ಛಾಯಾಗ್ರಾಹಕರು ಮೊದಲು ಸಂಘಟಿತರಾಗಿ: ಅಶೋಕ್
ಶಿಲ್ಪಿಗಳು ಇತಿಹಾಸವನ್ನು ಉಳಿಸುವುದರಲ್ಲಿ ಪ್ರಮುಖರಾಗಿದ್ದಾರೆ
Team Udayavani, Aug 25, 2022, 2:25 PM IST
ಹಗರಿಬೊಮ್ಮನಹಳ್ಳಿ: ಛಾಯಾಗ್ರಾಹಕರು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದು ಎಲ್ಲರೂ ಸಂಘಟಿತರಾಗುವ ಮೂಲಕ ಸರ್ಕಾರದ ಸೌಲಭ್ಯಗಳು ಪಡೆದುಕೊಳ್ಳಿ ಎಂದು ಪತ್ರಕರ್ತ ಅಶೋಕ್ ಉಪ್ಪಾರ್ ಛಾಯಾಗ್ರಹಕರಿಗೆ ಕರೆ ನೀಡಿದರು.
ಪಟ್ಟಣದ ವಿಶ್ವಕರ್ಮ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ 183ನೇ ಛಾಯಾಗ್ರಹಣ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು. ಛಾಯಾಗ್ರಾಹಕರು ಬರಹಗಾರರು ಹಾಗೂ ಶಿಲ್ಪಿಗಳು ಇತಿಹಾಸವನ್ನು ಉಳಿಸುವುದರಲ್ಲಿ ಪ್ರಮುಖರಾಗಿದ್ದಾರೆ. ಅವರಿಲ್ಲದೆ ಇತಿಹಾಸ ಮುಂದಿನ ಪೀಳಿಗೆಗೆ ಕಾಣಿಕೆಯಾಗಿ ಕೊಡಲು ಸಾಧ್ಯವಿಲ್ಲ ಎಂದರು.
ಹಿರಿಯ ಛಾಯಾಗ್ರಹಕ ಮಹೇಶ್ ಜಿಟ್ಟಿ ಮಾತನಾಡಿ, ಮೊಬೈಲ್ ಹಾವಳಿ ಹಾಗೂ ಡಿಜಿಟಲ್ ಹಿನ್ನೆಲೆಯಲ್ಲಿ ಛಾಯಾಗ್ರಾಹಕರು ಸಾಕಷ್ಟು ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಪೈಪೋಟಿ ನಡುವೆಯೂ ನಾವು ಉಳಿಯಬೇಕಾಗಿದೆ. ಸರ್ಕಾರ ನಮ್ಮ ಬಗ್ಗೆ ಕಾಳಜಿವಹಿಸಿ ಸೌಲಭ್ಯಗಳನ್ನು
ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಹೊಸಪೇಟೆಯ ಖಾಜಾಪೀರ್ ಕಾರ್ಯಕ್ರಮ ಉದ್ಘಾಟಿಸಿ, ಛಯಾಗ್ರಾಹಕರ ಜೀವನ ಮತ್ತು ಶೈಲಿ ಕುರಿತು ಮಾತನಾಡಿದರು. ನಂದಿಪುರದ ಮಹೇಶ್ವರ ಸ್ವಾಮೀಜಿ, ಹಾಲಸ್ವಾಮಿ ಮಠದ ಹಾಲಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಕೆ.ಎಂ. ಶಿವಶಂಕರ್ ಸ್ವಾಮಿ ನಿರ್ವಹಿಸಿದರು. ಕಠಾರೆ ಆಪ್ಟಿಕಲ್ಸ್ನ ಸಿ.ಎ.ಮೋಹನ್, ಬೆಂಗಳೂರಿನ ಪ್ಯಾನಾಸೋನಿಕ್ ಮ್ಯಾನೇಜರ್ ಚೇತನ್, ಬೆಂಗಳೂರಿನ ಚಿನ್ನು ಫೋಟೋ ಬುಕ್ ಮಾಲೀಕ ಮಲ್ಲೇಶ್
ಪಾಟೀಲ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Loksabha; ದಿಂಗಾಲೇಶ್ವರ ಶ್ರೀ ಸ್ಪರ್ಧೆಯ ಹಿಂದೆ ಕಾಣದ ಕೈಗಳ ಕೆಲಸವಿದೆ: ಅರವಿಂದ ಬೆಲ್ಲದ್
Phone Tapping; ತನಿಖೆಯಿಂದ ಸತ್ಯ ಬಯಲು: ಎಂ.ಬಿ.ಪಾಟೀಲ್
Bellary; ಕಾಂಗ್ರೆಸ್ ಏನೇ ಹಾರಾಟ ಮಾಡಿದರೂ ನಮಗೆ ಲಾಭ ಆಗುತ್ತದೆ: ವಿಜಯೇಂದ್ರ
Election ಬಳಿಕ ಕಾಂಗ್ರೆಸ್ ನವರು ಕೌರವರಾಗ್ತಾರೆ, ಬಿಜೆಪಿಯವರು ಪಾಂಡವರಾಗ್ತಾರೆ: ಶ್ರೀರಾಮುಲು
Ballari; ಗುರು-ಶಿಷ್ಯ ಪರಂಪರೆಗೆ ವೀರಣ್ಣ ಜ್ವಲಂತ ಸಾಕ್ಷಿ