ರೈತರ ಭೂಮಿಗೆ ಸೂಕ್ತ ಪರಿಹಾರ ನೀಡಿ
Team Udayavani, Oct 22, 2019, 2:35 PM IST
ಸಂಡೂರು: ಮಳೆ ಇಲ್ಲದೆ ರೈತರು ಧೂಳಿನಿಂದ ಸಂಕಷ್ಟ ಅನುಭವಿಸಿದರೆ, ಈಗ ಮಳೆ ಬಂದು ಗಣಿ ಪ್ರದೇಶದ ಚೆಕ್ ಡ್ಯಾಂ ಗಳು ಒಡೆದು ತಾಲೂಕಿನ ಭುಜಂಗನಗರ ಗ್ರಾಮದ ರೈತರ ನೂರಾರು ಎಕರೆ ಭೂಮಿ ಗಣಿ ಮಣ್ಣಿನಿಂದ ಮುಚ್ಚಿದ್ದು ಸೂಕ್ತ ಪರಿಹಾರ ಕೊಡಬೇಕು ಎಂದು ತಾಲೂಕು ರೈತ ಸಂಘದ ಅಧ್ಯಕ್ಷ ಬಿ.ಎಂ. ಉಜ್ಜಿನಯ್ಯ ಒತ್ತಾಯಿಸಿದರು.
ಅವರು ತಾಲೂಕಿನ ಭುಜಂಗನಗರ ಗ್ರಾಮದಹಿಂಭಾಗದಲ್ಲಿ ನದೀಂ ಗಣಿ ಕಂಪನಿ ಮತ್ತು ಎನ್ ಎಂಡಿಸಿ ಗಣಿ ಕಂಪನಿಗಳ ಚೆಕ್ ಡ್ಯಾಂ ಮತ್ತು ಸ್ಲರಿ ಸಂಗ್ರಹ ಕೇಂದ್ರಗಳು ಒಡೆದ ಪರಿಣಾಮ ವಿಪರೀತ ನಷ್ಟಕ್ಕೆ ರೈತರು ಒಳಗಾಗಿದ್ದಾರೆ, ಗಣಿ ಕಂಪನಿಗಳಿಗೆ ಈ ಹಿಂದಿನ ವರ್ಷವೂ ಸಹ ಎಚ್ಚರಿಕೆಯನ್ನು ನೀಡಲಾಗಿತ್ತು. ಅದರೆ ಅದನ್ನು ಲೆಕ್ಕಿಸದ ಕಂಪನಿಗಳು ಇಂದು ರೈತರ ಕೈಗೆ ಬಂದ ಬೆಳೆ ಮಣ್ಣು ಪಾಲಾಗುವಂತೆ ಮಾಡಿದ್ದಾರೆ.
ಅಲ್ಲದೆ ಈ ಹಿಂದೆ ಎನ್ಎಂಡಿಸಿ ಗಣಿ ಕಂಪನಿಯವರ ಸ್ಲರಿ ಡ್ಯಾಂ ಒಡೆದು ಇಡೀ ಭುಜಂಗನಗರ ರೈತರ ಭೂಮಿಗಳಬೆಳೆ ಮತ್ತು ಬೋರುಗಳೂ ಸಹ ಮುಚ್ಚಿಕೊಂಡು ಹೋಗಿದ್ದವು, ಖುದ್ದು ಕೃಷಿ ಇಲಾಖೆಯೂ ಸಹ ಅಪಾರ ನಷ್ಟದ ವರದಿ ಕೊಟ್ಟರೂ, ಎಸ್.ಆರ್.ಹಿರೇಮಠ ಅವರು ಹೋರಾಟ ಮಾಡಿದರೂ ಸಹ ಸರಿಯಾದ ಪ್ರತಿಫಲ, ಪರಿಹಾರವನ್ನು ಕೊಡಲಿಲ್ಲ, ಈಗ ಅದೇ ರೀತಿಯಲ್ಲಿ ಮತ್ತೂಮ್ಮೆ ನಷ್ಟಕ್ಕೆ ರೈತರುಸಿಲುಕಿದ್ದಾರೆ. ಅವರಿಗೆ ತಕ್ಷಣ ಪರಿಹಾರ ಕೊಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ಶಿವಕುಮಾರ್, ಕೃಷಿ ಅ ಧಿಕಾರಿ ನಾಗರಾಜ ಅವರು ಪ್ರತಿಕ್ರಿಯಿಸಿ ಇಲಾಖೆಯಿಂದ ತಕ್ಷಣ ನಷ್ಟದ ಪ್ರಮಾಣವನ್ನು ಸರ್ವೇ ಮಾಡಿ ಯಾರ ಜಮೀನಿನಲ್ಲಿಯಾವ ಬೆಳೆಗಳು ನಷ್ಟಕ್ಕೆ ಗುರಿಯಾಗಿವೆ, ಎಷ್ಟು ಪ್ರಮಾಣದಲ್ಲಿ ಎಂಬುದನ್ನು ಗುರುತಿಸಿ ಪರಿಹಾರಕ್ಕೆ ಗಣಿ ಕಂಪನಿಗಳ ಮಾಲೀಕರನ್ನು ನೇರವಾಗಿಕರೆದು ಚರ್ಚಿಸಿ ಪರಿಹಾರದ ಸೂಕ್ತ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಭರವಸೆಯನ್ನುನೀಡಿದರು. ಈ ಸಂದರ್ಭದಲ್ಲಿ ಭುಜಂಗನಗರ ಗ್ರಾಮದ ರೈತರು, ರೈತ ಸಂಘದ ಅದ್ಯಕ್ಷರು, ಪದಾಧಿಕಾರಿಗಳು, ಅಧಿಕಾರಿಗಳು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bellary; ಮೌಲ್ಯಮಾಪನ ಕೇಂದ್ರದಲ್ಲಿ ಹೃದಯಾಘಾತದಿಂದ ಉಪನ್ಯಾಸಕ ಸಾವು
ಸಂಡೂರು: ಸದೃಢ ದೇಶ ನಿರ್ಮಾಣಕ್ಕಾಗಿ ಮೋದಿ ಬೆಂಬಲಿಸಿ-ಶ್ರೀರಾಮುಲು
Bellary; ಮಾಜಿ ಮೇಯರ್ ಮಗನಿಂದ ಹಲ್ಲೆಗೊಳಗಾಗಿದ್ದ ಯುವಕ ಚಿಕಿತ್ಸೆ ಫಲಿಸದೆ ಸಾವು
Bellary: ತಡರಾತ್ರಿ ಸರಣಿ ಕಳ್ಳತನ; ಎಂಟು ಮನೆಗಳಿಗೆ ನುಗ್ಗಿದ ಕಳ್ಳರು
Bellary; ಲೋಕಸಭೆ ಟಿಕೆಟ್ ಮೂಲಕ ಅಜ್ಞಾತವಾಸದಿಂದ ಹೊರ ಬಂದಂತಾಗಿದೆ: ಶ್ರೀರಾಮುಲು
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ