ವಿಜಯ ದಿವಸ: ಮಾಜಿ ಸೈನಿಕರಿಗೆ ಸನ್ಮಾನ
Team Udayavani, Jul 27, 2017, 9:36 AM IST
ಹಗರಿಬೊಮ್ಮನಹಳ್ಳಿ: ಭಾರತ ದೇಶ ಜ್ಞಾನ ಹಾಗೂ ಭೌತಿಕ ಶ್ರೀಮಂತಿಕೆಯಿಂದ ಪ್ರಪಂಚದಲ್ಲಿಯೇ ಶ್ರೇಷ್ಠತೆ ಹೊಂದಿದೆ ಎಂದು ಸಾಮಾಜಿಕ ಕಾರ್ಯಕರ್ತ ಹುಲ್ಲೇನವರ ಶಿವಾನಂದ ಹೇಳಿದರು.
ಅವರು ಮಾಲವಿಯ ಸಮಾಹಿಪ್ರಾ ಶಾಲೆಯಲ್ಲಿ ಕಾರ್ಗಿಲ್ ವಿಜಯ ದಿವಸದ ಅಂಗವಾಗಿ ನಡೆದ ಮಾಜಿ ಸೈನಿಕರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಇಂದಿನ ಯುವಕರು ದೇಶಪ್ರೇಮ, ದೇಶಭಕ್ತಿ ಬೆಳಸಿಕೊಳ್ಳಬೇಕು. ನಮ್ಮ ದೇಶವು ತ್ಯಾಗ, ಕರ್ಮ, ಮೋಕ್ಷದ ನಾಡು ಎಂದು ಮಹತ್ವ ಪಡೆದಿದೆ. ಅನೇಕ ವರ್ಷ ಅನ್ಯರ ದಾಳಿ ಮತ್ತು ಆಡಳಿತದ ನಂತರ ಸ್ವಾತಂತ್ರ್ಯ ಪಡೆದವು. ಈ ಸ್ವಾತಂತ್ರ್ಯ ಉಳಿಯಲು ನಮ್ಮ ಸೈನಿಕರು ಕಾರಣರಾಗಿದ್ದಾರೆ. ಅವರ ಸೇವೆ, ಶ್ರಮ ಮತ್ತು ತ್ಯಾಗದಿಂದ ನಾವು ಸಂತಸದಿಂದಿರಲು ಸಾಧ್ಯ ಎಂದರು.
ಮಾಲವಿ ಶಾಲೆಯ ಹಿರಿಯ ವಿದ್ಯಾರ್ಥಿ ಚಲವಾದಿ ಜಗದೀಶ, ಶಿಕ್ಷಕ ಪರಮೇಶ್ವರಯ್ಯ ಸೊಪ್ಪಿಮಠ ಮಾತನಾಡಿದರು. ದೇಶದ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದ ಉತ್ತಂಗಿ ಈರಣ್ಣ ಮತ್ತು ಎಚ್. ಶ್ರೀನಿವಾಸ ಅವರನ್ನು ಸನ್ಮಾನಿಸಲಾಯಿತು. ಶ್ರೀನಿವಾಸ ತಾವು ಕಾರ್ಗಿಲ್ ಪ್ರದೇಶದಲ್ಲಿ ಕೆಲಸ ನಿರ್ವಹಿಸಿದ ಅನುಭವನ್ನು ಹಂಚಿಕೊಂಡರು. ಮುಖ್ಯಗುರು ಕೆ. ಗೋವಿಂದಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಮುಖಂಡ ಬಿ.ಮೌನೇಶ, ಪ್ರೌಢಶಾಲಾ ಮುಖ್ಯಗುರು ಆರ್. ಎಂ. ಜಗದೀಶ್ವರಯ್ಯ, ಉರ್ದು ಶಾಲೆಯ ಸಯ್ಯದ ರೋಜಿನಿ ಯಾಮಿನಿ, ನೌಕರ ಸಂಘದ ಗೌರವಾಧ್ಯಕ್ಷ ಎಂ. ಶಂಭುಲಿಂಗಪ್ಪ, ಶಿಕ್ಷಕರಾದ ಎಂ.ಎಂ. ಶಿವಪ್ರಕಾಶ, ಉಜ್ಜನಗೌಡ್ರು, ಕೆ.ನಂದ್ಯಪ್ಪ, ವಿ.ನಾಗಲಕ್ಷ್ಮೀ, ಸಂತೋಷ್, ಭರಮಪ್ಪ, ಗಾಳೆಪ್ಪ, ರಂಜನಿ ಉಪಸ್ಥಿತರಿದ್ದರು. ಶ್ವೇತ, ಜಯಪ್ಪ, ಚೆನ್ನಪ್ಪ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ
ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?
Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ
Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ
Loksabha; ದಿಂಗಾಲೇಶ್ವರ ಶ್ರೀ ಸ್ಪರ್ಧೆಯ ಹಿಂದೆ ಕಾಣದ ಕೈಗಳ ಕೆಲಸವಿದೆ: ಅರವಿಂದ ಬೆಲ್ಲದ್
MUST WATCH
ಹೊಸ ಸೇರ್ಪಡೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
LS Polls: ರಾಜ್ಯದ ಜನರಿಗೆ ಈಶ್ವರಪ್ಪ ಸ್ಪರ್ಧೆ ವಿಷಯ ಈಗ ಖಚಿತ: ಈಶ್ವರಪ್ಪ
ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು
Clay Pot: ಬಡವರ ಫ್ರಿಡ್ಜ್ ಮಣ್ಣಿನ ಮಡಕೆ
ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ