ಸತ್ಕಾರ ಪುರುಷ ಸಕ್ಕರೆ ಕರಡೀಶ ಚಿತ್ರೀಕರಣಕ್ಕೆ ಚಾಲನೆ


Team Udayavani, Oct 18, 2021, 3:01 PM IST

ಸತ್ಕಾರ ಪುರುಷ ಸಕ್ಕರೆ ಕರಡೀಶ ಚಿತ್ರೀಕರಣಕ್ಕೆ ಚಾಲನೆ

ಬಳ್ಳಾರಿ: ದಾಸೋಹಿ, ಸತ್ಕಾರ ಪುರುಷ ಸಕ್ಕರೆ ಕರಡೀಶರ ಜೀವನಾಧಾರಿತ ಚಲನಚಿತ್ರದ ಚಿತ್ರೀಕರಣಕ್ಕೆ ನಗರದ ಮರಿಸ್ವಾಮಿಗಳ ಮಠದಲ್ಲಿ ಮರಿಸ್ವಾಮಿಗಳ ಗದ್ದುಗೆ ಬಳಿ ಚಾಲನೆ ನೀಡಲಾಯಿತು.

ಕರಡೀಶರ ಪಾತ್ರ ನಿರ್ವಹಿಸುತ್ತಿರುವ ರಮೇಶ್‌ ಗೌಡ ಪಾಟೀಲ್‌ ಅವರ ಸನ್ನಿವೇಶ ಚಿತ್ರೀಕರಿಸುವ ಮೂಲಕ ಚಾಲನೆ ನೀಡಲಾಯಿತು. ಸಕ್ಕರೆ ಕರಡೀಶ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹಾವಿನಾಳ ಬಸವರಾಜ ಅವರು ಕ್ಲಾಪ್‌ ಮಾಡಿ, ಕಲ್ಯಾಣಸ್ವಾಮಿ ಮಠದ ಸ್ವಾಮೀಜಿಗಳು ಕ್ಯಾಮೆರಾ ಸ್ವಿಚ್‌ಆನ್‌ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದರು.

ರೋಹಿತ್‌ ಫಿಲಂಸ್‌ ಬೆಂಗಳೂರು ಸಂಸ್ಥೆಯಡಿ ನಿರ್ಮಾಣಗೊಳ್ಳುತ್ತಿರುವ ಕರಡೀಶ ಚಿತ್ರಕ್ಕೆ ನಿರ್ದೇಶಕ ಪುರುಷೋತ್ತಮ ಓಂಕಾರಸ್ವಾಮಿ ಆಕ್ಷನ್‌ ಕಟ್‌ ಹೇಳಲಿದ್ದು, ಅವರ ಪತ್ನಿ ಉಷಾ ಪುರುಷೋತ್ತಮ ಚಿತ್ರದ ನಿರ್ಮಾಣದ ಸಾರಥ್ಯ ವಹಿಸಿಕೊಂಡಿದ್ದಾರೆ.

ಚಿತ್ರಕ್ಕೆ ಚೆನ್ನೈನ ರಾಜ್‌ ಭಾಸ್ಕರ್‌ ಸಂಗೀತ ನೀಡಲಿದ್ದು, ಮುತ್ತುರಾಜ್‌ ಕ್ಯಾಮೆರಾಮೆನ್‌ ಆಗಿ ಕಾರ್ಯನಿರ್ವಹಿಸಲಿದ್ದಾರೆ. ನಂತರ ನಿರ್ದೇಶಕ ಪುರುಷೋತ್ತಮ ಓಂಕಾರಸ್ವಾಮಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಕ್ಕರೆ ಕರಡೀಶರು ಬಳ್ಳಾರಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಮೂಲತಃ ಗುತ್ತಿಗೆದಾರರಾಗಿದ್ದ ಕರಡೀಶರು, ಬ್ರಿಟೀಷ ಆಡಳಿತದಲ್ಲೇ ಗುತ್ತಿಗೆ ಪಡೆದು ಬಳ್ಳಾರಿ ರೈಲು ನಿಲ್ದಾಣ, ಜಿಲ್ಲಾ ಧಿಕಾರಿ ಕಚೇರಿ, ಬೀದಿ ದೀಪಗಳು, ಸುಸಜ್ಜಿತ ರಸ್ತೆಗಳು ಸೇರಿದಂತೆ ಇನ್ನಿತರೆ ಹಲವು ಕಟ್ಟಡಗಳನ್ನು ನಿರ್ಮಿಸಿದ್ದು, ಅಂದಿನ ಕಟ್ಟಡಗಳು ಇಂದಿಗೂ ನಿದರ್ಶನವಾಗಿ ಉಳಿದಿವೆ. ಅವರು ದುಡಿದ ಹಣವನ್ನೆಲ್ಲ ಜನರಿಗೆ, ಸಮಾಜಕ್ಕಾಗಿ ಖರ್ಚು ಮಾಡಿದ್ದಾರೆ. ಆ ಕಾಲದಲ್ಲಿ ಬರ ಆವರಿಸಿದಾಗ ತಿಂಗಳುಗಟ್ಟಲೆ ದಾಸೋಹ ಮಾಡಿದ ಕೀರ್ತಿ ಕರಡೀಶರಿಗೆ ಸಲ್ಲುತ್ತದೆ ಎಂದರು.

ಅಂದಿನ ಕಾಲದಲ್ಲಿ ಸಂಸ್ಕೃತ ಕಲಿಯಬೇಕಾದರೆ ಕಾಶಿಗೆ ಹೋಗಬೇಕಿತ್ತು. ಅಂತಹ ಸಂದರ್ಭದಲ್ಲಿ ಬಳ್ಳಾರಿಯಲ್ಲಿ ಸಂಸ್ಕೃತ ಪಾಠಶಾಲೆ ಆರಂಭಿಸಿದವರಲ್ಲಿ ಕರಡೀಶರು ಮೊದಲಿಗರಾಗಿದ್ದು, ಮೈಸೂರು ಸಂಸ್ಥಾನದಿಂದ ಐವರು ಸಂಸ್ಕೃತ ಶಿಕ್ಷಕರನ್ನು ಕರೆತಂದು ಇಲ್ಲಿನ ಜನರು ಸಂಸ್ಕೃತ ಕಲಿಯುವಂತೆ ಮಾಡಿದ್ದರು. ಅಂತಹ ಸತು³ರುಷರ ಜೀವನವನ್ನು ಬೆಳ್ಳಿ ಪರದೆಯ ಮೇಲೆ ಮೂಡಿಸಲಾಗುತ್ತದೆ ಎಂದರು. ಕರಡೀಶರು ಬಳ್ಳಾರಿಯವರೇ ಆಗಿದ್ದರಿಂದ ಇಲ್ಲಿನ ಕರಡೀಶ ಚೌಕಿ, ಸಂಸ್ಕೃತ ಪಾಠ ಶಾಲೆ ಇನ್ನಿತರೆ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗುವುದು. ಇನ್ನುಳಿದಂತೆ ಬೆಂಗಳೂರಿನಲ್ಲಿ ಸೆಟ್‌ಗಳನ್ನು ಹಾಕಿಕೊಂಡು ಚಿತ್ರೀಕರಣ ನಡೆಸಿ 40ದಿನಗಳಲ್ಲಿ ಪೂರ್ಣಗೊಳಿಸಲಾಗುವುದು. ಮುಂದಿನ ಫೆಬ್ರವರಿ ತಿಂಗಳಲ್ಲಿ ಚಿತ್ರದ ಬಿಡುಗಡೆಗೆ ಪ್ರಯತ್ನಿಸಲಾಗುವುದು. ಚಿತ್ರದಲ್ಲಿ ಐದು ಹಾಡುಗಳು ಇರಲಿದ್ದು, 1.5 ಕೋಟಿ ರೂ. ವೆಚ್ಚದಲ್ಲಿ ಚಿತ್ರವನ್ನು ನಿರ್ಮಿಸಲಾಗುವುದು. ಚಿತ್ರಕ್ಕೆ ಕರಡೀಶ ಪಾತ್ರಧಾರಿ ರಮೇಶ್‌ ಗೌಡ ಪಾಟೀಲ್‌ ಅವರು ಸಹ ಬಂಡವಾಳ ಹೂಡಿದ್ದು, ರಂಗಭೂಮಿ ಕಲಾವಿದ, ಅನುಭವಿಗಳಾಗಿದ್ದರಿಂದ ಚಿತ್ರದ ಮುಖ್ಯಪಾತ್ರಕ್ಕೆ ಅವರನ್ನೇ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ಇದಕ್ಕೂ ಮುನ್ನ ಆರು ತಿಂಗಳ ಹಿಂದೆ ಚೇಳ್ಳಗುರ್ಕಿ ಎರ್ರಿಸ್ವಾಮಿ, ಅಲ್ಲೀಪುರ ಮಹಾದೇವತಾತರ ಕುರಿತ ಚಲನಚಿತ್ರಗಳನ್ನು ಚಿತ್ರೀಕರಿಸಿದ್ದು, ಇದೇ ಡಿಸೆಂಬರ್‌ ತಿಂಗಳಲ್ಲಿ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ. ಈ ವರೆಗೆ 22 ಆಧಾತ್ಮಿಕ ಚಿತ್ರ ನಿರ್ದೇಶಿಸಿದ್ದು, ಮಹಾಶರಣ ಹರಳಯ್ಯ ಚಿತ್ರಕ್ಕೆ ಉತ್ತಮ ನಿರ್ದೇಶನ ಸೇರಿ ಒಟ್ಟು 6 ಪ್ರಶಸ್ತಿಗಳು ಲಭಿಸಿವೆ ಎಂದು ವಿವರಿಸಿದರು.

ಚಿತ್ರೀಕರಣ ಪ್ರಾರಂಭೋತ್ಸವದಲ್ಲಿ ವಿಧಾನ ಪರಿಷತ್‌ ಸದಸ್ಯ ಅಲ್ಲಂ ವೀರಭದ್ರಪ್ಪ, ವೀರಶೈವ ಸಮುದಾಯದ ಹಾವಿನಾಳ್‌ ಶರಣಪ್ಪ, ಪಲ್ಲೇದ ದೊಡ್ಡಪ್ಪ, ಟಿ.ಸಿ.ಗೌಡ, ಬೈಲುವದ್ದಿಗೇರಿ ಎರ್ರಿಸ್ವಾಮಿ, ಕೋರಿ ವಿರೂಪಾಕ್ಷಿ, ಗುತ್ತಿಗನೂರು ವಿರೂಪಾಕ್ಷಗೌಡ, ರಾಘವ ಕಲಾ ಮಂದಿರದ ಗೌರವ ಅಧ್ಯಕ್ಷ ಕೆ.ಚೆನ್ನಪ್ಪ ಪಾಲ್ಗೊಂಡಿದ್ದರು. ಸುದ್ದಿಗೋಷ್ಠಿಯಲ್ಲಿ ನಿರ್ಮಾಪಕಿ ಉಷಾ, ಮುಖ್ಯಪಾತ್ರಾಧಾರಿ ರಮೇಶ್‌ಗೌಡ ಪಾಟೀಲ್‌, ಅವರ ಪತ್ನಿ ಗಂಗಮ್ಮ ಪಾಟೀಲ್‌ ಇದ್ದರು.

ಟಾಪ್ ನ್ಯೂಸ್

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: 405 ಸೂಕ್ಷ್ಮ ಮತಗಟ್ಟೆ : ಕೆ. ವಿದ್ಯಾಕುಮಾರಿ

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: 405 ಸೂಕ್ಷ್ಮ ಮತಗಟ್ಟೆ : ಕೆ. ವಿದ್ಯಾಕುಮಾರಿ

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

Dakshina Kannada ಲೋಕಸಭಾ ಕ್ಷೇತ್ರ: ಚುನಾವಣೆಗೆ ಸಂಪೂರ್ಣ ಸಜ್ಜು

Dakshina Kannada ಲೋಕಸಭಾ ಕ್ಷೇತ್ರ: ಚುನಾವಣೆಗೆ ಸಂಪೂರ್ಣ ಸಜ್ಜು

ಹಂತ-1: ಬಹಿರಂಗ ಪ್ರಚಾರಕ್ಕೆ ಇಂದು ತೆರೆ, ನಾಳೆ ಮನೆ ಪ್ರಚಾರ

Lok Sabha Election ಹಂತ-1: ಬಹಿರಂಗ ಪ್ರಚಾರಕ್ಕೆ ಇಂದು ತೆರೆ, ನಾಳೆ ಮನೆ ಪ್ರಚಾರ

arvind kejriwal aap

Lok Sabha Election; ಕೇಜ್ರಿವಾಲ್‌ ಸೆರೆ‌ ಆಪ್‌ಗೆ ವರವೇ? ಶಾಪವೇ?

ಮುರುಘಾ ಶ್ರೀ ಜಾಮೀನು ರದ್ದು: ವಾರದಲ್ಲಿ ಶರಣಾಗಲು ತಾಕೀತು

ಮುರುಘಾ ಶ್ರೀ ಜಾಮೀನು ರದ್ದು: ವಾರದಲ್ಲಿ ಶರಣಾಗಲು ತಾಕೀತು

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?

ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?

Neha Hiremath Case; Protest by BJP-JDS-ABVP across the state

Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ

1-eweqwe

Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ

ದಿಂಗಾಲೇಶ್ವರ ಶ್ರೀ ಸ್ಪರ್ಧೆಯ ಹಿಂದೆ ಕಾಣದ ಕೈಗಳ ಕೆಲಸವಿದೆ: ಅರವಿಂದ ಬೆಲ್ಲದ್

Loksabha; ದಿಂಗಾಲೇಶ್ವರ ಶ್ರೀ ಸ್ಪರ್ಧೆಯ ಹಿಂದೆ ಕಾಣದ ಕೈಗಳ ಕೆಲಸವಿದೆ: ಅರವಿಂದ ಬೆಲ್ಲದ್

Phone Tapping; ತನಿಖೆಯಿಂದ ಸತ್ಯ ಬಯಲು: ಎಂ.ಬಿ.ಪಾಟೀಲ್‌

Phone Tapping; ತನಿಖೆಯಿಂದ ಸತ್ಯ ಬಯಲು: ಎಂ.ಬಿ.ಪಾಟೀಲ್‌

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: 405 ಸೂಕ್ಷ್ಮ ಮತಗಟ್ಟೆ : ಕೆ. ವಿದ್ಯಾಕುಮಾರಿ

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: 405 ಸೂಕ್ಷ್ಮ ಮತಗಟ್ಟೆ : ಕೆ. ವಿದ್ಯಾಕುಮಾರಿ

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

Dakshina Kannada ಲೋಕಸಭಾ ಕ್ಷೇತ್ರ: ಚುನಾವಣೆಗೆ ಸಂಪೂರ್ಣ ಸಜ್ಜು

Dakshina Kannada ಲೋಕಸಭಾ ಕ್ಷೇತ್ರ: ಚುನಾವಣೆಗೆ ಸಂಪೂರ್ಣ ಸಜ್ಜು

ಹಂತ-1: ಬಹಿರಂಗ ಪ್ರಚಾರಕ್ಕೆ ಇಂದು ತೆರೆ, ನಾಳೆ ಮನೆ ಪ್ರಚಾರ

Lok Sabha Election ಹಂತ-1: ಬಹಿರಂಗ ಪ್ರಚಾರಕ್ಕೆ ಇಂದು ತೆರೆ, ನಾಳೆ ಮನೆ ಪ್ರಚಾರ

arvind kejriwal aap

Lok Sabha Election; ಕೇಜ್ರಿವಾಲ್‌ ಸೆರೆ‌ ಆಪ್‌ಗೆ ವರವೇ? ಶಾಪವೇ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.