ಹೆಚ್ಚಾಯ್ತಾ ಕಲಬೆರಕೆ ಆಹಾರ ಮಾರಾಟ?


Team Udayavani, Mar 28, 2021, 7:27 PM IST

ಗಹ್ಜಗಜ್

ಹೊಸಪೇಟೆ: ಜಿಲ್ಲೆಯಲ್ಲಿ ಕೆಲ ಅಂಗಡಿ-ಮುಂಗಟ್ಟು, ಶಾಪಿಂಗ್‌ ಮಹಲ್‌ ಗಳಲ್ಲಿ ಅಸುರಕ್ಷತಾ ಆಹಾರ ಪದಾರ್ಥ ಮಾರಾಟ ನಡೆಯುತ್ತಿರುವ ಬಗ್ಗೆ ಆರೋಪಗಳು ಕೇಳಿ ಬಂದಿವೆ. ಹೌದು! ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ತಾಲೂಕುಗಳ ಕೆಲ ಅಂಗಡಿ-ವ್ಯಾಪಾರ ಮಳಿಗೆಗಳಲ್ಲಿ ಆಹಾರ ಪದಾರ್ಥಗಳ ಗುಣಮಟ್ಟದಲ್ಲಿ ಏರುಪೇರು ಆಗಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಉಭಯ ಜಿಲ್ಲೆಗಳಲ್ಲಿ ಕಳೆದ ಮೂರು ವರ್ಷದ ಅವಧಿ  ಯಲ್ಲಿ ಒಟ್ಟು 35 ಪ್ರಕರಣಗಳು ಬೆಳಕಿಗೆ ಬಂದಿವೆ.

ಯಾವಾವ ಪದಾರ್ಥಗಳು: ಐಸ್‌ಕ್ರೀಮ್‌, ಚಿಪ್ಸ್‌, ಮಜ್ಜಿಗೆ, ಕುಡಿಯುವ ನೀರಿನ ಬಾಟಲಿ, ಕೋವಾ, ಹಾಲು, ಪನ್ನೀರ್‌, ಹಿಟ್ಟು, ಮೆಣಸಿನ ಪುಡಿ, ಶೇಂಗಾ ಬೀಜ, ಮಡಿಕೆ, ಬಟಾಣೆ, ಕಾಳು ಪೊಟ್ಟಣ, ಅರಿಶಿಣ ಪುಡಿ ಹಾಗೂ ಗರಂ ಮಸಾಲ, ರಸುYಲ್ಲಾ, ಶೇಂಡಿಗೆ, ಕೇಕ್‌, ಬಿಸ್ಕತ್ತ್, ಅಕ್ಕಿ ಹಾಗೂ ಟಮೋಟಾ ಸಾಸ್‌ ಪದಾರ್ಥಗಳ ಗುಣಮಟ್ಟದಲ್ಲಿ ವ್ಯತಾಸ ಕಂಡು ಬಂದಿರುವುದು ಆಹಾರ ಸುಕರಕ್ಷತಾ ಇಲಾಖೆಯ ಗಮನಕ್ಕೆ ಬಂದಿದೆ. ಇವುಗಳಲ್ಲಿ ನಿಗದಿ ತ ಗುಣಮಟ್ಟ ಇಲ್ಲದಿರುವುದು, ಪೊಟ್ಟಣದ ಮೇಲೆ ತಪ್ಪು ಮಾಹಿತಿ ಲೇಬಲ್‌ ಅಂಟಿಸಿ ಗ್ರಾಹಕರಿಗೆ ವಂಚನೆ ಮಾಡುವ ಪ್ರಕರಣಗಳು ಬೆಳಕಿಗೆ ಬಂದಿವೆ.

ದೂರು ದಾಖಲು: ಆಹಾರ ಸುರಕ್ಷತಾ ಕಾಯ್ದೆ ಮತ್ತು ನಿಯಮಗಳು ಹಾಗೂ ನಿಬಂಧನೆಗಳು ಉಲ್ಲಂಘನೆ ಮಾಡಿರುವ ಆರೋಪದ ಅಡಿಯಲ್ಲಿ ಆಹಾರ ಸುರಕ್ಷತಾ ಇಲಾಖೆಯ ಅಂಕಿತ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಂಡಿದ್ದರು. ಕೆಲ ಪ್ರಕರಣಗಳ ವಿಚಾರಣೆ ನಡೆಸಿರುವ ಬಳ್ಳಾರಿ ಅಪರ ಜಿಲ್ಲಾ ಧಿಕಾರಿಗಳು ಆಹಾರ ಸುರಕ್ಷತೆ ಕಾಯ್ದೆಯಡಿಯಲ್ಲಿ ದಂಡ ವಿ ಧಿಸಿ ಇತ್ಯರ್ಥಗೊಳಿಸಿದರೆ ಇನ್ನು ಕೆಲ ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿವೆ.

 ಎಲ್ಲೆಲ್ಲಿ? ಹೊಸಪೇಟೆ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ 4, ಬಳ್ಳಾರಿ ಜೆಎಂಪಿಸಿ ನ್ಯಾಯಾಲಯದಲ್ಲಿ 1, ಹಗರಿಬೊಮ್ಮನಹಳ್ಳಿ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ 2 ಪ್ರಕರಣಗಳು ವಿಚಾರಣೆ ಹಂತದಲ್ಲಿವೆ.

ಕಲಬೆರಕೆ ಆಗುವ ಸಾಮಗ್ರಿಗಳು: ಬೆಣ್ಣೆ ಮತ್ತು ತುಪ್ಪ: ವನಸ್ಪತಿ, ಪ್ರಾಣಿಗಳ ಕೊಬ್ಬು, ಬೇಯಿಸಿದ ಆಲುಗಡ್ಡೆ, ನೀರು ಯೂರಿಯಾ, ಹಾಲು: ಬೋನಿಕ್‌ ಆಮ್ಲ, ಕೋವಾ: ಪಿಷ್ಟ ಪದಾರ್ಥಗಳು, ಪ್ರಾಣಿಗಳ ಕೊಬ್ಬು, ಖಾದ್ಯ ತೆ„ಲಗಳು: ಅರ್ಜಿಮೋನ್‌ ಆಯಿಲ್‌, ಹರಳೆಣ್ಣೆ, ಬಿಳಿ ಎಣ್ಣೆ, ದತ್ತೂರಿ ಬೀಜದ ಎಣ್ಣೆ, ಸಿಹಿ ತಿಂಡಿ, ಐಸ್‌ಕ್ರೀಮ್‌, ಶರಬತ್ತು: ಮೆಟಾಲಿನ್‌ ಹಳದಿ (ನಿಷೇಧಿ ತ ಬಣ್ಣ) ಕೃತಕ ಬಣ್ಣಗಳು ಅಧಿಕ ಪ್ರಮಾಣದಲ್ಲಿ ಬಳಕೆ. ಹಿಂಗು: ಬಣ್ಣದ ಸೇರಿಸಿದ ರಾಳ, ಚಹಾಪುಡಿ, ಬಣ್ಣ, ಹೊಟ್ಟು, ಉಪಯೋಗಿಸಿದ ಟಿ ಚರಟ, ಸಕ್ಕರೆ: ರವೆ, ಚಾಕ್‌ ಪೌಡರ್‌, ಮೆಣಸಿನ ಪುಡಿ: ನಿಷೇಧಿ ತ ಬಣ್ಣಗಳು ಮತ್ತು ಹೊಟ್ಟು. ಕಾಪಿಪುಡಿ. ಅರಿಶಿನ ಪುಡಿ: ಮೆಟಾನಿನ್‌ ಹಳದಿ (ನಿಷೇಧಿತ ಬಣ್ಣ)ಲೆಡ್‌ ಕ್ರೋಮೆಟ್‌ ಹಾಗೂ ಟಾಟ್ರಾನ್‌, ಜೇನುತುಪ್ಪ: ಸಕ್ಕರೆ ನೀರು, ಬೆಲ್ಲದ ಪಾಕ, ಅಡಿಕೆ ಪುಡಿ: ಮರದ ಹೊಟ್ಟು, ನಿಷೇ ಧಿತ ಬಣ್ಣಗಳು, ಮೆಣಸು: ಪರಂಗಿ ಬೀಜ, ಸಾಸಿವೆ: ರಾಗಿ, ಆರ್ಜಿಮೋನ್‌ ಬೀಜ, ಬೂರಾ ಸಕ್ಕರೆ: ವಾಷಿಂಗ್‌ ಸೋಡಾ, ತಂಪುಪಾನೀಯ: ಸ್ಯಾಕರಿನ್‌ ಬಳಕೆ, ಕೃತಕ ಬಣ್ಣಗಳ ಅಧಿಕ ಪ್ರಮಾಣದಲ್ಲಿ ಬಳಕೆ.

ಇವು ಹೆಚ್ಚಾಗಿ ಜನ ಸಾಮಾನ್ಯರು ದಿನನಿತ್ಯ ಬಳಕೆ ಮಾಡುವ ಪದಾರ್ಥಗಳಾಗಿರುವುದರಿಂದ ಹೆಚ್ಚಾಗಿ ಈ ಪದಾರ್ಥಗಳಲ್ಲಿ ಕಲಬೆರಕೆ ಮಾಡುವ ಸಾಧ್ಯತೆ ಹೆಚ್ಚು ಇದೆ ಎಂದು ಆಹಾರ ಸುರಕ್ಷತ ಹಾಗೂ ಗುಣಮಟ್ಟ ಇಲಾಖೆ ಗ್ರಾಹಕರಿಗೆ ಎಚ್ಚರಿಸಿದೆ.

-ಪಿ.ಸತ್ಯನಾರಾಯಣ

ಟಾಪ್ ನ್ಯೂಸ್

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

15

ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ

ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?

ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?

Neha Hiremath Case; Protest by BJP-JDS-ABVP across the state

Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ

1-eweqwe

Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

12

B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್‌ವೈ ಗರಂ

Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು1

Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.