ಡೆಂಘೀ ಪ್ರಕರಣ: ವೈದ್ಯರ ತಂಡದಿಂದ ಸ್ಥಳ ಪರಿಶೀಲನೆ
Team Udayavani, May 1, 2020, 5:32 PM IST
ಸಂಡೂರು: ಡೆಂಘೀ ಪ್ರಕರಣ ಹೆಚ್ಚಾಗಿದ್ದರಿಂದ ತೋರಣಗಲ್ಲು ಜಿಂದಾಲ್ ಕಂಪನಿಗೆ ಹೊಂದಿಕೊಂಡ ಸುನೀತಾ ಪ್ಲಾಂಟ್ನಲ್ಲಿ ತಾಲೂಕು ವೈದ್ಯಾಧಿಕಾರಿಗಳ ತಂಡ ಸ್ವಚ್ಛತೆಪರಿಶೀಲನೆ ನಡೆಸಿತು
ಸಂಡೂರು: ತಾಲೂಕಿನಲ್ಲಿ ಡೆಂಘೀ ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ತೋರಣಗಲ್ಲಿನ ಜಿಂದಾಲ್ ಕಂಪನಿಗೆ ಹೊಂದಿಕೊಂಡಂತೆ ಇರುವ ಸುನೀತಾ ಇಂಜಿನಿಯರಿಂಗ್ ವರ್ಕ್ ನ ಕಾರ್ಮಿಕರ ಕುಟುಂಬಗಳಿಗೆ ಮತ್ತು ಇಡೀ ಪ್ಲಾಂಟ್ ಪ್ರದೇಶಕ್ಕೆ ತಾಲೂಕು ವೈದ್ಯಾಧಿಕಾರಿ ಡಾ| ವೇಣುಗೋಪಾಲ್ರಾವ್ ತಂಡ ಭೇಟಿ ನೀಡಿ ಸ್ವಚ್ಛತೆ ಮತ್ತು ಅಲ್ಲಿನ ಪರಿಸ್ಥಿತಿ ಪರಿಶೀಲನೆ ನಡೆಸಿತು.
ಈ ಸಂದರ್ಭದಲ್ಲಿ ಡಾ| ಗೋಪಾಲ್ರಾವ್ ಮಾತನಾಡಿ, ತಾಲೂಕಿನಾದ್ಯಂತ ಜ್ವರದ ಬಾಧೆ ಹಿನ್ನೆಲೆಯಲ್ಲಿ ಇಡೀ ತೋರಣಗಲ್ಲು ಪ್ರದೇಶದ ಸ್ವಚ್ಛತೆಗೆ ಕ್ರಮ ವಹಿಸಲಾಗಿದೆ. ಅಲ್ಲದೆ 100ಕ್ಕೂ ಹೆಚ್ಚು ಮನೆಗಳಿಗೆ ವಿಶೇಷ ನಿಗಾವಹಿಸಲಾಗಿದೆ. ನಿತ್ಯ ಆರೋಗ್ಯ ಸಿಬ್ಬಂದಿ ಭೇಟಿ ನೀಡುತ್ತಿದೆ. ಅಲ್ಲದೆ ಸುನೀತಾ ಇಂಜಿನಿಯರಿಂಗ್ ಕಂಪನಿಯ ಕೆಲಸಗಾರರ ಸ್ಥಳದಲ್ಲಿ ರೋಗ ಅಂಟಿರಬಹುದು ಎಂದು ಇಡಿ ಪ್ಲಾಂಟ್ ಪರಿಶೀಲಿಸಿ ಸ್ವಚ್ಛತೆಗೆ ಕ್ರಮವಹಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ವೈದ್ಯರಾದ ಡಾ| ಹರೀಶ್, ಡಾ| ಶಾಷಾವಲಿ, ತಾಲೂಕು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಕೆ.ಶಿವಪ್ಪ, ತಾಲೂಕು ಮಲೇರಿಯಾ ಮೇಲ್ವಿಚಾರಕ ಸಾಗರ್ಕುಮಾರ್, ಕಿರಿಯ ಸಹಾಯಕರಾದ ಇಸ್ಮಾಯಿಲ್, ಬಸವರಾಜು, ರಿಚರ್ಡ, ನಿಜಾಮುದ್ದೀನ್, ತಿಪ್ಪಮ್ಮ ಅವರು ಇಡೀ ಇಂಜಿನಿಯರಿಂಗ್ ಪ್ಲಾಂಟ್ ಪರಿಶೀಲಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ
ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?
Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ
Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ