ಅಸಮಾಧಾನದಿಂದ ವಿವಾದಕ್ಕೆ ಈಡಾಗಿದ್ದ ರಸ್ತೆಗೆ ಸಿಕ್ತು ಮುಕ್ತಿ.!
Team Udayavani, Dec 26, 2022, 4:38 PM IST
ಕುರುಗೋಡು: ಸಮೀಪದ ಮಣ್ಣೂರು ಗ್ರಾಮದ ಅಂಬೇಡ್ಕರ್ ವೃತ್ತದಿಂದ ಹಳೆ ಆಂಜನೇಯ ದೇವಸ್ಥಾನದ ವರೆಗೆ ಸಂಪರ್ಕ ಹೊಂದಿರುವ ರಸ್ತೆ ತುಂಬಾ ಹದೆಗೆಟ್ಟು ಹೋಗಿದ್ದು,ದುರಸ್ತಿ ಕಾರ್ಯಕ್ಕೆ ನರೇಗಾ ಯೋಜನೆ ಅಡಿಯಲ್ಲಿ ಗ್ರಾಪಂಯಿಂದ 6 ಲಕ್ಷ ಮಂಜೂರು ಮಾಡಿದ್ದರು ದುರಸ್ಥಿ ಕಾರ್ಯಕ್ಕೆ ಮುಂದಾಗದೆ ಕೆಲ ಸದಸ್ಯರ ಅಸಮಾಧಾನದಿಂದ ವಿವಾದಕ್ಕೆ ಈಡಾಗಿ ಕೆಲ ತಿಂಗಳ ಕಾಲ ಹಾಗೆ ತೆಂಗು ಗುಂಡಿಯಿಂದ ಅನಾಥವಾಗಿ ಉಳಿದು, ಗ್ರಾಮಸ್ಥರ ಕೆಂಗಣ್ಣಿಗೆ ಗುರಿಯಾಗಿತ್ತು, ಅಧಿಕಾರಿಗಳ ಹಾಗೂ ಗ್ರಾಮದ ಮುಖಂಡರ ಮನವೊಲಿಕೆ ಮಾಡಿದರು ರಸ್ತೆ ದುರಸ್ಥಿಗೆ ಮುಂದಾಗದೆ ವಿಪರ್ಯಾಸವಾಗಿತ್ತು, ಸದ್ಯ ರಸ್ತೆಗೆ ಮುಕ್ತಿ ಸಿಕ್ಕಿದ್ದು, ದುರಸ್ಥಿ ಕಾರ್ಯ ಕೈಗೆತ್ತಿಕೊಂಡಿದ್ದಾರೆ. ಕಾಮಗಾರಿ ಭರದಿಂದ ಸಾಗುತ್ತಿದೆ.
ಈ ರಸ್ತೆಯು ಹಲವು ವರ್ಷ ಗಳಿಂದ ತೆಗ್ಗು ಗುಂಡಿಗಳು ಬಿದ್ದು ಹದೆಗೆಟ್ಟು ಹೋದ ಪರಿಣಾಮ ವಿವಿಧ ಭಾಗದ ಜನರು ಉಳೆನೂರು, ಕುಂಟೋಜಿ, ಈಳಿಗನೂರು, ಸಿದ್ದಾಪುರ, ಕಾರಟಗಿ, ಸಿಂಗಾಪುರ ಸೇರಿದಂತೆ ಬಹುತೇಕ ಗ್ರಾಮಗಳಿಗೆ ಹೋಗಲು ಜನರು ನದಿ ದಾಟಿಕೊಂಡು ಹೋಗುವುದಕ್ಕೆ ಈ ರಸ್ತೆ ಮೂಲಕ ತೆರಳುತ್ತಿದ್ದು ನಿತ್ಯ ತೊಂದ್ರೆ ಅನುಭವಿಸುತಿದ್ದರು. ಇನ್ನೂ ಮಳೆ ಬಂದರಂತೂ ಕೆಸರು ಗದ್ದೆಯಂತೆ ಕೂಡಿರುತ್ತದೆ. ಇದರಿಂದ ನಿತ್ಯ ಓಡಾಡುವ ಜನರಿಗೆ ಹಾಗೂ ವಾಹನ ಸವಾರರು ತುಂಬಾ ಸಮಸ್ಯೆ ಅನುಭವಿಸುತ್ತಿದ್ದರು.
ರಸ್ತೆಯಲ್ಲಿ ವೃದ್ಧರು, ಗರ್ಭಿಣಿಯವರು ಅಂಗೈಯಲ್ಲಿ ಜೀವ ಹಿಡಿದುಕೊಂಡು ಓಡಾಡಬೇಕಾದ ಅನಿವಾರ್ಯತೆ ನಿರ್ಮಾಣವಾಗಿತ್ತು.ಅಲ್ಲದೆ ವಾಹನ ಸವಾರರು ಬಹಳ ಸಲ ಬೈಕ್ ಗಳು ಹಾಕಿಕೊಂಡು ಬಿದ್ದು ಗಾಯಗಳು ಆಗಿರುವ ಘಟನೆಗಳು ಕೂಡ ಆಗಿದ್ದವು, ಗ್ರಾಮದಲ್ಲಿ ಯಾರಾದ್ರೂ ಮೃತಪಟ್ಟರೆ ಅವರ ಅಂತ್ಯಕ್ರಿಯೆಗೆ ಶವ ತೆಗುದುಕೊಂಡು ಹೂಗುವುದು ಕಷ್ಟಕರ ವಾಗಿತ್ತು, ಸದ್ಯ ರಸ್ತೆ ದುರಸ್ತಿ ಕಾರ್ಯ ಕೈಗೆತ್ತಿಕೊಂಡಿರುವುದರಿಂದ ನಿಟ್ಟಿಸಿರು ಬಿಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Loksabha; ದಿಂಗಾಲೇಶ್ವರ ಶ್ರೀ ಸ್ಪರ್ಧೆಯ ಹಿಂದೆ ಕಾಣದ ಕೈಗಳ ಕೆಲಸವಿದೆ: ಅರವಿಂದ ಬೆಲ್ಲದ್
Phone Tapping; ತನಿಖೆಯಿಂದ ಸತ್ಯ ಬಯಲು: ಎಂ.ಬಿ.ಪಾಟೀಲ್
Bellary; ಕಾಂಗ್ರೆಸ್ ಏನೇ ಹಾರಾಟ ಮಾಡಿದರೂ ನಮಗೆ ಲಾಭ ಆಗುತ್ತದೆ: ವಿಜಯೇಂದ್ರ
Election ಬಳಿಕ ಕಾಂಗ್ರೆಸ್ ನವರು ಕೌರವರಾಗ್ತಾರೆ, ಬಿಜೆಪಿಯವರು ಪಾಂಡವರಾಗ್ತಾರೆ: ಶ್ರೀರಾಮುಲು
Ballari; ಗುರು-ಶಿಷ್ಯ ಪರಂಪರೆಗೆ ವೀರಣ್ಣ ಜ್ವಲಂತ ಸಾಕ್ಷಿ
MUST WATCH
ಹೊಸ ಸೇರ್ಪಡೆ
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ