ಹಂಪಿ ಪ್ರವಾಸಿಮಿತ್ರರಿಗಿಲ್ಲ ವೇತನ
ವೇತನಕ್ಕಾಗಿ ಕಾಯುತ್ತಿರುವ ಗೃಹರಕ್ಷಕ ದಳ ಸಿಬ್ಬಂದಿ! 4 ತಿಂಗಳ ವೇತನವಿಲ್ಲದೆ ಸಂಕಷ್ಟ
Team Udayavani, Mar 1, 2021, 4:10 PM IST
ಹೊಸಪೇಟೆ: ಹಂಪಿಯಲ್ಲಿ ದೇಶ-ವಿದೇಶಿ ಪ್ರವಾಸಿಗರಿಗೆ ಮಾರ್ಗದರ್ಶನ ಮಾಡುವ ಪ್ರವಾಸಿಮಿತ್ರ(ಗೃಹರಕ್ಷಕ)ಸಿಬ್ಬಂದಿಗಳು ಕಳೆದ ನಾಲ್ಕು ತಿಂಗಳಿಂದ ವೇತನವಿಲ್ಲದೇ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ.
ಪ್ರವಾಸೋದ್ಯಮ ಇಲಾಖೆ ಆಧೀನದಲ್ಲಿ ಪ್ರವಾಸಿಮಿತ್ರರಾಗಿ ಮಾರ್ಗದರ್ಶನ ಮಾಡುತ್ತಿರುವ ಒಟ್ಟು 17 ಜನ ಹೋಮ್ ಗಾರ್ಡ್ ಸಿಬ್ಬಂದಿಗೆ ನವೆಂಬರ್ ತಿಂಗಳಿಂದ ವೇತನವಿಲ್ಲದೇ ಸಂಕಷ್ಟಕ್ಕೆ ಗುರಿಯಾಗಿದ್ದಾರೆ.
ಮಾರ್ಗದರ್ಶನ: ಹಂಪಿಗೆ ಆಗಮಿಸುವ ದೇಶ-ವಿದೇಶಿ ಪ್ರವಾಸಿಗರಿಗೆ ಮಾರ್ಗದರ್ಶನ ಮಾಡುವ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಇಲಾಖೆ, ಗೃಹರಕ್ಷಕದಳ ಸಿಬ್ಬಂದಿ ಹಂಪಿಯಲ್ಲಿ ನಿಯೋಜನೆ ಮಾಡಿದೆ. ಈಗಾಗಲೇ ಪ್ರವಾಸಿಮಿತ್ರರಾಗಿ ತರಬೇತಿ ಪಡೆದಿರುವ ಸಿಬ್ಬಂದಿ, ಸ್ಮಾರಕ ಕುರಿತು ಮಾಹಿತಿ, ತೆರಳುವ ಮಾರ್ಗ, ಹೋಟೆಲ್, ವಸತಿ ಇತರೆ ಸೌಲಭ್ಯಗಳ ಕುರಿತು ಪ್ರವಾಸಿಗರಿಗೆ ಮಾಹಿತಿ ನೀಡುವ ಕಾಯಕ ಮಾಡುತ್ತಿದ್ದಾರೆ.
ಎಲ್ಲೆಲ್ಲಿ?:ವಿರೂಪಾಕ್ಷ ದೇವಾಲಯ-2, ನದಿ ತೀರ-3, ವಿಜಯವಿಠಲ ದೇವಾಲಯ-1, ಪುರಂದರ ದಾಸರ ಮಂಟಪ-1, ಚಕ್ರತೀರ್ಥ ಕೋದಂಡರಾಮ ದೇವಾಲಯ-1 ನೆಲಮಟ್ಟದ ಶಿವಾಲಯ-1, ಕಮಲ ಮಹಲ್-1, ರಾಣಿ ಸ್ನಾನ ಗƒಹ-1, ಮಹಾನವಮಿ ದಿಬ್ಬ-1, ಗೆಜ್ಜಲ ಮಂಟಪ-1, ಪ್ರವಾಸೋದ್ಯಮ ಇಲಾಖೆ-2 ಹಾಗೂ ಟಿ.ಬಿ.ಡ್ಯಾಂನಲ್ಲಿ-2 ಸಿಬ್ಬಂದಿಗಳು ಪ್ರವಾಸಿಮಿತ್ರರಾಗಿ ಕೆಲಸ ಮಾಡುತ್ತಿದ್ದಾರೆ.
ಐಡಿ ಇಲ್ಲ: ಹಗಲಿರಳು ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ಐಡಿ ಕಾರ್ಡ್ನೂ° ನೀಡದೇ ಇಲಾಖೆ ದುಡಿಸಿಕೊಳ್ಳುತ್ತಿದೆ. ಅವರಿಗೆ ಸಮವಸ್ತ್ರ ಹಾಗೂ ಶೂಗಳನ್ನು ವಿತರಿಸಿ ವರ್ಷಗಳೇ ಕಳೆದಿವೆ. ಕಳೆದ ನಾಲ್ಕು ವರ್ಷದಿಂದ ಹಂಪಿ ಸ್ಮಾರಕಗಳ ರಕ್ಷಣೆಯಲ್ಲಿ ತೊಡಗಿರುವ ಸಿಬ್ಬಂದಿ, ಪ್ರವಾಸಿಗರು ಕಳೆದುಕೊಂಡ ಮೊಬೈಲ್, ಹಣದ ಬ್ಯಾಗ್ ಇತರೆ ವಸ್ತುಗಳನ್ನು ಹುಡುಕಿ ಸಂಬಂಧಪಟ್ಟವರಿಗೆ ಮರಳಿ ನೀಡುವ ಮೂಲಕ ಸೈ ಎನ್ನಿಸಿಕೊಂಡಿದ್ದಾರೆ.
ನಿಗಾ: ಹಂಪಿ ಸ್ಮಾರಕಗಳಿಗೆ ಹಾನಿಯಾಗದಂತೆ ತೀವ್ರ ನಿಗಾವಹಿಸುವ ಸಿಬ್ಬಂದಿ ಸ್ಮಾರಕಗಳ ಮಹತ್ವವನ್ನು ಪ್ರವಾಸಿಗರಿಗೆ ಸಾರಿ ಹೇಳುವ ಮೂಲಕ ಹಂಪಿಯ ಘನತೆ ಹೆಚ್ಚಿಸಿದ್ದಾರೆ. ನದಿಯಲ್ಲಿ ಅಪಾಯದಲ್ಲಿ ಸಿಕ್ಕಿಹಾಕಿಕೊಂಡ ಪ್ರವಾಸಿಗರನ್ನು ಸ್ಥಳೀಯರ ಸಹಾಯದಿಂದ ರಕ್ಷಣೆ ಮಾಡಿದ್ದಾರೆ. ಕಳೆದ ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಪ್ರವಾಸಿಗರಿಲ್ಲದ ಹಂಪಿಯಲ್ಲಿ ಆಹಾರ ಸಿಗದೇ ಹಸಿವಿನಿಂದ ಪರದಾಡುತ್ತಿದ್ದ ಕೋತಿಗಳಿಗೆ ಆಹಾರ-ನೀರು ನೀಡಿ ಪ್ರಾಣಿದಯೆ ತೋರಿದ್ದಾರೆ. ಭಿಕ್ಷುಕರು ಹಾಗೂ ನಿರಾಶ್ರಿತರಿಗೆ ಆಹಾರ-ವಸ್ತ್ರಗಳನ್ನು ವಿತರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಬಿಸಿಲು, ಗಾಳಿ, ಮಳೆಯನ್ನದೇ ಪೊಲೀಸರಿಗೆ ಸರಿಸಮನಾಗಿ ಕೆಲಸ ಮಾಡುತ್ತಿರುವ ಗೃಹರಕ್ಷಕ ದಳದ ಸಿಬ್ಬಂದಿಗೆ ಅಧಿ ಕಾರಿಗಳು ಶೀಘ್ರವೇ ವೇತನ ಪಾವತಿಗಾಗಿ ಕ್ರಮ ಕೈಗೊಳ್ಳಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮನೆ ರತ್ನಾಕರ್
BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ
Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!
Bidar; ಬಿರುಗಾಳಿ ಸಹಿತ ಭಾರಿ ಮಳೆ :ಸಿಡಿಲು ಬಡಿದು ರೈತ ಸಾವು
Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್
MUST WATCH
ಹೊಸ ಸೇರ್ಪಡೆ
Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮನೆ ರತ್ನಾಕರ್
BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ
Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!
Bidar; ಬಿರುಗಾಳಿ ಸಹಿತ ಭಾರಿ ಮಳೆ :ಸಿಡಿಲು ಬಡಿದು ರೈತ ಸಾವು
Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್