ಜೀವನದ ಪಾಠಕ್ಕೆ ಆದ್ಯತೆ ನೀಡಿ: ನಾದಮಣಿ


Team Udayavani, Sep 28, 2018, 3:38 PM IST

bell-2.jpg

ಹಗರಿಬೊಮ್ಮನಹಳ್ಳಿ: “ಮುಟ್ಟು ಮುಟ್ಟೆಂದೇಕೆ ಕೀಳಾಗಿ ಕಾಣುವಿರಿ, ಮುಟ್ಟಲ್ಲವೇ ನಮ್ಮ ಹುಟ್ಟು, ಮುಟ್ಟಲ್ಲವೇ ನಮ್ಮ ಸೃಷ್ಟಿಯ ಹುಟ್ಟು’ ಎಂದು ದೋತಾರಿ ಹಿಡಿದು ನಾದಮಣಿ ನಾಲ್ಕೂರು ಹಾಡಿದ ಗೀತೆಯನ್ನು ಶಾಲಾ, ಕಾಲೇಜು ಮಕ್ಕಳು ಕಣ್ಮುಚ್ಚಿ ವಿಜ್ಞಾನಿಗಳಂತೆ ಆಲಿಸಿದರು. ತಾಲೂಕಿನ ತಂಬ್ರಹಳ್ಳಿಯ ಕಿನ್ನಾಳ್‌ ಪೋರಮಾಂಬೆ ಗುರುಸಿದ್ದಪ್ಪ ಪ್ರೌಢಶಾಲೆ ಆವರಣದಲ್ಲಿ ವಿವೇಕ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ತತ್ವಪದಗಳ ಕಾರ್ಯಕ್ರಮದಲ್ಲಿ ನಾಲ್ಕೂರು ಅವರ ಗೀತೆಗಳು ವಿಶೇಷ ಗಮನ ಸೆಳೆದವು.

ವಿಜ್ಞಾನ ಸಾಕಷ್ಟು ಮುಂದುವರಿದಿದ್ದು, ಮೂಢನಂಬಿಕೆಗಳನ್ನು ಬಿಟ್ಟು ವೈಜ್ಞಾನಿಕ ಮನೋಭಾವ ತಳೆಯಬೇಕು. ಪ್ರಜ್ಞಾವಂತರೇ ಅಸ್ಪೃಶ್ಯತೆ ಜಾರಿ ಮಾಡುತ್ತಿರುವುದನ್ನು ಟೀಕಿಸಿದರು. ಹೆಣ್ಣನ್ನು ವಿಜ್ಞಾನದ ನೋಟದಿಂದ ನೋಡಬೇಕು ಎಂದು ಹಾಡಿನಲ್ಲಿ ಅರ್ಥೈಸಿದರು. ಜಿ.ಎಸ್‌.ಶಿವರುದ್ರಪ್ಪನವರ ಹೂವಿನ ದಳಗಳ ತುಂಬ ಅಮ್ಮಾ ಯಾಕಾ ಇಷ್ಟೊಂದು ದೂಳು ಎಂಬುವ ಗೀತೆ ಪರಿಸರ, ನೀರಿನ ಮೂಲ ಸಂರಕ್ಷಣೆ ಬಗ್ಗೆ ಕಟ್ಟಿಕೊಟ್ಟಿತು. ಜಲ ಮರುಪೂರಣ ಆಗಬೇಕು. ನೀರಿನ ಸೆಲೆಗಳನ್ನು ಉಳಿಸಬೇಕು ಎಂದು ಹೇಳಿದರು. 

ಮೂಡ್ನಕೂಡು ಚಿನ್ನಸ್ವಾಮಿಯವರ ನಮ್ಮ ಎಲುಬಿನ ಹಂದರದೊಳಗ ಮಂದಿರವಿದೆ, ಇಗರ್ಜಿ ಇದೆ ಎಂಬುವ ಹಾಡಿಗೆ ವಿದ್ಯಾರ್ಥಿಗಳು ತಲೆದೂಗಿದರು. ಜಾತಿ ಏಣಿಶ್ರೇಣಿ ವ್ಯವಸ್ಥೆಯನ್ನು ಕೈ ಬಿಡಬೇಕು ಎಲ್ಲರ ಒಂದೇ ಎನ್ನುವ ಮನೋಭಾವ ಹೊಂದಬೇಕು. ಅಕ್ಷರ ಕಲಿತದ್ದು ಎದೆಗೆ ಬೀಳಬೇಕು, ನಮ್ಮ ಬದುಕಿಗೆ ಅನ್ವಯ ಮಾಡಿಕೊಳ್ಳಬೇಕು. ಅಕ್ಷರದಿಂದ ಜ್ಞಾನದ ಅರಿವು ಮೂಡುತ್ತದೆ. ಅರಿವು ಮನುಷ್ಯನನ್ನು ಪ್ರಜ್ಞಾವಂತನ್ನಾಗಿ ಮಾಡುತ್ತದೆ. ಇವೆಲ್ಲವುಗಳನ್ನು ನಮ್ಮ ನಡವಳಿಕೆಗಳನ್ನಾಗಿಸಿಕೊಳ್ಳಬೇಕು. ಇಂದಿನವರು ಅಕ್ಕಮಹಾದೇವಿ, ಬಸವಣ್ಣ, ಸೂಫಿ ಸಂತರ ವಚನಗಳನ್ನು ಜೀವನದ ಪದ್ಧತಿಯಲ್ಲಿ ಅಳವಡಿಸಿಕೊಳ್ಳಬೇಕು. ಮಾನವೀಯತೆ ಮೆರೆಯಬೇಕು. ಬದುಕುವ ಹಕ್ಕನ್ನು ನಿರಾಕರಿಸಬಾರದು ಎಂದರು.

ಸಾವು-ನೋವು, ಹೊಡೆದಾಟಗಳು ಅಮಾನವೀಯವಾಗಿವೆ. ಕ್ರೂರತ್ವವನ್ನು ಬಿಟ್ಟು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಭಾವುಕತನ, ಭಾವನೆಗಳಿಗೆ ಸ್ಪಂದನೆ ಸಿಗಬೇಕು. ಕಲಿಕೆಯಲ್ಲಿ ಜೀವನದ ಪಾಠಕ್ಕೆ ಆದ್ಯತೆ ಹೆಚ್ಚಾಗಬೇಕು. ಪ್ರಾಥಮಿಕ ಹಂತದಲ್ಲಿ ಇರುವ ನಲಿಕಲಿ ಪಠ್ಯದ ಮೂಲ ಉದ್ದೇಶ ತಿಳಿಯಬೇಕು ಎಂದರು.

ತತ್ವಪದಗಳನ್ನು, ಕಲಿಕೆಯಲ್ಲಿ ಅಳವಡಿಸಿಕೊಳ್ಳುವ ರೀತಿ ನೀತಿಗಳ, ಪರಿಸರ ಸಂರಕ್ಷಣೆ, ಜಾತಿ ವ್ಯವಸ್ಥೆ ಬಗ್ಗೆ 2 ಗಂಟೆಗಳ ಕಾಲ ನಾದಮಣಿ ನಾಲ್ಕೂರು ಅವರು ಹಾಡಿದ ಗೀತೆಗಳು ಮಕ್ಕಳನ್ನು ಮಂತ್ರಮುಗ್ದರನ್ನಾಗಿಸಿದ್ದವು. ವಿದ್ಯಾರ್ಥಿ ಪ್ರವೀಣ ಮಾನವೀಯತೆ ಮರೆಯಾಗುತ್ತಿರುವುದರ ಬಗ್ಗೆ ಅತ್ಯಂತ ಬೇಸರದಿಂದ ನುಡಿದು ವ್ಯವಸ್ಥೆ ಬದಲಾವಣೆಗೆ ಪಣ ತೊಡಬೇಕು ಎಂದರು.

ಇದೇ ವೇಳೆ ನಾಲ್ಕೂರು ಅವರ ಗೀತೆಗಳ ಅರ್ಥವನ್ನು ವಿದ್ಯಾರ್ಥಿಗಳು ಭಾವಾರ್ಥದೊಂದಿಗೆ ವಿವರಿಸಿ ಮೆಚ್ಚುಗೆಗೆ ಪಾತ್ರರಾದರು. ಜಂಗಮ ಫಕೀರರ ಪಡಸಾಲೆಯ ಪತ್ರೇಶ್‌ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಅಕ್ಕಿ ಶಿವಕುಮಾರ್‌, ಜಿಪಂ ಮಾಜಿ ಸದಸ್ಯ ನಾಗನಗೌಡ್ರು, ಪ್ರಾಂಶುಪಾಲ ಸತೀಶ, ಮುಖ್ಯ ಶಿಕ್ಷಕ ಕೆ.ವಿ.ಲೋಕೇಶ್‌, ವಿವೇಕ ಬಳಗದ ಬಿ.ಶ್ರೀನಿವಾಸ, ಜೆ.ಶಶಿಕಾಂತ, ಟಿ.ವಿಠ್ಠಲ, ಕೊಳ್ಳಿ ಗಿರೀಶ್‌, ಸತೀಶ್‌ಗೌಡ, ಪ್ರೇಮಾನಂದರೆಡ್ಡಿ, ಗ್ರಾಪಂ ಸದಸ್ಯ ಸೊಬಟಿ ಹರೀಶ, ಎಣ್ಣೆ ಬೀಜ ಬೆಳೆಗಾರರ ಸಂಘದ ನಿರ್ದೇಶಕ ಚಮನ್‌ಸಾಬ್‌, ಬಂಡೇ ರಂಗನಾಥ ದೇವಸ್ಥಾನ ಸಮಿತಿ ಅಧ್ಯಕ್ಷ ಕಡ್ಡಿ ಚನ್ನಬಸಪ್ಪ, ಯುವಕವಿ ಮೈಲಾರ ಮಂಜುನಾಥ್‌ ಇದ್ದರು. ಶಿಕ್ಷಕ ಎಂ.ಎಸ್‌. ಕಲಗುಡಿ, ಕೊಟ್ರಾಗೌಡ ನಿರೂಪಿಸಿದರು. 

ಟಾಪ್ ನ್ಯೂಸ್

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

13

Politics: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಮುಸ್ಲಿಂ ಮೂಲಭೂತವಾದಿಗಳು ಹೆಚ್ಚಳ; ಅಶೋಕ್‌

1-qeqeqwe

Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ

1-aaa-1

Rain; ರಾಜ್ಯದ ವಿವಿಧೆಡೆ ಸಿಡಿಲಬ್ಬರದ ಮಳೆ; ಕುಷ್ಟಗಿಯಲ್ಲಿ ರೈತ ಬಲಿ, ಅಪಾರ ನಷ್ಟ

1-weewqewqe

LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ

crime (2)

Bengaluru: ಪಾರ್ಕ್ ನಲ್ಲಿ ಹಾಡಹಗಲೇ ಜೋಡಿಯ ಬರ್ಬರ ಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದಿಂಗಾಲೇಶ್ವರ ಶ್ರೀ ಸ್ಪರ್ಧೆಯ ಹಿಂದೆ ಕಾಣದ ಕೈಗಳ ಕೆಲಸವಿದೆ: ಅರವಿಂದ ಬೆಲ್ಲದ್

Loksabha; ದಿಂಗಾಲೇಶ್ವರ ಶ್ರೀ ಸ್ಪರ್ಧೆಯ ಹಿಂದೆ ಕಾಣದ ಕೈಗಳ ಕೆಲಸವಿದೆ: ಅರವಿಂದ ಬೆಲ್ಲದ್

Phone Tapping; ತನಿಖೆಯಿಂದ ಸತ್ಯ ಬಯಲು: ಎಂ.ಬಿ.ಪಾಟೀಲ್‌

Phone Tapping; ತನಿಖೆಯಿಂದ ಸತ್ಯ ಬಯಲು: ಎಂ.ಬಿ.ಪಾಟೀಲ್‌

ವಿಜಯೇಂದ್ರ

Bellary; ಕಾಂಗ್ರೆಸ್ ಏನೇ ಹಾರಾಟ ಮಾಡಿದರೂ ನಮಗೆ ಲಾಭ ಆಗುತ್ತದೆ: ವಿಜಯೇಂದ್ರ

ಚುನಾವಣೆ ಬಳಿಕ ಕಾಂಗ್ರೆಸ್ ನವರು ಕೌರವರಾಗ್ತಾರೆ, ಬಿಜೆಪಿಯವರು ಪಾಂಡವರಾಗ್ತಾರೆ: ಶ್ರೀರಾಮುಲು

Election ಬಳಿಕ ಕಾಂಗ್ರೆಸ್ ನವರು ಕೌರವರಾಗ್ತಾರೆ, ಬಿಜೆಪಿಯವರು ಪಾಂಡವರಾಗ್ತಾರೆ: ಶ್ರೀರಾಮುಲು

Ballari; ಗುರು-ಶಿಷ್ಯ ಪರಂಪರೆಗೆ ವೀರಣ್ಣ ಜ್ವಲಂತ ಸಾಕ್ಷಿ

Ballari; ಗುರು-ಶಿಷ್ಯ ಪರಂಪರೆಗೆ ವೀರಣ್ಣ ಜ್ವಲಂತ ಸಾಕ್ಷಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

accident

Bramavara; ಹೆದ್ದಾರಿಯಲ್ಲಿ ಭೀಕರ ಅಪಘಾತ: ಲಾರಿಗೆ ಸಿಲುಕಿ ಬೈಕ್ ಸವಾರ ದುರ್ಮರಣ

D. K. Shivakumar: ಡಿಕೆಶಿ ರಕ್ಷಿಸಲೆಂದೇ ಸಿಬಿಐಗೆ ನೀಡಿದ್ದ ಅನುಮತಿ ವಾಪಸ್‌

D. K. Shivakumar: ಡಿಕೆಶಿ ರಕ್ಷಿಸಲೆಂದೇ ಸಿಬಿಐಗೆ ನೀಡಿದ್ದ ಅನುಮತಿ ವಾಪಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.