64.25 ಕೋಟಿ ಅನುಮೋದನೆಗೆ ಸದಸ್ಯರ ತಿರಸ್ಕಾರ


Team Udayavani, Aug 18, 2017, 1:13 PM IST

18-BLR-1.jpg

ಹಗರಿಬೊಮ್ಮನಹಳ್ಳಿ: ಏತ ನೀರಾವರಿಯ 1ಕೋಟಿಗೂ ಅಧಿಕ ಅನುದಾನದ ಮೊತ್ತವನ್ನು ಕೆಲಸ ಮಾಡದೇ ಸಣ್ಣ ನೀರಾವರಿ ಇಲಾಖೆ ದುರ್ಬಳಕೆ ಮಾಡಿಕೊಂಡಿದೆ ಎಂದು ಇಲಾಖೆ ವಿರುದ್ಧ ತಾಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಬುಡ್ಡಿ ಬಸವರಾಜ ಗುಡುಗಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ಅಧ್ಯಕ್ಷೆ ನಾಗಮ್ಮ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಕ್ಷೇತ್ರದ 16 ಏತ ನೀರಾವರಿಗಳ ವಿವಿಧ ಕಾಮಗಾರಿಗಳಿಗೆ ನೀಡಿರುವ ಅನುದಾನವನ್ನು ಇಲಾಖೆಯವರು ಹಾಗೂ ಗುತ್ತಿಗೆದಾರರು ಸೇರಿ ಗುಳುಂ ಅನಿಸಿದ್ದಾರೆ. ತುಂಗಾಭದ್ರಾ ಹಿನ್ನೀರು ಬರುವ ಮುಂಚೆ ಎಲ್ಲಾ ಏತ ನೀರಾವರಿ ಯೋಜನೆ ಸುಸಜ್ಜಿತವಾಗಿಡಲು ಕಾಲುವೆಯ ಜಂಗಲ್‌ ಕಟಿಂಗ್‌, ಹೂಳು ಎತ್ತುವುದು, ಮೋಟಾರ್‌ ರಿಪೇರಿ ಸೇರಿ ವಿವಿಧ ಕೆಲಸಗಳಿಗೆ ಅನುದಾನ ದೊರೆತಿದ್ದು, ಅರ್ಧಂಬರ್ಧ ಕೆಲಸ ಮಾಡಿ ಬಿಲ್‌ ಎತ್ತುತ್ತಿದ್ದಾರೆ ಎಂದು ಏರು ದ್ವನಿಯಲ್ಲಿ ಆರೋಪಿಸಿದ ಅವರು, ರೈತರ ಕೆಲಸ ಮಾಡೋದು ಬಿಟ್ಟು ಅವರಿಗಾಗಿ ಬಂದ ಹಣವನ್ನು ನೀವು ತಿಂದರೆ ಉದ್ಧಾರವಾಗುವುದಿಲ್ಲ ಎಂದು ಸಭೆಗೆ ಆಗಮಿಸಿದ್ದ ಇಲಾಖೆಯ ಜೆಇ ಗೋಪಾಲಕೃಷ್ಣ ಅವರಿಗೆ ಚಾಟಿ ಬೀಸಿದರು.

ಇಲಾಖೆಯ ಅನುದಾನದಲ್ಲಿ ಯಾವ ಯಾವ ಕಾಮಗಾರಿ ಮಾಡಿದ್ದೀರಿ ಎಂಬುದನ್ನು ತೋರಿಸಿ ಎಂದು ತಾಪಂ ಸದಸ್ಯ ಅನಿಲ್‌ ಜಾಣ, ಮಾಳಿಗಿ ಗಿರೀಶ್‌ ಕೇಳಿದಾಗ, ಪೈಲ್‌ ಆಫಿಸ್‌ನಲ್ಲಿಯೇ ಬಿಟ್ಟು ಬಂದಿದ್ದೇನೆ ಎಂದು ಜೆಇ ಹೇಳಿದಾಗ ಗರಂ ಆದ ತಾಪಂ ಸದಸ್ಯರು ಒಕ್ಕೋರಲಿನಿಂದ ಪೈಲ್‌
ಈಗಲೇ ತನ್ನಿ ಎಂದು ಒತ್ತಾಯಿಸಿದರು. ಬನ್ನಿಕಲ್ಲು ಕೆರೆ ಬೊಂಗಾ ನಿಯಂತ್ರಿಸಲಾಗದೆ ಅಪಾರ ಪ್ರಮಾಣದಲ್ಲಿ ನೀರು ಪೋಲಾಗಲು, ರೈತರ ಪಂಪ್‌ಸೆಟ್‌ಗಳ ಅಂತರ್ಜಲ ಕುಸಿತ ಮತ್ತು ಸುತ್ತಲಿನ ಹಲವು ಗ್ರಾಮಗಳ ಕುಡಿವ ನೀರಿನ ಸಮಸ್ಯೆಗೆ ಸಣ್ಣ ನೀರಾವರಿ ಇಲಾಖೆಯ ನಿರ್ಲಕ್ಷವೇ ಕಾರಣ ಎಂದು ಸದಸ್ಯ ಕೆ.ಪ್ರಹ್ಲಾದ ಅಧಿ ಕಾರಿಯನ್ನು ತರಾಟೆಗೆ ತೆಗೆದುಕೊಂಡರು.

ಅನುಮೋದನೆ ಬೇಡ: ಈ ಸಾಲಿನ ವಿವಿಧ ಇಲಾಖೆಗಳ 64.25 ಕೋಟಿ ರೂ.ಅನುದಾನದ ಕ್ರಿಯಾಯೋಜನೆಗೆ ಅನುಮೋದನೆ ನೀಡುವಂತೆ ತಾಪಂ ಇಒ ಮಲ್ಲನಾಯ್ಕ ಸದಸ್ಯರನ್ನು ಕೋರಿದರು. ಲಿಂಗ್‌ ಡಾಕುಮೆಂಟ್‌ ಅನ್ವಯ ಆರೋಗ್ಯ ಇಲಾಖೆಯ 50.95 ಕೋಟಿ ರೂ., ಪಶುಸಂಗೋಪನೆ 1.17 ಕೋಟಿ ರೂ., ರೇಷ್ಮೆ ಇಲಾಖೆ 94.5 ಲಕ್ಷರೂ., ಶಿಕ್ಷಣ ಇಲಾಖೆಯ 10.56 ಕೋಟಿ ರೂ. ಸೇರಿ ವಿವಿಧ ಇಲಾಖೆಗಳ ಕ್ರಿಯಾ ಯೋಜನೆ ವರದಿ ಸಲ್ಲಿಸಿದರು. ಆದರೆ, ಅ ಧಿಕಾರಿಗಳು ಕನಿಷ್ಠ ಮಾಹಿತಿ ನೀಡದೆ ಕ್ರಿಯಾ ಯೋಜನೆ ರೂಪಿಸುತ್ತಿರುವ ಹಿನ್ನೆಲೆಯಲ್ಲಿ ಅನುಮೋದನೆ ಬೇಡ ಎಂದು ಸದಸ್ಯ ಮಾಳಿಗಿ ಗಿರೀಶ್‌ ಸೂಚನೆ ನೀಡಿದರು. ಸದಸ್ಯರಾದ ತಿಪ್ಪೇರುದ್ರಮುನಿ, ಅನಿಲ್‌, ಪ್ರಭಾಕರ, ಪಾಂಡುನಾಯ್ಕ ಧ್ವನಿಗೂಡಿಸಿದರು.

ಚೆಕ್‌ ಪಾವತಿಸಿ: ದಶಮಾಪುರ, ಗದ್ದಿಕೇರಿ, ಬನ್ನಿಕಲ್ಲು ಗ್ರಾಮಗಳಲ್ಲಿ ಬಾಡಿಗೆ ಆಧಾರಿತ ಖಾಸಗಿ ಕೊಳವೆಬಾವಿಗಳ ಮಾಲೀಕರಿಗೆ ಮೊತ್ತದ ಚೆಕ್‌ ಪಾವತಿ ವಿಳಂಬ ಕುರಿತು ಸದಸ್ಯ ಗಿರೀಶ್‌ ತಿಳಿಸಿದಾಗ, ಚೆಕ್‌ ವಿತರಣೆ ಕುರಿತು ಪಿಡಿಒಗಳಾದ ಜ್ಞಾನೇಶ್ವರಯ್ಯ, ಶಾಂತನಗೌಡ, ಮಂಜುನಾಥ ಸಭೆಗೆ ಮಾಹಿತಿ ನೀಡಿದರು. ಖಾಸಗಿ ಫಲಾನುಭವಿಗಳ ಕೊಳವೆ ಬಾವಿಗಳ ಬಾಡಿಗೆ ಮೊತ್ತ ನೀಡಲು ಕುಡಿವ ನೀರು ಸರಬರಾಜು ಇಲಾಖೆಗೆ ವರದಿ ಸಲ್ಲಿಸದ ಬನ್ನಿಕಲ್ಲು ಪಿಡಿಒ ವಿಜಯ್‌ಕುಮಾರ್‌, ಪಿಡಿಒ ವೀರೇಶ್‌ನನ್ನು ಇಒ ತರಾಟೆಗೆ ತೆಗೆದುಕೊಂಡರು. 

ಉಪಾಧ್ಯಕ್ಷೆ ಕೊಚಾಲಿ ಸುಶೀಲ ಮಂಜುನಾಥ, ಸದಸ್ಯರಾದ ಪಿ.ಕೊಟ್ರೇಶ, ನಾಗಾನಾಯ್ಕ, ಶ್ಯಾಮಲಾ ಮಾಲತೇಶ, ನೇತ್ರಾವತಿ ಮಲ್ಲಿಕಾರ್ಜುನ, ಬಿಕ್ಯಾಮುನಿಬಾಯಿ, ಅಧಿಕಾರಿಗಳು ಇದ್ದರು.

ಡೆಂಘೀ ಸಿಡಿಮಿಡಿ
ತಾಲೂಕಿನ ಕಡಲಬಾಳು ಗ್ರಾಮದಲ್ಲಿ ಇತ್ತೀಚೆಗೆ ಬಾಲಕಿಯೊಬ್ಬರು ಡೆಂಘೀಗೆ ಮೃತಪಟ್ಟಿದ್ದರೂ ಆರೋಗ್ಯ ಇಲಾಖೆ ಕ್ರಮ ವಹಿಸಿಲ್ಲ ಎಂದು ಸದಸ್ಯ ಅನಿಲ್‌ ಜಾಣ ಸಿಡಿಮಿಡಿಗೊಂಡರು. ಅಲ್ಲದೆ ಹೊಸದಾಗಿ 3 ಡೆಂಘೀ ಶಂಕಿತ ಪ್ರಕರಣಗಳು ಗ್ರಾಮದಲ್ಲಿ ಪತ್ತೆಯಾಗಿರುವುದಾಗಿ ಸಭೆಯ ಗಮನ ಸೆಳೆದರು. ತಾಲೂಕು ವೈದ್ಯಾಧಿಕಾರಿ  ಡಾ| ಸುಲೋಚನಾ ಪ್ರತಿಕ್ರಿಯಿಸಿ, ಗ್ರಾಮದ ಬಾಲಕಿ ಕೀರ್ತನಾ ಸಾವು ಶಂಕಿತ ಡೆಂಘೀ ಜತೆಗೆ ಹಲವು ಕಾರಣದಿಂದ ಕೂಡಿದೆ ಎಂದರು. 

ಹೊಸದಾಗಿ ಡೆಂಘೀ ಪತ್ತೆಯಾಗಿರುವ ಕುರಿತಂತೆ ಕೆಲ ವೈದ್ಯಕೀಯ ಪ್ರಮಾಣ ಪತ್ರವನ್ನು ಮೊಬೈಲ್‌ನಲ್ಲೆ ತೋರಿಸಿ ಸದಸ್ಯ ಅನಿಲ್‌ ಸಭೆಯ ಗಮನ ಸೆಳೆದರು. ಪ್ಲೇಟ್‌ಲೆಟ್ಸ್‌ ಕಡಿಮೆಯಾಗುವುದನ್ನು ಡೆಂಘೀ ಎನ್ನಲಾಗದು. ಎಲಿಸಾ ಪರೀಕ್ಷೆ ಬಳಿಕವಷ್ಟೆ ಖಚಿತವಾಗಲಿದೆ. ರೋಗ ವ್ಯಾಪವಾಗಿ ಕಂಡುಬರುವ ಕಡೆಗಳಲ್ಲಿ ಒಳ ಮತ್ತು ಹೊರ ಧೂಮೀಕರಣ ಕೈಗೆತ್ತಿಕೊಳ್ಳಲಾಗಿದೆ ಎಂದು ಡಾ| ಸುಲೋಚನಾ ತಿಳಿಸಿದರು. ಈಗಾಗಲೇ ಬಳ್ಳಾರಿಯಿಂದ ವಿಶೇಷ ತಂಡ ಗ್ರಾಮಕ್ಕೆ ಭೇಟಿ ನೀಡಿ, ಸೊಳ್ಳೆಗಳ ಲಾರ್ವಾ ಸಮೀಕ್ಷೆ ನಡೆಸಲಾಗುತ್ತಿದೆ ಎಂದರು.

ಟಾಪ್ ನ್ಯೂಸ್

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Stones Pelted: ಪಶ್ಚಿಮ ಬಂಗಾಳ: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದಿಂಗಾಲೇಶ್ವರ ಶ್ರೀ ಸ್ಪರ್ಧೆಯ ಹಿಂದೆ ಕಾಣದ ಕೈಗಳ ಕೆಲಸವಿದೆ: ಅರವಿಂದ ಬೆಲ್ಲದ್

Loksabha; ದಿಂಗಾಲೇಶ್ವರ ಶ್ರೀ ಸ್ಪರ್ಧೆಯ ಹಿಂದೆ ಕಾಣದ ಕೈಗಳ ಕೆಲಸವಿದೆ: ಅರವಿಂದ ಬೆಲ್ಲದ್

Phone Tapping; ತನಿಖೆಯಿಂದ ಸತ್ಯ ಬಯಲು: ಎಂ.ಬಿ.ಪಾಟೀಲ್‌

Phone Tapping; ತನಿಖೆಯಿಂದ ಸತ್ಯ ಬಯಲು: ಎಂ.ಬಿ.ಪಾಟೀಲ್‌

ವಿಜಯೇಂದ್ರ

Bellary; ಕಾಂಗ್ರೆಸ್ ಏನೇ ಹಾರಾಟ ಮಾಡಿದರೂ ನಮಗೆ ಲಾಭ ಆಗುತ್ತದೆ: ವಿಜಯೇಂದ್ರ

ಚುನಾವಣೆ ಬಳಿಕ ಕಾಂಗ್ರೆಸ್ ನವರು ಕೌರವರಾಗ್ತಾರೆ, ಬಿಜೆಪಿಯವರು ಪಾಂಡವರಾಗ್ತಾರೆ: ಶ್ರೀರಾಮುಲು

Election ಬಳಿಕ ಕಾಂಗ್ರೆಸ್ ನವರು ಕೌರವರಾಗ್ತಾರೆ, ಬಿಜೆಪಿಯವರು ಪಾಂಡವರಾಗ್ತಾರೆ: ಶ್ರೀರಾಮುಲು

Ballari; ಗುರು-ಶಿಷ್ಯ ಪರಂಪರೆಗೆ ವೀರಣ್ಣ ಜ್ವಲಂತ ಸಾಕ್ಷಿ

Ballari; ಗುರು-ಶಿಷ್ಯ ಪರಂಪರೆಗೆ ವೀರಣ್ಣ ಜ್ವಲಂತ ಸಾಕ್ಷಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Stones Pelted: ಪಶ್ಚಿಮ ಬಂಗಾಳ: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

5-congress

Udupi-ಚಿಕ್ಕಮಗಳೂರಿನಲ್ಲಿ ಬಿಜೆಪಿಗರೂ ಜೆಪಿ-ಜೆಪಿ ಎನ್ನುತ್ತಿದ್ದಾರೆ: ನಿಕೇತ್‌ರಾಜ್‌ ಮೌರ್ಯ

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.