ಮಿಷನ್ 150 ಸಂಕಲ್ಪ
2023ರ ಚುನಾವಣೆಗೆ ರಣಕಹಳೆ
Team Udayavani, Apr 18, 2022, 1:02 PM IST
ಬಳ್ಳಾರಿ: 2023ರ ವಿಧಾನಸಭೆ ಚುನಾವಣೆಗೆ ವಿಜಯನಗರ ನೆಲದಲ್ಲಿ “ಮಿಷನ್ 150′ ಕಹಳೆ ಮೊಳಗಿಸಿರುವ ಬಿಜೆಪಿ, ಇದಕ್ಕೆ ಬೇಕಾದ ಸಕಲ ತಯಾರಿಗೂ ಸಲಹೆ- ಸೂಚನೆ ನೀಡಿದೆ. ಮತದಾರರನ್ನು ಹೇಗೆ ತಲುಪಬೇಕೆಂಬ ದಾರಿಯನ್ನೂ ಕಂಡುಕೊಂಡಿದೆ!
ಹೊಸಪೇಟೆ ನಗರದ ಭಟ್ರಳ್ಳಿ ಆಂಜನೇಯ ದೇವಸ್ಥಾನ ಆವರಣದಲ್ಲಿ ಎರಡು ದಿನಗಳ ಕಾಲ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸಾಧನೆ, ಅಭಿವೃದ್ಧಿ ಪರವಾದ ಚಿಂತನೆ ನಡೆಸುವುದರ ಜತೆಗೆ ವಿಪಕ್ಷದ ಜವಾಬ್ದಾರಿಯನ್ನು ನಿಭಾಯಿಸುವಲ್ಲಿ ವಿಫಲವಾದ ಕಾಂಗ್ರೆಸ್ ಪಕ್ಷದ ಧೋರಣೆಯನ್ನು ಖಂಡಿಸಲಾಯಿತು.
ಮುಂದಿನ 2023ರ ಚುನಾ ವಣೆಗೆ ರೂಪಿಸಬೇಕಾದ ಸಿದ್ಧತಾ ಕಾರ್ಯತಂತ್ರಗಳು, ಇನ್ನಿತರೆ ವಿಷಯಗಳ ಕುರಿತು ಚರ್ಚಿಸಿ ನಿರ್ಣಯ ಕೈಗೊಳ್ಳಲಾಯಿತು. ಪ್ರಧಾನಿ ನರೇಂದ್ರ ಮೋದಿ ಈಚೆಗೆ ನಡೆದ ಐದು ರಾಜ್ಯಗಳ ಪೈಕಿ ನಾಲ್ಕರಲ್ಲಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ಅಲ್ಲಿ ಚುನಾವಣೆ ಎದುರಿ ಸಲು ಮಾಡಿಕೊಂಡಿದ್ದ ತಂತ್ರಗಾರಿಕೆ ಮತ್ತು ಅಭಿವೃದ್ಧಿ ಕಾರ್ಯಗಳಿಂದಲೇ ಗೆಲುವು ಸಾಧ್ಯ ಎಂಬ ಸಂದೇಶ ರವಾನಿಸಲಾಯಿತು.
ವಿಪಕ್ಷಗಳ ವಿರೋಧವಿ ದ್ದರೂ ಅದನ್ನು ಸಕಾರಾತ್ಮಕವಾಗಿ ಮಾಡಿಕೊಳ್ಳುವ ಬಗ್ಗೆ ಚರ್ಚಿಸಲಾಗಿದ್ದು, ಉಕ್ರೇನ್ ಯುದ್ಧ ಭೂಮಿಯಿಂದ 22 ಸಾವಿರ ಜನರನ್ನು ಭಾರತಕ್ಕೆ ಕರೆತರುವುದರ ಜತೆಗೆ ಮೃತಪಟ್ಟ ಏಕೈಕ ವಿದ್ಯಾರ್ಥಿಯ ಮೃತದೇಹವನ್ನು ಸಹ ಭಾರತಕ್ಕೆ ತಂದು ಕುಟುಂಬಕ್ಕೆ ಒಪ್ಪಿಸುವಲ್ಲಿ ಯಶಸ್ವಿಯಾದ ಮೋದಿ ಕಾರ್ಯ ಅಭಿನಂದಿಸಲಾಯಿತು.
ದೇಶ ಸೇರಿ ರಾಜ್ಯದಲ್ಲಿ ಕಾಂಗ್ರೆಸ್ ಸೃಷ್ಟಿಸುತ್ತಿರುವ ಗೊಂದಲದ ವಾತಾವರಣ, ಓಲೈಕೆ ರಾಜಕಾರಣ, ಅಲ್ಪಸಂಖ್ಯಾತರನ್ನು ಎತ್ತಿಕಟ್ಟಿ ಅಶಾಂತಿ ಸೃಷ್ಟಿಸುತ್ತಿರುವುದಕ್ಕೆ ಖಂಡನೆ ವ್ಯಕ್ತವಾಯಿತು. ಮುಂದಿನ ಚುನಾವಣೆಗೆ ನಮ್ಮ ಸಿದ್ಧತೆ, ಕಾರ್ಯತಂತ್ರ ಗಳು ಹೇಗಿರಬೇಕು. ಯಾವ ರೀತಿ ಚುನಾವಣೆಗಳನ್ನು ಗೆಲ್ಲಬೇಕು. ಬೂತ್ ಮಟ್ಟದ ಕಾರ್ಯಕರ್ತರನ್ನು ಗುರುತಿಸಬೇಕು. ಜನಸಾಮಾನ್ಯರ ಸಂಕಷ್ಟಗಳಿಗೆ ಸ್ಪಂದಿಸಿ, ಅವರೆಲ್ಲರನ್ನೂ ತೃಪ್ತಿ ಪಡಿಸುವ ಕೆಲಸ ಮಾಡಿದರೆ ಮಾತ್ರ ನಮಗೆ ಗೆಲುವು.
ಇಲ್ಲದಿದ್ದಲ್ಲಿ ನಮ್ಮನ್ನು ತಿರಸ್ಕರಿಸಬಹುದು. ಆ ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಜನರ ಪ್ರೀತಿ-ವಿಶ್ವಾಸ ಗಳಿಸುವ ಮೂಲಕ ಚುನಾವಣೆಯನ್ನು ಯಶಸ್ವಿಗೊಳಿಸಬೇಕು ಎಂಬ ಸಂದೇಶ ರವಾನಿಸಿ ಸಂಕಲ್ಪ ತೊಡುವ ಮೂಲಕ ಕಾರ್ಯಕಾರಿಣಿ ಸಭೆಯನ್ನು ಕೊನೆಗೊಳಿಸಲಾಯಿತು.
ಎರಡು ದಿನಗಳ ಕಾಲ ನಡೆದ ಕಾರ್ಯಕಾರಣಿ ಸಭೆಗೆ ಕಾರ್ಯಕರ್ತರು ಅತ್ಯಂತ ಹುಮ್ಮಸ್ಸಿನಿಂದ ಕೈಜೋಡಿಸಿದರು. ಪಕ್ಷದ ಹಿರಿಯ ಮುಖಂಡರ ನಿರ್ದೇಶನಗಳನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದ ಕಾರ್ಯಕರ್ತರು, ಗುರುತಿನ ಚೀಟಿಯಿಲ್ಲದೆ ಯಾರೇ ಕಂಡರೂ, ತಾವ್ಯಾರು? ಐಡಿ ಕಾರ್ಡ್ ಇಲ್ಲ ಎಂದು ಪ್ರಶ್ನಿಸುತ್ತಿದ್ದರು. ಕಾರ್ಯಕಾರಣಿ ಸಭೆಯೊಳಗೆ ಅಪೇಕ್ಷಿತ ವ್ಯಕ್ತಿಗಳನ್ನು ಹೊರತುಪಡಿಸಿ, ಪಕ್ಷದ ಕಾರ್ಯಕರ್ತರು ಸೇರಿ ಯಾರೊಬ್ಬರನ್ನು ಸಹ ಒಳಗೆ ಬಿಡದೆ ತಡೆಯುತ್ತಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ
ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?
Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ
Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ