ ಅಂತರ್ಜಲ ಮಟ್ಟ ಹೆಚ್ಚುವುದರಿಂದಈ ಭಾಗದ ರೈತರ ಬೋರವೆಲ್ಗಳುಅಂತರ್ಜಲ ನೀರಿನ ಮಟ್ಟ ಹೆಚ್ಚುಇರುವುದರಿಂದ ತುಂಬ ಖುಷಿಯಿಂದ ರೈತರು ಕೃಷಿ ಚಟುವಟಿಕೆಯಲ್ಲಿತೊಡಗಿದ್ದಾರೆ. – ಜಿ. ಬಸಣ್ಣ, ತಾಪಂ ಕಾರ್ಯನಿರ್ವಹಣಾಧಿಕಾರಿ ಕೂಡ್ಲಿಗಿ
ಕೆರೆಯೊಳಗೆ ಹೂಳು ತುಂಬಿದಾಗ ದನಕರುಗಳಿಗೂ ಕುಡಿಯಲು ನೀರು ಇಲ್ಲದಂತಾಗಿತ್ತು. ಆದರೆ ಇತ್ತೀಚಿಗೆ ಪಂಚಾಯಿತಿಯವರುಈ ಸಲ ಕೆರೆ ಹೂಳೆತ್ತಿಸಿದ್ದರು. ಉತ್ತಮ ಮಳೆ ಬಂದು ಕೆರೆ ಭರ್ತಿಯಾಗಿದೆ. ಅಂರ್ತಜಲ ಮಟ್ಟವೂ ಹೆಚ್ಚಾಗಿದೆ. ವ್ಯವಸಾಯ ಮಾಡಲು ಧೈರ್ಯ ಬಂದೈ. –ಹನುಮಂತಪ್ಪ ಗುಡೇಕೊಟೆ, ರೈತ
–ಕೆ. ನಾಗರಾಜ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ
ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?
Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ
Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ
MUST WATCH
ಹೊಸ ಸೇರ್ಪಡೆ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು
Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ