ಮದ್ಯ ನಿಷೇಧಕ್ಕೆ ಒತ್ತಾಯಿಸಿ ಮನಿ ಆರ್ಡರ್ ಚಳವಳಿ
Team Udayavani, May 20, 2020, 6:34 AM IST
ಹೂವಿನಹಡಗಲಿ: ತಾಲೂಕಿನ ಹಿರೇಹಡಗಲಿ ಗ್ರಾಮದಲ್ಲಿ ಮದ್ಯ ನಿಷೇಧ ಕುರಿತು ಗ್ರಾಮೀಣ ಕೂಲಿ ಕಾರ್ಮಿಕ ಸಂಘಟನೆಯಿಂದ ಮನಿ ಆರ್ಡರ್ ಚಳವಳಿ ನಡೆಯಿತು.
ಗ್ರಾಮೀಣ ಕಾರ್ಮಿಕ ಸಂಘಟನೆ ಮಹಿಳಾ ಸದಸ್ಯರುಗಳು ಮುಖ್ಯಮಂತ್ರಿ ಹೆಸರಿಗೆ ಮನಿ ಆರ್ಡರ್ ಕಳುಹಿಸಿಕೊಟ್ಟು ಸರ್ಕಾರಕ್ಕೆ ಹಣದ ಕೊರತೆ ಇದ್ದಲ್ಲಿ ನಮ್ಮ ಬೆವರಿನ ಹಣ ಕೊಡಲು ನಾವು ಸಿದ್ಧರಿದ್ದೇವೆ. ಆದರೆ ಮದ್ಯದ ಹಣದಿಂದ ರಾಜ್ಯ ನಡೆಸಲು ತಾವು ಮುಂದಾಗದಿರಿ. ಇಂಥ ದುಸ್ಥಿತಿ ರಾಜ್ಯಕ್ಕೆ ಬರಬಾರದು. ರಾಜ್ಯದಲ್ಲಿ ಮದ್ಯಪಾನ ನಿಷೇಧಿಸಿ ಮಹಿಳೆಯರು ಮಕ್ಕಳು ರಾಜ್ಯದ ಜನತೆ ಘನತೆಯಿಂದ ಜೀವಿಸಲು ಆವಕಾಶ ನೀಡಿ ಎಂದು ಮಹಿಳೆಯರು ಮನವಿ ಮಾಡಿದ್ದಾರೆ.
ಸಂಘಟನೆ ಸಂಚಾಲಕ ಶಬ್ಬೀರ್ ಭಾಷಾ, ಉಚ್ಚಂಗೆಮ್ಮ ಚಮನ್, ಕೆಂಚಮ್ಮ, ರತ್ನಮ್ಮ, ನೀಲಮ್ಮ, ಪ್ರೇಮವ್ವ, ಪಕ್ಕೀರವ್ವ ರವಿ ಮುಂತಾದವರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ
ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?
Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ
Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ