ದೇವದಾಸಿ ಪದ್ಧತಿ ಹೆಸರಲ್ಲಿ ಮಹಿಳೆ ಶೋಷಣೆ
Team Udayavani, Mar 13, 2018, 5:23 PM IST
ಕೊಟ್ಟೂರು: ಧಾರ್ಮಿಕವಾಗಿ ಮಹಿಳೆಯರನ್ನು ದೇವದಾಸಿ ಪದ್ಧತಿ ಹೆಸರಿನಲ್ಲಿ ಶೋಷಣೆ ಮಾಡಲಾಗುತ್ತಿದೆ ಎಂದು ಭಾರತೀಯ
ಜನಶಕ್ತಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅನುಪಮಾ ಶೆಣೈ ಹೇಳಿದರು.
ಇಲ್ಲಿನ ಎಪಿಎಂಸಿ ಅವರಣದಲ್ಲಿ ಜ್ಯೂನಿಯರ್ ಚೇಂಬರ್ ಆಪ್ ಇಂಟರ್ನ್ಯಾಷನಲ್ ಹಾಗೂ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ
ಸಂಸ್ಥೆ ವತಿಯಿಂದ ರವಿವಾರ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆ ಹಾಗೂ ಮಹಿಳಾ ಸಾಧಕರಿಗೆ ಸನ್ಮಾನ ಕಾರ್ಯಕ್ರಮ
ಉದ್ಘಾಟಿಸಿ ಅವರು ಮಾತನಾಡಿದರು. ಮಹಿಳೆಯರನ್ನು ಧಾರ್ಮಿಕ ಹೆಸರಿನಲ್ಲಿ ದೇವದಾಸಿ ಪದ್ದತಿ ಹಾಗೂ ಸತಿಸಹಗಮನ ಪದ್ಧತಿಯಿಂದ ಶೋಷಣೆಗೆ ಒಳಪಡಿಸಲಾಗುತ್ತಿದೆ. ದೇವದಾಸಿ ಪದ್ಧತಿ ಕದ್ದು ಮುಚ್ಚಿ ನಡೆಯುತ್ತಿವೆ ಎಂದು ಮಹಿಳೆಯರಿಗಾಗುವ ನೋವನ್ನು ಹಂಚಿಕೊಂಡರು. ಮಹಿಳೆಯರು ಆರ್ಥಿಕವಾಗಿ, ಶಿಕ್ಷಣವಾಗಿ ಎಲ್ಲ ರಂಗದಲ್ಲೂ ಸಬಲೆಯಾದಾಗ ಅಭಿವೃದ್ಧಿ ಸಾಧ್ಯ.
ಮಕ್ಕಳಿಗೆ ಉತ್ತಮ ಸಂಸ್ಕಾರ ಕಲ್ಪಿಸುವುದು, ಕುಟುಂಬ ನಿರ್ವಹಣೆಯನ್ನು ಮಹಿಳೆ ಸಮರ್ಥವಾಗಿ ನಿಭಾಯಿಸುತ್ತಾಳೆ. ಸಮಾಜದಲ್ಲಿ
ಮಹಿಳೆಯ ಪಾತ್ರ ಮಹತ್ವವಾದ್ದದು. ಮಹಿಳೆಯರ ಮೇಲಿನ ಶೋಷಣೆ ನಿಲ್ಲಬೇಕಿದೆ ಎಂದರು.
ಜ್ಯೂನಿಯರ್ ಚೇಂಬರ್ ಆಪ್ ಇಂಟರ್ನ್ಯಾಷನಲ್ ವಲಯ ನಿರ್ದೆಶಕ ಪಂಪಾಪತಿ ಅಂಗಡಿ, ಧರ್ಮಸ್ಥಳ ಸಂಸ್ಥೆಯ ವಲಯ ಮೇಲ್ವಿಚಾರಕ ರಾಮಚಂದ್ರ ಮಾತನಾಡಿದರು. ಕೂಡ್ಲಿಗಿ ತಾಪಂ ಅಧ್ಯಕ್ಷ ಬಿ.ವೆಂಕಟೇಶ್ ನಾಯ್ಕ, ಜ್ಯೂನಿಯರ್ ಇಂಟರ್ ನ್ಯಾಶನಲ್ ಮಹಿಳಾ ವಿಬಾಗದ ಅಧ್ಯಕ್ಷೆ ವಿದ್ಯಾಶ್ರೀ, ಘಟಕದ ಅಧ್ಯಕ್ಷೆ ಎಸ್.ಎಂ. ನಳಿನಿ, ಹಡಗಲಿ ಶಾಖೆಯ ಅಧ್ಯಕ್ಷೆ ಹೇಮಾಕಿರಣ್ ಜೈನ್, ಕಾರ್ಯದರ್ಶಿ ಗುರುಬಸವರಾಜ, ಮಕ್ಕಳ ವಿಭಾಗದ ಅಧ್ಯಕ್ಷೆ ಮೇಘನಾ ಬಿ. ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Loksabha; ದಿಂಗಾಲೇಶ್ವರ ಶ್ರೀ ಸ್ಪರ್ಧೆಯ ಹಿಂದೆ ಕಾಣದ ಕೈಗಳ ಕೆಲಸವಿದೆ: ಅರವಿಂದ ಬೆಲ್ಲದ್
Phone Tapping; ತನಿಖೆಯಿಂದ ಸತ್ಯ ಬಯಲು: ಎಂ.ಬಿ.ಪಾಟೀಲ್
Bellary; ಕಾಂಗ್ರೆಸ್ ಏನೇ ಹಾರಾಟ ಮಾಡಿದರೂ ನಮಗೆ ಲಾಭ ಆಗುತ್ತದೆ: ವಿಜಯೇಂದ್ರ
Election ಬಳಿಕ ಕಾಂಗ್ರೆಸ್ ನವರು ಕೌರವರಾಗ್ತಾರೆ, ಬಿಜೆಪಿಯವರು ಪಾಂಡವರಾಗ್ತಾರೆ: ಶ್ರೀರಾಮುಲು
Ballari; ಗುರು-ಶಿಷ್ಯ ಪರಂಪರೆಗೆ ವೀರಣ್ಣ ಜ್ವಲಂತ ಸಾಕ್ಷಿ
MUST WATCH
ಹೊಸ ಸೇರ್ಪಡೆ
ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ವ್ಯಂಗ್ಯ
ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
ದೇಶದ ಅಭಿವೃದ್ಧಿಗೆ ಮೋದಿ ಗ್ಯಾರಂಟಿಯೇ ಶಾಶ್ವತ: ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ
ದೇಶ ಒಡೆಯುವ ಮಾನಸಿಕತೆ ಕಾಂಗ್ರೆಸ್ನದ್ದು: ಮೀನಾಕ್ಷಿ ಲೇಖಿ