ತೋರಣಗಲ್ಲಿನಲ್ಲಿ ಡೆಂಘೀ ದಿನಾಚರಣೆ
Team Udayavani, May 21, 2020, 4:10 PM IST
ಸಾಂದರ್ಭಿಕ ಚಿತ್ರ
ಸಂಡೂರು: ಸ್ವಚ್ಛತೆ ಕೊರತೆಯಿಂದ ವಿಶೇಷ ಜ್ವರಬಾಧೆಗಳು ಕಾಡುತ್ತಿವೆ. ಅದರಲ್ಲಿ ಡೆಂಘೀ ಸಹ ಒಂದಾಗಿದೆ. ಆದ್ದರಿಂದ ಅದನ್ನು ತಡೆಯಬೇಕಾದರೆ ಸ್ವಚ್ಛತೆ ಅತಿ ಅಗತ್ಯವಾಗಿದೆ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ತಿಳಿಸಿದರು.
ಅವರು ತಾಲೂಕಿನ ತೋರಣಗಲ್ಲಿನಲ್ಲಿ ಡೆಂಘೀ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿ ಆರೋಗ್ಯ ಇಲಾಖೆ ನಿರಂತರವಾಗಿ ಶ್ರಮವಹಿಸಿ ಕಾರ್ಯನಿರ್ವಹಿಸುತ್ತಿದ್ದು ಅವರಿಗೂ ಸಹ ರೋಗ ಹರಡುವ ಭೀತಿ ಇರುತ್ತದೆ. ಆದರೆ ಅದಕ್ಕೆ ಕುಟುಂಬದ ಮತ್ತು ಸಮಾಜದ ಬೆಂಬಲ ಅತಿ ಅಗತ್ಯವಾಗಿದೆ. ಇಂದು ಸಿಬ್ಬಂದಿ ರೋಗ ತಡೆಯಲು ಸಾರ್ವಜನಿಕರಿಗೆ ಸೊಳ್ಳೆಪರದೆ ಬಳಕೆ, ಕುಡಿಯುವ ನೀರನ್ನು ಮುಚ್ಚಿಡುವ ಬಗ್ಗೆ, ಸೊಳ್ಳೆಗಳ ಉತ್ಪತ್ತಿ ಕೇಂದ್ರಗಳನ್ನು ತಕ್ಷಣ ಮುಚ್ಚುವುದು, ಮಸ್ಕಿಟೋ ಕಾಯಿಲ್ ಬಳಕೆ , ಸಂಜೆ 5.30ರಿಂದ 7.30ರ ವರೆಗೆ ಬಾಗಿಲು ಮುಚ್ಚಿಕೊಳ್ಳುವುದು, ಡೆಂಘೀ ಜೊತೆಗೆ ಚಿಕನ್ ಗುನ್ಯಾ, ಮಲೇರಿಯಾ ಇತರ ಎಲ್ಲ ರೀತಿಯ ಜ್ವರ ಬಾಧೆಗಳನ್ನು ತಡೆಯಲು ಸಹಾಯಕವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬ ಆರೋಗ್ಯ ಇಲಾಖೆ ಸಿಬ್ಬಂದಿ ಜನರಲ್ಲಿ ಜಾಗೃತಿ ಉಂಟುಮಾಡುವ ಮೂಲಕ ಈ ರೀತಿಯ ಎಲ್ಲ ಜ್ವರಬಾಧೆಗಳನ್ನು ತಡೆಯಲು ಸಹಾಯಕವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಕಿರಿಯ ಆರೋಗ್ಯ ಸಹಾಯಕಿ ಭಾಗ್ಯಲಕ್ಷ್ಮೀ, ಆಶಾ ಪಿಸಿಲಿಟೇಟರ್ ಬಸಮ್ಮ, ಆಶಾಕಾರ್ಯಕರ್ತೆಯರಾದ ವಿಜಯಶಾಂತಿ, ವೆಂಕಟಲಕ್ಷ್ಮೀ, ರಾಜೇಶ್ವರಿಗೆ, ಪದ್ಮಾವತಿ, ಕಾವೇರಿ, ಮಂಜುಳಾ, ಆಶಾ, ಶ್ರೀದೇವಿ, ಲಕ್ಷ್ಮೀ ಗೋವಿಂದಮ್ಮ, ತೇಜಮ್ಮ, ಹುಲಿಗೆಮ್ಮ ಇತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ
ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?
Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ
Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ
Loksabha; ದಿಂಗಾಲೇಶ್ವರ ಶ್ರೀ ಸ್ಪರ್ಧೆಯ ಹಿಂದೆ ಕಾಣದ ಕೈಗಳ ಕೆಲಸವಿದೆ: ಅರವಿಂದ ಬೆಲ್ಲದ್
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ