ಮಳೆಗೆ ತೊಯ್ದು ತೊಪ್ಪೆಯಾದ ಬೆಳೆ
Team Udayavani, Nov 6, 2021, 2:02 PM IST
ಕಂಪ್ಲಿ: ತಾಲ್ಲೂಕಿನ ಪಟ್ಟಣವೂ ಸೇರಿದಂತೆ ಕೆಲವು ಗ್ರಾಮಗಳಲ್ಲಿ ಕಳೆದ ಎರಡು ದಿನಗಳಿಂದ ಅನಿರೀಕ್ಷಿತವಾಗಿ ಆಗಾಗ ಮಳೆಯಾಗುತ್ತಿದ್ದು ಈ ಮಳೆಯಿಂದ ಕೊಯ್ಲು ಮಾಡಿ ಹಾಕಿರುವ ವಾಣಿಜ್ಯ ಬೆಳೆಯಾದ ಒಣಮೆಣಸಿನಕಾಯಿ ಮತ್ತು ಭತ್ತದ ರಾಶಿಗಳು ತೋಯ್ದು ತೊಪ್ಪೆಯಾಗಿದ್ದು ಅನ್ನದಾತರು ಆತಂಕಕ್ಕೊಳಗಾಗಿದ್ದಾರೆ.
ತಾಲೂಕಿನ ಮೆಟ್ರಿ ಗ್ರಾಮದಲ್ಲಿ ಭಾರಿ ಪ್ರಮಾಣದ ಮಳೆಯಾಗಿದ್ದು, ಗ್ರಾಮದ ಗ್ರಾಪಂ ಮುಂಭಾಗದ ವಿಶಾಲವಾದ ಮೈದಾನದಲ್ಲಿ ವಾಣಿಜ್ಯ ಬೆಳೆಯಾದ ಒಣಮೆನಸಿನಕಾಯಿಗಳನ್ನು ಕೊಯ್ಲು ಮಾಡಿ ಒಣಗಲು ಹಾಕಿದ್ದಾರೆ. ಆದರೆ ಏಕಾಏಕಿ ಭಾರಿ ಪ್ರಮಾಣದಲ್ಲಿ ಮಳೆ ಸುರಿದಿದ್ದರಿಂದ ಒಣಗಲು ಹಾಕಿದ್ದ ಮೆಣಸಿನಕಾಯಿಗಳು ಮಳೆ ನೀರಿಗೆ ಹರಿದುಕೊಂಡು ಹೋಗಿವೆ.
ಆದರೆ ಮೆಟ್ರಿ ಗ್ರಾಮವನ್ನು ಹೊರತು ಪಡಿಸಿದರೆ ಅಕ್ಕಪಕ್ಕದ ಗ್ರಾಮಗಳಲ್ಲಿ ಅಂಥ ಹೇಳಿಕೊಳ್ಳುವಂತ ಮಳೆಯೇ ಆಗಿಲ್ಲ. ಇದನ್ನು ಗಮನಿಸಿದ ಮೆಣಸಿನಕಾಯಿ ಬೆಳೆದ ರೈತರು ಕಳೆದ ಹಲವು ತಿಂಗಳುಗಳಿಂದ ಸಾವಿರಾರು ರೂಗಳನ್ನು ವ್ಯಯಿಸಿ ಮೆಣಸಿನಕಾಯಿ ಬೆಳೆದು, ಕೊಯ್ಲು ಮಾಡಿ ಒಣಗಿಸಲು ಹಾಕಿದ್ದರೆ ಮಳೆರಾಯ ಈ ರೀತಿ ಮಾಡಿದ್ದಾನೆ ಎಂದು ನೋವನ್ನು ತೋಡಿಕೊಂಡರು. ಇನ್ನು ಪಟ್ಟಣದಲ್ಲಿ ದಿಢೀರನೇ ರಭಸವಾಗಿ ಹಾಗೂ ಜಿಟಿ ಜಿಟಿ ಮಳೆಯಾಗಿದ್ದು ಪಟ್ಟಣದ ಎಪಿಎಂಸಿ ಆವರಣದಲ್ಲಿ ರಾಶಿ ಹಾಕಿರುವ ನೂರಾರು ರೈತರ ಭತ್ತದ ಫಸಲು ಮಳೆಗೆ ತೋಯ್ದಿದೆ.
ಬೀಳುವ ಮಳೆಯಲ್ಲಿಯೇ ರೈತರು ಭತ್ತವನ್ನು ರಾಶಿ ಮಾಡಲು ಹರಸಾಹಸಪಡುತ್ತಿದ್ದರು. ಇದೀಗ ತಾಲೂಕಿನಲ್ಲಿ ಮುಂಗಾರು ಹಂಗಾಮಿನ ಭತ್ತದ ಕಟಾವು ಒಂದೆಡೆ ನಡೆಯುತ್ತಿದ್ದರೆ, ಇನ್ನೊಂದೆಡೆ ಒಣಮೆಣಸಿನಕಾಯಿ ಕೊಯ್ಲು ನಡೆಯುತ್ತಿದೆ. ಆದರೆ ಅನಿರೀಕ್ಷಿತವಾಗಿ ಬೀಳುತ್ತಿರುವ ಮಳೆ ಮಾತ್ರ ಎರಡು ಬೆಳೆಗಳನ್ನು ಬೆಳೆದ ರೈತರನ್ನು ಆತಂಕ್ಕೆ ದೂಡಿದ್ದಾನೆ.
ಈ ಅನಿರೀಕ್ಷಿತ ಮಳೆಯಿಂದ ಮೆಣಸಿನಕಾಯಿ ತೋಯ್ದು ಕೊಳೆತರೆ, ಇನ್ನು ಭತ್ತ ಮಳೆಯಲ್ಲಿ ನೆನೆದರೆ ಅದಕ್ಕೆ ಬೆಲೆಯೇ ಬರುವುದಿಲ್ಲವೆಂದು ಅನ್ನದಾತರು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ. ಒಟ್ಟಾರೆ ಉತ್ತಮವಾಗಿ ಮಳೆಯಾಗಿದ್ದು, ಉತ್ತಮ ಇಳುವರಿ ಬರುತ್ತದೆ ಉತ್ತಮ ಬೆಲೆ ಸಿಗಬಹುದೆಂದು ಜಾತಕ ಪಕ್ಷಿಗಳಂತೆ ಕಾಯುತ್ತಿದ್ದ ರೈತರಿಗೆ ವರುಣ ಅನಿರೀಕ್ಷಿತ ಆಗಮನ ಕಂಗಾಲಾಗುವಂತೆ ಮಾಡಿದ್ದಾನೆ.
-ಜಿ. ಚಂದ್ರಶೇಖರಗೌಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ
Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ
Loksabha; ದಿಂಗಾಲೇಶ್ವರ ಶ್ರೀ ಸ್ಪರ್ಧೆಯ ಹಿಂದೆ ಕಾಣದ ಕೈಗಳ ಕೆಲಸವಿದೆ: ಅರವಿಂದ ಬೆಲ್ಲದ್
Phone Tapping; ತನಿಖೆಯಿಂದ ಸತ್ಯ ಬಯಲು: ಎಂ.ಬಿ.ಪಾಟೀಲ್
Bellary; ಕಾಂಗ್ರೆಸ್ ಏನೇ ಹಾರಾಟ ಮಾಡಿದರೂ ನಮಗೆ ಲಾಭ ಆಗುತ್ತದೆ: ವಿಜಯೇಂದ್ರ
MUST WATCH
ಹೊಸ ಸೇರ್ಪಡೆ
Editorial: ಗುಕೇಶ್ ಗೆಲುವು- ಭಾರತದ ಯುವಶಕ್ತಿಯ ಸಂಕೇತ
AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ
Bengaluru: ಕದಂಬ ಹೋಟೆಲ್ ಸ್ಫೋಟ ಮಾಡುವುದಾಗಿ ಬೆದರಿಕೆ
Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ
Rameshwaram Cafe Case: ರಾಮೇಶ್ವರಂ ಕೆಫೆ ಸ್ಫೋಟ ಶಂಕಿತರು ಮತ್ತೆ 7 ದಿನ ಎನ್ಐಎ ವಶಕ್ಕೆ