ಮಂಜಮ್ಮ ಜೋಗತಿ ಆತ್ಮಕಥನ ಕಲಬುರಗಿ ವಿವಿ ಪಠ್ಯಕ್ಕೆ ಆಯ್ಕೆ
Team Udayavani, Mar 6, 2021, 6:18 PM IST
ಹೊಸಪೇಟೆ: ಪದ್ಮಶ್ರೀ ಮಂಜಮ್ಮ ಜೋಗತಿ ಅವರ ಆತ್ಮಕಥನ ಬಿಎಸ್ಸಿ ವಿದ್ಯಾರ್ಥಿಗಳ ಪಠ್ಯಕ್ಕೆ ಆಯ್ಕೆಯಾಗಿದೆ. ತಾಲೂಕಿನ ಮರಿಯಮ್ಮನಹಳ್ಳಿಯ ಪದ್ಮಶ್ರೀಗೆ ಭಾಜನರಾಗಿರುವ ಮಾತಾ ಮಂಜಮ್ಮ ಜೋಗತಿ ಆತ್ಮಕಥೆ ಕಲುಬುರಗಿ ವಿವಿಯ ವಿದ್ಯಾರ್ಥಿಗಳ ಪಠ್ಯಕ್ಕೆ ಆಯ್ಕೆಯಾಗಿದೆ.
“ನಡುವೆ ಸುಳಿವ ಹೆಣ್ಣು’ ಶೀರ್ಷಿಕೆಯಲ್ಲಿ 248 ಪುಟಗಳ ಆತ್ಮಕಥನ ಹೊರತರಲಾಗಿದೆ. ಚೆನ್ನಪಟ್ಟಣದ ಪಲ್ಲವ ಪ್ರಕಾಶನದ ಮೂಲಕ ಪ್ರಕಟಣೆ ಮಾಡಲಾಗಿದ್ದು, ಸದ್ಯ ಈ ಪುಸ್ತಕ ಕಲಬುರಗಿ ವಿವಿ ವ್ಯಾಪ್ತಿಯ ವಿದ್ಯಾರ್ಥಿಗಳ ಬೇಸಿಕ್ ಕನ್ನಡಕ್ಕೆ ಆಯ್ಕೆ ಮಾಡಲಾಗಿದೆ. ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಜೋಳದ್ ಕೂಡ್ಲಿಗಿಯ ಲೇಖಕ ಡಾ| ಅರುಣ್ ಜೋಳದ ಕೂಡ್ಲಿಗಿಯವರು ನಿರೂಪಣೆ ಮಾಡಿದ್ದು, ಸಾಹಿತಿ ಬರಗೂರು ರಾಮಚಂದ್ರಪ್ಪ ಅವರ ಮುನ್ನುಡಿ, ಡಾ| ಸಬೀಹಾ ಭೂಮಿಗೌಡ ಬೆನ್ನುಡಿ ಬರೆದಿದ್ದಾರೆ. ಕಲಬುರಗಿ ವಿವಿ ಬಿಎಸ್ಸಿ ಪದವಿ ವಿದ್ಯಾರ್ಥಿಗಳ ಪಠ್ಯಕ್ಕೆ ಆಯ್ಕೆ ಮಾಡಿಕೊಂಡಿರೋದು ಹೆಮ್ಮೆ ಸಂಗತಿಯಾಗಿದ್ದು, ಆಯ್ಕೆಯಾಗಿದ್ದಕ್ಕೆ ನನಗೆ ಖುಷಿಯಾಗಿದೆ ಎಂದು ಮಂಜಮ್ಮ ಜೋಗತಿ ಸಂತಸ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!
DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?
Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ
Dakshina Kannada: 5 ಸಿಎಪಿಎಫ್/ಕೆಎಸ್ಆರ್ಪಿ ತುಕಡಿ, 3,100 ಸಿಬಂದಿ ನಿಯೋಜನೆ
Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು