ಜಲಪಾತ ಸೃಷ್ಟಿಸಿದ ವಿಷ್ಣು ಸಮುದ್ರ ಕೆರೆ
ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಹಾಲ್ನೊರೆಯ ತಾಣ
Team Udayavani, Aug 8, 2019, 1:13 PM IST
ಬೇಲೂರು ಪಟ್ಟಣದ ಸಮೀಪದ ವಿಷ್ಣುಸಮುದ್ರ ಕೆರೆ ಭರ್ತಿಯಾದ ಹಿನ್ನಲೆ ಯಲ್ಲಿ ಜಲಪಾತದ ರೂಪದಲ್ಲಿ ಹರಿಯುತ್ತಿರುವ ನೀರು.
ಬೇಲೂರು: ಇತಿಹಾಸ ಪ್ರಸಿದ್ಧ ವಿಷ್ಣು ಸಮುದ್ರ ಕೆರೆ ಭರ್ತಿಯಾಗಿರುವ ಹಿನ್ನೆಲೆ ಯಲ್ಲಿ ಕಣ್ಮನ ಸೆಳೆಯುವ ಜಲಾಪಾತ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.
ಬೇಲೂರು ಪಟ್ಟಣದ ಐತಿಹಾಸಿಕ ಪ್ರಸಿದ್ಧಿ ಹೊಂದಿರುವ ವಿಷ್ಣು ಸಮುದ್ರ ಕೆರೆ ಭರ್ತಿಯಾದ ಸಂದರ್ಭದಲ್ಲಿ ಹರಿ ಯುವ ನೀರಿನ ಜಲಪಾತ ನೋಡುಗರಿಗೆ ಆನಂದ ಉಂಟು ಮಾಡುತ್ತಿದೆ ಜಲ ಪಾತವು ಅತ್ಯಂತ ಸುಂದರವಾಗಿದೆ. ಕ್ಷಣ ಕಾಲ ಎತ್ತರದಿಂದ ಧುಮುಕುವ ನೀರು ಬಂಡೆ ಮಧ್ಯೆ ಏರಿಳಿತದಿಂದ ಹಾಲ್ನೋರೆ ಯಂತಹ ಭೋರ್ಗರೆದು ಧುಮ್ಮಿಕ್ಕು ತ್ತಿರುವುದು ನೋಡುಗರ ಕಣ್ಮನ ಸೆಳೆಯುತ್ತಿದೆ.
ಪ್ರಸಕ್ತ ವರ್ಷಧಾರೆಯಿಂದ ವಿಷ್ಣು ಸಮುದ್ರ ಕೆರೆ ಭರ್ತಿಯಾಗಿ ಕೆರೆಯ ಕೋಡಿ ಬಿದ್ದ ಪರಿಣಾಮದಿಂದ ಜಲಪಾತ ನಿರ್ಮಾಣವಾಗಿದೆ. ವಿಷ್ಣುಸಮುದ್ರ ಕೆರೆಯ ಕೋಡಿ ಹತ್ತಿರದ ಹಿಂದೂ ರುದ್ರ ಭೂಮಿ ತಪ್ಪಲಿನಲ್ಲಿ ಹರಿಯುವ ಕಾರಣ ಜನರು ಮಸಣದ ಜಲಪಾತ ಎನ್ನುತ್ತಾರೆ. ಎಂದು ಸ್ಥಳೀಯರು. ಸುಮಾರು 18 ರಿಂದ 20 ಅಡಿ ಎತ್ತರ ಬಂಡೆ ಕಲ್ಲುಗಳ ಮೇಲೆ ಹರಿದು ಧುಮ್ಮಿಕ್ಕುವ ನೀರು ಜಲಪಾತ ಸ್ವರೂಪ ಪಡೆದ ಕಾರಣದಿಂದಲೇ ಇಲ್ಲಿಗೆ ಪ್ರವಾಸಿಗರು ಬರುತ್ತಾರೆ. ವಿಶೇಷವಾಗಿ ವಿಷ್ಣು ಸಮುದ್ರ ಕೆರೆ ಜಲಪಾತ ವೀಕ್ಷಣೆಗೆ ತೆರಳುವ ರಸ್ತೆ ಹಾಳಾಗಿದ್ದು, ಸಂಬಂಧ ಪಟ್ಟ ವರು ರಸ್ತೆ ದುರಸ್ತಿ ಮಾಡಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha polls: ಇಂದು ಸುಮಲತಾ ಬೆಂಬಲಿಗರ ಸಭೆ
Uttara Kannada BJP; ಅನಂತ್ ಕುಮಾರ ಹೆಗಡೆ ತಟಸ್ಥ?: ಪ್ರಚಾರದಿಂದಲೂ ದೂರ
Sullia;ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್ ಅಲ್ಲ: ರಾಜಸ್ಥಾನಿ ಮಹಿಳೆ !
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು