ಬತ್ತಿದ ತುಂಗಭದ್ರಾ; ರೈತರಲ್ಲಿ ಆತಂಕ
ಕುರುಗೋಡು: ಮಣ್ಣೂರು, ಸೂಗೂರು ಗ್ರಾಮದ ಪಕ್ಕದಲ್ಲಿರುವ ತುಂಗಭದ್ರಾ ನದಿಯಲ್ಲಿ ನೀರಿಲ್ಲದೆ ಬತ್ತಿ ಹೋಗಿದೆ.
Team Udayavani, May 27, 2019, 7:12 AM IST
ಕುರುಗೋಡು: ತುಂಗಭದ್ರಾ ನದಿ ಬತ್ತಿ ಹೋಗಿದ್ದು, ನದಿ ದಂಡೆಯ ರೈತರು ಆತಂಕಕ್ಕೆ ಒಳಗಾಗಿದ್ದಾರೆ.
ನದಿ ದಂಡೆಯ ಮಣ್ಣೂರು, ಸೂಗೂರು, ಮಣ್ಣೂರು ಕ್ಯಾಂಪ್, ದೊಡ್ಡರಾಜ ಕ್ಯಾಂಪ್, ರುದ್ರಪಾದ,ನಡವಿ, ಮುದ್ದಟನೂರು, ಹಾವಿನಾಳ, ಸಿರಿಗೇರಿ, ಗುಂಡಿಗನೂರು ಗ್ರಾಮದ ರೈತರು ಈಗಾಗಲೇ ಅಲ್ಪ ಸ್ವಲ್ಪ ಭತ್ತದ ನಾಟಿ ಮಾಡಿದ್ದರು. ಸದ್ಯ ಮುಂಗಾರು ಹಂಗಾಮಿನ ಬೆಳೆ ಬೆಳೆಯಲು ಕಾಲುವೆಗಳಿಗೆ ಹಾಗೂ ತುಂಗಭದ್ರಾ ನದಿಯಲ್ಲಿ ನೀರು ಇಲ್ಲದೆ ಬತ್ತಿ ಹೋಗಿದೆ. ಇದರಿಂದ ಮುಂಗಾರು ಬೆಳೆ ಬೆಳೆಯಲು ರೈತರು ಭೂಮಿ ಹದಗೊಳಿಸಿದ್ದಾರೆ. ಇನ್ನೂ ಕಾಲುವೆಗಳಿಗೆ ಹಾಗೂ ನದಿಗೆ ನೀರು ಬಿಟ್ಟರೆ ಸಸಿ ಮಡಿಗಳನ್ನು ಹಾಕಲು ರೈತರು ಕಾಯುತ್ತಿದ್ದಾರೆ.
ಸದ್ಯ ಭತ್ತದ ಬೆಳೆಗಳನ್ನು ಕಟಾವು ಮಾಡಿರುವ ನದಿ ದಂಡೆಯ ರೈತರು ಮರು ಮುಂಗಾರು ಬೆಳೆ ಬೆಳೆಯಲು ಮೇ ತಿಂಗಳಲ್ಲಿ ಸೋನಾ, ನಲ್ಲೂರು ಸೋನಾ, ಗಂಗಾ ಕಾವೇರಿ ಸೇರಿ ವಿವಿಧ ರೀತಿಯ ಭತ್ತದ ಬೀಜಗಳನ್ನು ಹೊರ ತಾಲೂಕಿನಿಂದ ತಂದು ಸಸಿ ಮಡಿ ಹಾಕಿ ಜೂನ್ ತಿಂಗಳಲ್ಲಿ ಭತ್ತದ ಬೆಳೆಯನ್ನು ನಾಟಿ ಮಾಡುವ ಚಟುವಟಿಕೆಯಲ್ಲಿ ತೊಡಗಬೇಕಿದ್ದ ರೈತರು ನದಿಯಲ್ಲಿ ನೀರು ಇಲ್ಲದ ಪರಿಣಾಮ ಸಸಿ ಮಡಿ ಹಾಕಲು ಮುಂದಾಗದಿರುವುದು ಕೃಷಿ ಚಟುವಟಿಕೆಗೆ ಪೆಟ್ಟು ಬಿದ್ದಂತಾಗಿದೆ.
ಇದರ ಸಮಸ್ಯೆ ಅರಿತಿರುವ ಕೆಲ ರೈತರು ಈಗಾಗಲೇ ನದಿಯಲ್ಲಿರುವ ಬಸಿ ನೀರಿಗೆ ಸಸಿ ಮಡಿಗಳನ್ನು ಹಾಕಿ ಸರಿಯಾದ ಸಮಯಕ್ಕೆ ಭತ್ತದ ಬೆಳೆ ನಾಟಿ ಮಾಡಲು ಹರಸಾಹಸ ಪಡುತ್ತಿದ್ದಾರೆ. ಆದರೂ ಹಾಕಿರುವ ಸಸಿ ಮಡಿಗಳು ರೈತರ ಕೈ ಸೇರದೆ ಭತ್ತದ ಬೆಳೆ ಬೆಳೆಯಲು ಕಷ್ಟಕರವಾಗಿದೆ. ಇದರಿಂದ ಹಲವು ರೈತರು ತಮ್ಮ ಜಮೀನುಗಳನ್ನು ಹದಗೊಳಿಸಿ ಹಾಗೆ ಬಿಟ್ಟು ಕಾಲುವೆಗಳಿಗೆ ಮತ್ತು ನದಿಗೆ ನೀರು ಹರಿಸಿದ ಮೇಲೆ ಬೆಳೆಗಳನ್ನು ನಾಟಿ ಮಾಡಿದ್ರೆ ಆಯ್ತು ಅಂತಹ ಭೂಮಿಗಳನ್ನು ಹಾಗೆ ಬಿಟ್ಟಿದ್ದಾರೆ.
ಜನ ಜಾನುವಾರುಗಳಿಗೆ ತೊಂದರೆ: ತುಂಗಭದ್ರಾ ನದಿಯಿಂದ ಗ್ರಾಮದಲ್ಲಿರುವ ಕುಡಿಯುವ ನೀರಿನ ಟ್ಯಾಂಕರ್ಗಳಿಗೆ ನೀರಿನ ಸಂಪರ್ಕ ಹೊಂದಿದ್ದು, ಟ್ಯಾಂಕರ್ನಿಂದ ಗ್ರಾಮದ ಸಾರ್ವಜನಿಕ ನಲ್ಲಿಗಳಿಗೆ ನೀರು ಸರಬರಾಜು ಆಗುತ್ತಿದ್ದು, ನದಿಯಲ್ಲಿ ನೀರು ಬತ್ತಿ ಹೋಗಿದ್ದು, ನೀರಿನ ಬವಣೆ ಜನ, ಜಾನುವಾರುಗಳಿಗೆ ಕಾಡುವ ಸ್ಥಿತಿ ಸಮಿಪಿಸುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ
ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?
Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ
Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ
Loksabha; ದಿಂಗಾಲೇಶ್ವರ ಶ್ರೀ ಸ್ಪರ್ಧೆಯ ಹಿಂದೆ ಕಾಣದ ಕೈಗಳ ಕೆಲಸವಿದೆ: ಅರವಿಂದ ಬೆಲ್ಲದ್
MUST WATCH
ಹೊಸ ಸೇರ್ಪಡೆ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Students Notes: ಸ್ಕ್ರೀನ್ ಶಾರ್ಟ್ಗಳೆಂದು ಪುಸ್ತಕವಾಗದಿರಲಿ
ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ
Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ