ರೈತ ಬೆಳೆದ ಪಸಲಿಗೆ ಉತ್ತಮ ಬೆಲೆ ಸಿಗುವಂತಾಗಲಿ: ಶ್ರೀ ಉಜ್ಜಯಿನಿ ಜಗದ್ಗುರು
Team Udayavani, Aug 21, 2021, 5:59 PM IST
ಕುರುಗೋಡು: ರಾಜ್ಯದಲ್ಲಿ ಉತ್ತಮ ಮಳೆಯಾಗಿ ರೈತ ಬೆಳೆದ ಪಸಲಿಗೆ ಉತ್ತಮ ಬೆಲೆ ಸಿಗುವಂತಾಗಲಿ ಹಾಗೂ ಸಮಾಜದ ಸರ್ವಜನಾಂಗಕ್ಕೂ ಒಳಿತಾಗಲಿ ಎಂದು ಶ್ರೀ ಉಜ್ಜಯಿನಿ ಜಗದ್ಗುರು ಅಭಿನವ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರು ನುಡಿದರು.
ತಾಲೂಕಿನ ಎಮ್ಮಿಗನೂರು ಗ್ರಾಮದ ಹಂಪಿ ಸಾವಿರ ದೇವರ ಮಠದಲ್ಲಿ ಸ್ಥಳೀಯ ಹಂಪಿ ರಾಜಗುರುಗಳಾದ ಲಿಂಗೈಕ್ಯ ಶ್ರೀಗುರು ಸಿದ್ಧಲಿಂಗ ಮಹಾಂತ ದೇಶಿಕೇಂದ್ರ ಶಿವಾಚಾರ್ಯರ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಸಾನಿಧ್ಯವಹಿಸಿ ಮಾತನಾಡಿ, ಜಾತಿ ಮತ ಪಂಥ ಭೇದಗಳನ್ನು ಮರೆತು ಶ್ರಾವಣದಲ್ಲಿ ಪೂಜಾ ಕಾರ್ಯಗಳಲ್ಲಿ ಭಾಗವಹಿಸಿದರೆ ಸರ್ವರಿಗೂ ಶುಭವಾಲಿದೆ ಎಂದು ಸಂದೇಶ ನೀಡಿದರು.
ಪ್ರತಿಯೊಬ್ಬ ಮನುಷ್ಯನಿಗೂ ಗುರುವಿನ ಮೇಲೆ ನಂಬಿಕೆ, ಸೇವಾಮನೋಭಾವ ಹಾಗೂ ಆದರ್ಶ ಗುಣಗಳು ಇದ್ದರೆ ಮಾತ್ರ ಗುರುವಿನ ಶಕ್ತಿ ಅರ್ಥಮಾಡಿಕೊಂಡು ಶಾಶ್ವತ ಸುಖ ಅನುಭವಿಸಲು ಸಾಧ್ಯ ಎಂದು ಹೇಳಿದರು.
ಹಂಪೆ ಸಾವಿರ ಮಠದ ಶ್ರೀ ವಾಮದೇವ ಮಹಾಂತಿನ ಶಿವಚಾರ್ಯರು ಮಾತನಾಡಿ, ಮಕ್ಕಳಿಗೆ ಧರ್ಮ ಸಂಸ್ಕಾರ, ನೈತಿಕ ಮತ್ತು ಮಾನವೀಯ ಮೌಲ್ಯಗಳನ್ನು ಬಾಲ್ಯದಲ್ಲೇ ಬೆಳೆಸಿಕೊಳ್ಳುವಲ್ಲಿ ಜಾಗೃತಿವಹಿಸಬೇಕು. ಗುರು ಪಂರಪರೆ ಮಠಗಳೊಂದಿಗೆ ನಿರಂತರ ಅವಿನಾಭಾವ ಸಂಬಂಧ ಇಟ್ಟುಕೊಳ್ಳುವ ಮೂಲಕ ಧರ್ಮ ಪರಂಪರೆಗಳನ್ನು ಪೋಷಿಸುವಲ್ಲಿ ಮುಂದಾಗಬೇಕು ಎಂದು ಹೇಳಿದರು.
ಅಂದು ಬೆಳಿಗ್ಗೆ. ಮಠದಲ್ಲಿ ಗದ್ದುಗೆ ನಸಿಕಿನ ಜಾವ ಮಹಾಭಿಷೇಕ, ಬಿಲ್ವಾರ್ಚನೆ, ಮಹಾಮಂಗಳಾರತಿ, ಅಭಿಷೇಕ,ಪುಪ್ಪಅರ್ಚನೆ, ಇತರೆ ಧಾರ್ಮಿಕ ವಿಶೇಷ ಪೂಜೆಗಳು ಮಹಾಪ್ರಸಾದ ವಿತರಣೆ ಜರುಗಿತು. ಈ ವೇಳೆ ಮುಕ್ತಿಮಂದಿರ ವಿಮಲಾ ರೇಣುಕಾ ಶಿವಾಚಾರ್ಯರು, ಮಸ್ಕಿ ವರರುದ್ರಮುನಿ ಸ್ವಾಮಿಜಿ, ಹರಗಿನಡೋಣಿ ಸಿದ್ದಲಿಂಗ ಸ್ವಾಮಿಜಿ, ಕಮ್ಮರುಚೇಡು ಕಲ್ಯಾಣ ಸ್ವಾಮಿಜಿ, ಹರಳಳ್ಳಿ ಭುವನೇಶ್ವರ ತಾತ,
ಕಂಪ್ಲಿ ಶಾಸಕ ಜೆ ಎನ್ ಗಣೇಶ, ಮಾಜಿ ಶಾಸಕ ಟಿ ಎಚ್ ಸುರೇಶ ಬಾಬು, ಮುಖಂಡರಾದ ಬಿ. ಮಹೇಶಗೌಡ, ಬಿ. ಸದಾಶಿವಪ್ಪ, ಬಾದನಹಟ್ಟಿ ತಿಮ್ಮಪ್ಪ, ಬಾಜರ್ ಬಸವನಗೌಡ, ಘನಮಠೆಸ್ವಾಮಿ, ಮಸೀದಿಪುರದ ಸಿದ್ದರಾಮಗೌಡ, ಗ್ರಾಪಂ ಸದಸ್ಯರು ಸೇರಿದಂತೆ ಸುತ್ತಮುತ್ತಲಿನ ನೂರಾರು ಭಕ್ತರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ