ಕಾರ್ಮಿಕರ ಉದ್ಯೋಗ ಕಸಿದುಕೊಳ್ಳದಿರಲು ಆಗ್ರಹ
Team Udayavani, Jul 27, 2017, 1:20 PM IST
ಸಂಡೂರು: ತಾಲೂಕಿನಾದ್ಯಂತ ಇರುವ ಚಾಲಕರು, ಕ್ಲಿನರ್ಗಳು, ಗ್ಯಾರೇಜ್ ಕೆಲಸಗಾರರು ಅದಿರು ಸಾಗಾಟವನ್ನೇ ನಂಬಿಕೊಂಡು ಬದುಕುತ್ತಿದ್ದು, ಈಗ ಏಕಾಏಕಿ ಕ್ವೇಯರ್ ಬ್ಯಾಲ್ಟ್ ಹಾಕುವ ಮೂಲಕ ಸಾವಿರಾರು ಕಾರ್ಮಿಕರ
ಉದ್ಯೋಗ ಕಸಿದುಕೊಳ್ಳುವ ಕಾರ್ಯ ನಡೆಯುತ್ತಿದ್ದು ತಕ್ಷಣ ನಿಲ್ಲಿಸಬೇಕೆಂದು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಕೆ.ಮಲ್ಲಿಕಾರ್ಜುನ ಒತ್ತಾಯಿಸಿದರು.
ಅವರು ಪಟ್ಟಣದಲ್ಲಿ ತಾಲೂಕು ಲಾರಿ ಮಾಲೀಕರು, ರೈತ ಸಂಘದವರು, ಕರವೇ, ದಸಂಸ, ಹಸಿರುಸೇನೆ, ಆಟೋ ಮಾಲೀಕರ ಸಂಘ, ಪ್ರಜಾಸೇನೆ ಹಾಗೂ ಇತರ ಸಂಘ ಸಂಸ್ಥೆಗಳು ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ ತಾಲೂಕಿನಾದ್ಯಂತ ಗಣಿಯಿಂದ ಬದುಕುತ್ತಿರುವವರಿಗೆ ಉದ್ಯೋಗ ತಪ್ಪುತ್ತಿದ್ದು ಎಲ್ಲಾ ರೀತಿಯಲ್ಲಿ ಯಾಂತ್ರೀಕರಣ ಮಾಡುತ್ತಿದ್ದಾರೆ. ಕನ್ವೇಯರ್ ಬೆಲ್ಟ್ ಹಾಕುತ್ತಿದ್ದು ಇದರಿಂದ ಸಾವಿರಾರು ಕುಟುಂಬಗಳು
ಬೀದಿಪಾಲಾಗುತ್ತಿದ್ದು ಇವುಗಳನ್ನು ರಕ್ಷಿಸುವ ಕಾರ್ಯ ಮಾಡಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಸಂಘಗಳ ಅಧ್ಯಕ್ಷರಾದ ಯರ್ರಿಸ್ವಾಮಿ, ಕೊಟ್ರೇಶ್, ಹೆಗಡೆ, ಡಿ.ಎಸ್. ಬಾಬು, ಪರಶುರಾಮ, ಶಿವಲಿಂಗಪ್ಪ, ಕೆ.ಆರ್.
ಕುಮಾರಸ್ವಾಮಿ, ಪಿ.ರಾಜು, ಪಿ.ಜಯಣ್ಣ, ಸತೀಶ್, ಭಾಷಾ, ಪಿ.ಎಸ್. ಧರ್ಮಾನಾಯ್ಕ, ಮಂಜು, ಬಿ.ಎಂ. ಉಜ್ಜಿನಯ್ಯ, ಧರ್ಮಾಪುರ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಜಿ.ಎಸ್.ಸಿದ್ದಪ್ಪ, ಖಾಸೀಂ, ಪ್ರಕಾಶ್, ಬದ್ರುದ್ದೀನ್, ಚಿನ್ನಪ್ಪ, ಸಿದ್ದಪ್ಪ, ಮಲ್ಲಿಕಾರ್ಜುನ, ಆಟೋ ಮಾಲೀಕರ ಅಧ್ಯಕ್ಷರು ಇತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ
ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?
Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ
Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ
Loksabha; ದಿಂಗಾಲೇಶ್ವರ ಶ್ರೀ ಸ್ಪರ್ಧೆಯ ಹಿಂದೆ ಕಾಣದ ಕೈಗಳ ಕೆಲಸವಿದೆ: ಅರವಿಂದ ಬೆಲ್ಲದ್
MUST WATCH
ಹೊಸ ಸೇರ್ಪಡೆ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್