ಆತ್ಮವಿಶ್ವಾಸ – ಪರಿಶ್ರಮದಿಂದ ಯಶಸ್ಸು
Team Udayavani, Sep 2, 2021, 6:31 PM IST
ಹೊಸಪೇಟೆ: ಆತ್ಮ ವಿಶ್ವಾಸ ಹಾಗೂ ಕಠಿಣ ಪರಿಶ್ರಮದಿಂದ ವಿದ್ಯಾರ್ಥಿಗಳು ಯಶಸ್ಸು ಕಾಣಬೇಕು ಎಂದು ಕೊಪ್ಪಳ ಶ್ರೀ ಗವಿಸಿದ್ದೇಶ್ವರ ಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ನಗರದ ಸ್ಟೇಶನ್ ರಸ್ತೆಯಲ್ಲಿರುವ ಚಾಣಕ್ಯ ಕರಿಯರ್ ಅಕಾಡೆಮಿ, ಧಾರವಾಡ ವತಿಯಿಂದ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶ್ರೀಗಳು ಆರ್ಶೀವಚನ ನೀಡಿದರು. ಕನಸು ಮತ್ತು ಗುರಿಯಿಲ್ಲದೇ ಯಶಸ್ಸು ಕಾಣುವುದು ಅಸಾಧ್ಯ.
ಯಶಸ್ಸು ಎಂದಿಗೂ ಸೋಮಾರಿಗಳ ಬಳಿ ಸುಳಿಯುವುದಿಲ್ಲ. ಅದು ಶ್ರಮಿಕರ ಸೊತ್ತು. ಆದರ್ಶ ಮತ್ತು ಕನಸ್ಸುಗಳಿಂದ ಯಶಸ್ಸಿನ ಮೆಟ್ಟಿಲು ಏರಬಹುದು. ಇಂಥ ಕನಸುಗಳನ್ನು ಹೊತ್ತು ವಿದ್ಯಾರ್ಥಿಗಳು ಯಶಸ್ಸನ್ನು ತಮ್ಮದಾಗಿಸಿಕೊಳ್ಳಬೇಕು ಎಂದರು.
ಸಿನಿಮಾ ಹೀರೋ ಅಥವಾ ಮಾತ್ಯಾರೋ ನಿಮಗೆ ಆದರ್ಶ ನಾಯಕರು ಆಗುವುದು ಬೇಕಿಲ್ಲ. ನಿಮ್ಮ ತಂದೆ-ತಾಯಿಗಳಿಗೆ ನಿಮಗೆ ಆದರ್ಶವಾಗಬೇಕು. ಅವರೇ ನಿಮ್ಮ ಬದುಕಿಗೆ ನಿಜವಾದ ಹೀರೋಗಳು. ಶ್ರಮದ ಹಿಂದಿನ ಅವರ ಬೆವರಿನ ಹನಿ ಮಹತ್ವ ನೀವು ಅರಿತಿರಬೇಕು.ಆಗ ಮಾತ್ರ ನೀವು ಯಶಸ್ವಿ ಶಿಖರ ಏರಲು ಸಾಧ್ಯವಾಗುವುದು ಎಂದರು.
ಚಾಣಕ್ಯ ಕರಿಯರ್ ಅಕಾಡೆಮಿ ನಿರ್ದೇಶಕ ಪ್ರದೀಪ್ ಗುಡ್ಡದ್, ಅಕ್ಕಿ ಶಿವುಕುಮಾರ್, ಹೇಮರೆಡ್ಡಿ, ಗಿರಿದರ ಗುಡ್ಡದ್, ಅಳವಂಡಿ ಯಂಕಣ್ಣ, ಮೂಲಿ ರವಿಪ್ರಸಾದ್, ವೈ. ಎಚ್.ಗೌಡರು ಹಾಗೂ ವಿದ್ಯಾರ್ಥಿಗಳು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ
ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?
Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ
Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ
Loksabha; ದಿಂಗಾಲೇಶ್ವರ ಶ್ರೀ ಸ್ಪರ್ಧೆಯ ಹಿಂದೆ ಕಾಣದ ಕೈಗಳ ಕೆಲಸವಿದೆ: ಅರವಿಂದ ಬೆಲ್ಲದ್
MUST WATCH
ಹೊಸ ಸೇರ್ಪಡೆ
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ
ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ