ನೀರು ಜಾಗತಿಕ ಸಮಸ್ಯೆ


Team Udayavani, Dec 18, 2018, 4:43 PM IST

bell-01.jpg

ಹೊಸಪೆಟೆ: ಕನ್ನಡ ವಿಶ್ವವಿದ್ಯಾಲಯದ ಅಧ್ಯಾಪಕರು ಸಂಶೋಧನೆಯ ಆಚೆಯೂ ಕ್ರಿಯಾಶೀಲರಾಗಿರುತ್ತಾರೆ ಎಂಬುದನ್ನು “ನೀರು ತಂದವರು” ಚಲನಚಿತ್ರ ಪ್ರತಿನಿಧಿಸುತ್ತಿದೆ ಎಂದು ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ|  ರಹಮತ್‌ ತರೀಕೆರೆ ಅಭಿಪ್ರಾಯಪಟ್ಟರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಂಟಪ ಸಭಾಂಗಣದಲ್ಲಿ ಸೋಮವಾರ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ
ವತಿಯಿಂದ ಆಯೋಜಿಸಿದ್ದ ಡಾ| ಅಮರೇಶ ನುಗಡೋಣಿಯವರ ಕಥೆ ಆಧಾರಿತ “ನೀರು ತಂದವರು’ ಚಲನಚಿತ್ರ ಪ್ರದರ್ಶನ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ ಅವರು, ದೃಶ್ಯ ಮಾಧ್ಯಮಕ್ಕೆ ಪ್ರತಿಕ್ರಿಯಿಸಲು ನಮಗೆ ಇನ್ನು ತಾಂತ್ರಿಕ ತರಬೇತಿ ದೊರೆತಿಲ್ಲ. ಆದ್ದರಿಂದ ಸಾಹಿತ್ಯಕವಾಗಿ ವಿಮರ್ಶೆ ಮಾಡಲಾಗುತ್ತದೆ. ಚಲನಚಿತ್ರವು
ಅತ್ಯಂತ ಹಿಡಿತವಾಗಿ ಲವಲವಿಕೆಯಿಂದ ಸಾಗುತ್ತದೆ. ಮಹಿಳೆಯ ಪಾತ್ರ ವಿಶೇಷವಾಗಿದೆ. ಪುರುಷರ ಅಹಂಕಾರ,
ರಾಜಕೀಯ, ಜಾತಿ ಸಂಘರ್ಷಗಳ ನಡುವೆ ಮಹಿಳೆಯರು ತಮ್ಮ ವಿವೇಕ ಮೆರೆಯುತ್ತಾರೆ. ವಾಸ್ತವಗಳನ್ನು ಮೀರುವ ಆದರ್ಶದ ಆಶಯ ಹಾಗೂ ಅಸ್ಪೃಶ್ಯತೆಯನ್ನು ಮುರಿಯುವ ಆಶಯ ಸಿನಿಮಾದಲ್ಲಿದೆ. ನೀರು ಕರ್ನಾಟಕದ ಊರು ಕೇರಿಗಳ ಸಮಸ್ಯೆ ಮಾತ್ರವಲ್ಲ. ಕರ್ನಾಟಕ ತಮಿಳುನಾಡು, ಪಾಕಿಸ್ತಾನ ಭಾರತ, ನೇಪಾಳ ಭಾರತಗಳ ನಡುವೆ ಇದ್ದು, ಇದೊಂದು ಜಾಗತಿಕ ಸಮಸ್ಯೆಯಾಗಿದೆ ಎಂದು ಹೇಳಿದರು.

ಕಥೆಗಾರ ಹಾಗೂ ಪ್ರಾಧ್ಯಾಪಕ ಡಾ| ಅಮರೇಶ ನುಗಡೋಣಿ ಮಾತನಾಡಿ, ನಾನು ಬರೆದ ಕಥೆಯಲ್ಲಿ ನೀರು ಸ್ವೀಕರಿಸಿಲ್ಲ. ಆದರೆ ಸಿನಿಮಾದಲ್ಲಿ ಕೇರಿಯವರಿಂದ ಊರಿನವರು ನೀರು ಸ್ವೀಕರಿಸುವ ದೃಶ್ಯವಿದೆ. ನನ್ನದು ಭಾಷಾ
ಮಾಧ್ಯಮ. ಕಥೆಗೂ ಸಿನಿಮಾಕ್ಕೂ ಬಹಳ ವ್ಯತ್ಯಾಸಗಳಿವೆ. ಸಿನಿಮಾದವರು ಒಂದು ಹೆಜ್ಜೆ ಮುಂದಿಟ್ಟು ನೀರನ್ನು
ಮಹಿಳೆಯರ ಮೂಲಕ ಊರಿಗೆ ತಲುಪಿಸಿದ್ದಾರೆ. “ನೀರು ತಂದವರು’ ಸಿನಿಮಾ ಪೂರ್ತಿ ಕಮರ್ಷಿಯಲ್‌
ಆಗಿಲ್ಲ ಅಥವಾ ಕಲಾತ್ಮಕವಾಗಿಯೂ ಇಲ್ಲ ಎಂದು ಅಭಿಪ್ರಾಯಪಟ್ಟರು.

ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ಅಧ್ಯಕ್ಷ ನಿಡಸಾಲೆ ಪುಟ್ಟಸ್ವಾಮಯ್ಯ ಮಾತನಾಡಿ, ಸಿನಿಮಾದಲ್ಲಿನ ಪಾತ್ರಗಳು ನಿರ್ದೇಶಕರ ಕೈಯಲ್ಲಿರುತ್ತವೆ. 26 ವರ್ಷಗಳ ಹಿಂದೆ ನುಗಡೋಣಿ ಅವರು ಬರೆದ ಕಥೆಯನ್ನು 40 ಲಕ್ಷ ರೂ. ಬಂಡವಾಳದಲ್ಲಿ ಚಲನಚಿತ್ರ ಮಾಡಲಾಗಿದೆ.”ನೀರು ತಂದವರು’ ಚಲನಚಿತ್ರವು ಕ್ಯಾಲಿಫೋರ್ನಿಯ ಇಂಟರ್‌ನ್ಯಾಷನಲ್‌ ಫಿಲಂ ಫೆಸ್ಟಿವಲ್‌ ಹಾಗೂ ಇಂಟರ್‌ನ್ಯಾಷನಲ್‌ ಫಿಲಂ ಫೆಸ್ಟಿವಲ್‌ನಲ್ಲಿ ಪ್ರದರ್ಶನ ಕಂಡಿದೆ. ಅಲ್ಲದೇ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದಿದೆ. ನಿಮ್ಮೆಲ್ಲರ ಪ್ರೋತ್ಸಾಹ ಬೇಕು ಎಂದರು.

ಅಧ್ಯಕ್ಷತೆ ವಹಿಸಿದ ಮಾತನಾಡಿದ ಕುಲಪತಿ ಡಾ| ಮಲ್ಲಿಕಾ ಎಸ್‌. ಘಂಟಿ, ಮೂಲ ಕೃತಿಯ ಆಶಯಕ್ಕೆ ಧಕ್ಕೆ ಬರದ
ಹಾಗೆ ಚಲನಚಿತ್ರ ಮಾಡಲಾಗಿದೆ. ಪ್ರೇಕ್ಷಕನ ಬಯಕೆಗೆ ತಕ್ಕಂತೆ ಸಾಹಿತ್ಯ ಕೃತಿಯನ್ನು ಬಗ್ಗಿಸುವುದು ನಿರ್ದೇಶಕರಿಗೆ
ನಿಜವಾಗಿಯೂ ಒಂದು ಸವಾಲಾಗಿದೆ. ಸಾಮಾಜಿಕ ಅಪಮಾನಗಳಿಗೆ ದೃಶ್ಯ ಮಾಧ್ಯಮ ಹಾಗೂ ಪ್ರೇಕ್ಷಕ ಹೇಗೆ
ಪ್ರತಿಕ್ರಿಯಿಸುತ್ತಾನೆ ಎಂಬುದು ಮುಖ್ಯ ಎಂದರು.

1970ರಿಂದ ಓದಿದ ದಲಿತ ಓದಲಾರದ ಜಮೀನಾರರ ನಡುವೆ ತಿಕ್ಕಾಟಗಳಿವೆ. ಇಂದಿಗೂ ನೀರು ಮತ್ತು ಜಾತಿಯ ಭಯಾನಕತೆ ಹಳ್ಳಿಗಳಲ್ಲಿ ಕಾಣಬಹುದು. ಚಲನಚಿತ್ರದಲ್ಲಿಯ ವಸ್ತ್ರಾಲಂಕಾರವು ಉತ್ತರ ಕರ್ನಾಟಕವನ್ನು
ಪ್ರತಿನಿಧಿಸುತ್ತದೆ. ನೀವು ಊರಿಗೆ ಹೋದಾಗ ಕೇರಿಯವರನ್ನು ಪ್ರೀತಿಸಲು ಕಲಿಯಿರಿ. ಊರು ಕೇರಿ ಬಂದಾಗ ಕೇರಿ
ಊರಿಗೆ ಹೋದಾಗ ಮಾತ್ರ “ನೀರು ತಂದವರು’ ಸಿನಿಮಾ ಸಾರ್ಥಕವಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು
ಹೇಳಿದರು.

ಇದೇ ಸಂದರ್ಭದಲ್ಲಿ ಚಿಗುರು ಕ್ರಿಯೆಷನ್ಸ್‌ ತಂಡದ ವತಿಯಿಂದ ಡಾ| ಅಮರೇಶ ನುಗಡೋಣಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ನಂತರ “ನೀರು ತಂದವರು’ ಚಲನಚಿತ್ರ ಪ್ರದರ್ಶಿಸಲಾಯಿತು. ಸಿಬ್ಬಂದಿಗಳು,
ವಿದ್ಯಾರ್ಥಿಗಳು ಕಸ್ತೂರ ಬಾ ಶಾಲೆಯ ಮಕ್ಕಳು, ಅಧ್ಯಾಪಕರು, ಚಲನಚಿತ್ರ ಕಲಾವಿದರು, ಕುಲಪತಿಯವರು
ಚಲನಚಿತ್ರ ವೀಕ್ಷಿಸಿದರು.

ಬಳಿಕ ನಡೆದ ಸಂವಾದದಲ್ಲಿ ಅಧ್ಯಾಪಕರಾದ ಡಾ| ಸಿದ್ದಗಂಗಮ್ಮ, ಡಾ| ವೀರೇಶ ಬಡಿಗೇರ, ಡಾ| ಮಲ್ಲಿಕಾರ್ಜುನ ವಣೇನೂರ, ಡಾ| ಅಮರೇಶ ಯತಗಲ್‌ ಹಾಗೂ ವಿದ್ಯಾರ್ಥಿಗಳಾದ ಸಂಗಮೇಶ, ರೇಖಾ, ಮಂಜುನಾಥ್‌, ಸಿದ್ದಪ್ಪ ಮಾದರ, ಪಂಚಾಕ್ಷರಿ ಸ್ವಾಮಿ ಹಿರೇಮಠ, ಗಾಯತ್ರಿ ಬಾವಿಕಟ್ಟೆ, ವಿಶ್ವನಾಥ ಪತ್ತಾರ, ಚೌಡಪ್ಪ, ಅನುಷಾ ಮೊದಲಾದವರು ಸಂವಾದಿಸಿದರು.

ಸಿನಿಮಾದಲ್ಲಿನ ಪಾತ್ರಗಳು ನಿರ್ದೇಶಕರ ಕೈಯಲ್ಲಿರುತ್ತವೆ. 26 ವರ್ಷಗಳ ಹಿಂದೆ ನುಗಡೋಣಿ ಅವರು ಬರೆದ ಕಥೆಯನ್ನು 40 ಲಕ್ಷ ರೂ. ಬಂಡವಾಳದಲ್ಲಿ ಚಲನಚಿತ್ರ ಮಾಡಲಾಗಿದೆ.”ನೀರು ದವರು’ ಚಲನಚಿತ್ರವು ಕ್ಯಾಲಿಫೋರ್ನಿಯ ಇಂಟರ್‌ ನ್ಯಾಷನಲ್‌ ಫಿಲಂ ಫೆಸ್ಟಿವಲ್‌ ಹಾಗೂ ಇಂಟರ್‌ನ್ಯಾಷನಲ್‌ ಫಿಲಂ ಫೆಸ್ಟಿವಲ್‌ನಲ್ಲಿ ಪ್ರದರ್ಶನ ಕಂಡಿದೆ.  ನಿಡಸಾಲೆ ಪುಟ್ಟಸ್ವಾಮಯ್ಯ, ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ಅಧ್ಯಕ್ಷರು.

ಟಾಪ್ ನ್ಯೂಸ್

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

ಕಾಂಗ್ರೆಸ್‌ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ

Loksabha election; ಕಾಂಗ್ರೆಸ್‌ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ

Temperature ರಾಜ್ಯದ 10 ಜಿಲ್ಲೆಗಳಲ್ಲಿ ಬೀಸಲಿದೆ ಬಿಸಿಗಾಳಿ

Temperature ರಾಜ್ಯದ 10 ಜಿಲ್ಲೆಗಳಲ್ಲಿ ಬೀಸಲಿದೆ ಬಿಸಿಗಾಳಿ

6-court

Mangaluru: ಬಾಲಕಿಯನ್ನು ಅಪಹರಿಸಿ ಅತ್ಯಾಚಾರ; ಅಪರಾಧಿಗೆ 10 ವರ್ಷ ಕಠಿನ ಕಾರಾಗೃಹ ಶಿಕ್ಷೆ

ಸಂಪತ್ತು ಹಂಚಿಕೆ ಬಗ್ಗೆ ನಾವೆಲ್ಲಿ ಹೇಳಿದ್ದೇವೆ: ಖರ್ಗೆ ಪ್ರಶ್ನೆ

ಸಂಪತ್ತು ಹಂಚಿಕೆ ಬಗ್ಗೆ ನಾವೆಲ್ಲಿ ಹೇಳಿದ್ದೇವೆ: ಖರ್ಗೆ ಪ್ರಶ್ನೆ

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: 405 ಸೂಕ್ಷ್ಮ ಮತಗಟ್ಟೆ : ಕೆ. ವಿದ್ಯಾಕುಮಾರಿ

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: 405 ಸೂಕ್ಷ್ಮ ಮತಗಟ್ಟೆ : ಕೆ. ವಿದ್ಯಾಕುಮಾರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?

ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?

Neha Hiremath Case; Protest by BJP-JDS-ABVP across the state

Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ

1-eweqwe

Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ

ದಿಂಗಾಲೇಶ್ವರ ಶ್ರೀ ಸ್ಪರ್ಧೆಯ ಹಿಂದೆ ಕಾಣದ ಕೈಗಳ ಕೆಲಸವಿದೆ: ಅರವಿಂದ ಬೆಲ್ಲದ್

Loksabha; ದಿಂಗಾಲೇಶ್ವರ ಶ್ರೀ ಸ್ಪರ್ಧೆಯ ಹಿಂದೆ ಕಾಣದ ಕೈಗಳ ಕೆಲಸವಿದೆ: ಅರವಿಂದ ಬೆಲ್ಲದ್

Phone Tapping; ತನಿಖೆಯಿಂದ ಸತ್ಯ ಬಯಲು: ಎಂ.ಬಿ.ಪಾಟೀಲ್‌

Phone Tapping; ತನಿಖೆಯಿಂದ ಸತ್ಯ ಬಯಲು: ಎಂ.ಬಿ.ಪಾಟೀಲ್‌

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Dina Bhavishya

Daily Horoscope; ಉದ್ಯೋಗಸ್ಥರಿಗೆ ಹಿತಶತ್ರುಗಳ ಕಾಟ.ಶನಿ ಅನುಗ್ರಹ ಪ್ರಾಪ್ತಿಯ ಸಮಯ

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

ಕಾಂಗ್ರೆಸ್‌ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ

Loksabha election; ಕಾಂಗ್ರೆಸ್‌ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ

Temperature ರಾಜ್ಯದ 10 ಜಿಲ್ಲೆಗಳಲ್ಲಿ ಬೀಸಲಿದೆ ಬಿಸಿಗಾಳಿ

Temperature ರಾಜ್ಯದ 10 ಜಿಲ್ಲೆಗಳಲ್ಲಿ ಬೀಸಲಿದೆ ಬಿಸಿಗಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.