- Friday 06 Dec 2019
ಸಮಾಜಮುಖಿ ಕಾರ್ಯದಿಂದ ಸಾರ್ಥಕತೆ
•ಜೀವನದಲ್ಲಿ ನಾವು ಮಾಡಿದ ಸೇವಾ ಕೆಲಸ ಶಾಶ್ವತವಾಗಿರಲಿ
Team Udayavani, Jul 8, 2019, 3:44 PM IST
ಭದ್ರಾವತಿ: ನ್ಯೂಟೌನ್ ರೋಟರಿಕ್ಲಬ್ ಸಂಸ್ಥೆಯಲ್ಲಿ ಏರ್ಪಡಿಸಿದ್ದ 2019-20ನೇ ಸಾಲಿನ ರೋಟರಿ ಪದಾಧಿಕಾರಿಗಳ ಪದವಿ ಪ್ರದಾನ ಸಮಾರಂಭದಲ್ಲಿ ನೂತನ ಅಧ್ಯಕ್ಷ ಟಿ.ಎಚ್. ತೀರ್ಥಪ್ಪ ರೋಟರಿ ಅಧ್ಯಕ್ಷ ಪದವಿ ಸ್ವೀಕರಿಸಿದರು.
ಭದ್ರಾವತಿ: ಸೇವೆ ಎಂದರೆ ಸದ್ದಿಲ್ಲದೆ ಮಾಡುವ ಕೆಲಸವೆಂದು ತಿಳಿದು ಸಮಾಜಮುಖೀಯಾಗಿ ಕಾರ್ಯ ನಿರ್ವಹಿಸಿದಾಗ ಜೀವನ ಸಾರ್ಥಕವಾಗುತ್ತದೆ ಎಂದು ರೋಟರಿ ಕ್ಲಬ್ ನೂತನ ಅಧ್ಯಕ್ಷ ಟಿ.ಎಚ್. ತೀರ್ಥಪ್ಪ ಹೇಳಿದರು.
ಶನಿವಾರ ಸಂಜೆ ನ್ಯೂಟೌನ್ ರೋಟರಿ ಕ್ಲಬ್ ಸಂಸ್ಥೆಯಲ್ಲಿ ಏರ್ಪಡಿಸಿದ್ದ 2019-20ನೇ ಸಾಲಿನ ರೋಟರಿ ಪದಾಧಿಕಾರಿಗಳ ಪದವಿ ಹಸ್ತಾಂತರ ಸಮಾರಂಭದಲ್ಲಿ ರೋಟರಿ ಅಧ್ಯಕ್ಷ ಪದವಿ ಸ್ವೀಕರಿಸಿ ಅವರು ಮಾತನಾಡಿದರು.
ಜೀವನದಲ್ಲಿ ಸಾಮಾಜಿಕ ಸೇವೆ ಸಲ್ಲಿಸಲು ದೊರಕುವ ಅವಕಾಶವನ್ನು ಕೊನೆಯ ಅವಕಾಶವೆಂದು ಭಾವಿಸಿ ಗರಿಷ್ಠ ಪ್ರಮಾಣದಲ್ಲಿ ಸಾಮಾಜಿಕ ಸೇವೆ ನಿರ್ವಹಿಸುವ ಮೂಲಕ ತಂದೆ, ತಾಯಿ ಹಾಗೂ ಸಮಾಜ ಮೆಚ್ಚುವ ರೀತಿ ಬದುಕಬೇಕು. ನಾವು ಮಾಡಿದ ಸೇವಾಕಾರ್ಯವನ್ನು ಮೆಚ್ಚಿ ನಾವು ಸತ್ತಾಗ ಸ್ಮಶಾನವೂ ಸಹ ನಮ್ಮ ಅಗಲಿಕೆಗೆ ಕಣ್ಣೀರು ಸುರಿಸುವಷ್ಟರ ಮಟ್ಟಿಗೆ ನಾವು ಬದುಕಿನಲ್ಲಿ ಕಾರ್ಯ ನಿರ್ವಹಿಸಿರಬೇಕು ಎಂದರು.
ನಿಕಟಪೂರ್ವ ರೋಟರಿ ಅಧ್ಯಕ್ಷ ಡಿ.ಕೆ.ರಾಘವೇಂದ್ರ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಆದರ್ಶ ಕಳೆದ ಸಾಲಿನಲ್ಲಿ ಸಂಸ್ಥೆ ಕೈಗೊಂಡ ಕಾರ್ಯಗಳನ್ನು ವಾಚಿಸಿದರು. ರೊ| ಕೆ.ನಾಗರಾಜ್, ಕೆ.ಎಸ್. ಶೈಲೇಂದ್ರ, ಟಿ.ಎಸ್. ದುಶ್ಯಂತರಾಜ್, ಲತಾ ದುಶ್ಯಂತರಾಜ್ ಅತಿಥಿ ತಿಗಣ್ಯರ ಪರಿಚಯವನ್ನು ವಾಚಿಸಿದರು.
ರೋಟರಿ ಜಿಲ್ಲಾ ಗವರ್ನರ್ ರಾಮಚಂದ್ರಮೂರ್ತಿ ರೋಟರಿ ಕ್ಲಬ್ ಭದ್ರವತಿ ಶಾಖೆಯ ನೂತನ ಅಧ್ಯಕ್ಷರಾದ ತೀರ್ಥಯ್ಯ ಅವರಿಗೆ ಅಧ್ಯಕ್ಷ ಪದವಿ ಹಸ್ತಾಂತರ ಮಾಡಿದರು. ಕಾರ್ಯದರ್ಶಿಯಾಗಿ ಎಸ್. ಅಡವೀಶಯ್ಯ ಅಧಿಕಾರ ಸ್ವೀಕರಿಸಿದರು. ಜಿಲ್ಲಾ ಸಹಾಯಕ ಗವರ್ನರ್ ಎಂ. ಮುರಳಿ, ರೋಟರಿ ಕನೆಕ್ಟ್ ದ ವರ್ಲ್ಡ್ ಲೋಗೋ ಲಾಂಚನ ಪತಾಕೆಯನ್ನು ಬಿಡುಗಡೆ ಮಾಡಿದರು. ರೋಟರಿ ಜಿಲ್ಲಾ ಗವರ್ನರ್ ರಾಮಚಂದ್ರಮೂರ್ತಿ, ಜಿಲ್ಲಾ ಸಹಾಯಕ ಗವರ್ನರ್ ಎಂ. ಮುರಳಿ, ರೋಟರಿ ಜೋನಲ್ ಅಧಿಕಾರಿ ಶಿವಶಂಕರ್, ಆನ್ಸ್ ಕ್ಲಬ್ ಅಧ್ಯಕ್ಷರಾದ ಕುಸುಮಾ ತೀರ್ಥಯ್ಯ, ಕಾರ್ಯದರ್ಶಿಗಳಾದ ಲತಾ ದುಶ್ಯಂತರಾಜ್, ಜಾಹ್ನವಿ ವಾದಿರಾಜ್, ಮತ್ತಿತರರು ಇದ್ದರು. ರೊ| ರಾಘವೇಂದ್ರ ಕಾರ್ಯಕ್ರಮ ನಿರೂಪಿಸಿದರು. ರಾಷ್ಟ್ರ ಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಶುಭ, ಕು| ಶ್ರೇಯ ಪ್ರಾರ್ಥಿಸಿದರು.
ಈ ವಿಭಾಗದಿಂದ ಇನ್ನಷ್ಟು
-
ಕುಂದಾಪುರ: ರಾಜ್ಯದ ನಿರ್ವಸಿತ ಮೀನುಗಾರರಿಗೆ ಆಶ್ರಯ ಕಲ್ಪಿಸುವ ಮತ್ಸ್ಯಾಶ್ರಯ ಯೋಜನೆಯನ್ನು ಮೀನುಗಾರರ ಬೇಡಿಕೆಯಂತೆ ರಾಜೀವ್ ಗಾಂಧಿ ವಸತಿ ನಿಗಮದ ಬದಲು ಮತ್ತೆ...
-
ಮಂಗಳೂರು: ಲೈಟ್ ಫಿಶಿಂಗ್, ಬುಲ್ಟ್ರಾಲ್ ಸೇರಿದಂತೆ ಅಕ್ರಮ ಮೀನುಗಾರಿಕೆಯಲ್ಲಿ ತೊಡಗಿರುವ ಬೋಟ್ಗಳ ವಿರುದ್ಧ ಮೀನುಗಾರಿಕೆ ಇಲಾಖೆ ಕಾರ್ಯಾ ಚರಣೆಯನ್ನು...
-
ಮಂಗಳೂರು: ವಿವಿಧ ವಸತಿ ಯೋಜನೆಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಬಾಕಿಯಿರುವ 13.51 ಕೋ.ರೂ.ಗಳನ್ನು ಶೀಘ್ರ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ...
-
ರಾಯಚೂರು: ಇತಿಹಾಸದಲ್ಲೇ ಅತಿ ಹೆಚ್ಚು ಬೆಲೆಗೆ ಮಾರಾಟವಾಗುವ ಮೂಲಕ ಈರುಳ್ಳಿ ದಾಖಲೆ ನಿರ್ಮಿಸಿದೆ. ಉತ್ಪನ್ನಕ್ಕೆ ವಿಪರೀತ ಬೇಡಿಕೆ ಇದ್ದರೂ ಪೂರೈಸಲು ಈರುಳ್ಳಿಯೇ...
-
ಶಿವಮೊಗ್ಗ: ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ಮಂಗನ ಕಾಯಿಲೆ, ಹಂದಿಗೋಡು, ನಿಫಾ...ಹೀಗೆ ಅನೇಕ ಕಾಯಿಲೆಗಳು ಪ್ರತಿ ವರ್ಷ ಕಾಣಿಸಿಕೊಳ್ಳುತ್ತಿವೆ. ನಿಗದಿತ ಔಷಧವಿಲ್ಲದ...
ಹೊಸ ಸೇರ್ಪಡೆ
-
ಹೈದರಾಬಾದ್: ಪಶುವೈದ್ಯೆ ದಿಶಾ ಅತ್ಯಾಚಾರ- ಕೊಲೆ ಪ್ರಕರಣದ ನಾಲ್ವರು ಆರೋಪಿಗಳನ್ನು ಇಂದು ಮುಂಜಾನೆ ಪೊಲೀಸರು ಎನ್ ಕೌಂಟರ್ ಮಾಡಿದ್ದಾರೆ. ಕೃತ್ಯ ನಡೆದು ಹತ್ತು...
-
ಹೈದರಾಬಾದ್: ಇಡೀ ದೇಶವನ್ನೇ ತಲ್ಲಣಗೊಳಿಸಿದ್ದ ದಿಶಾ ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಎಲ್ಲಾ ಆರೋಪಿಗಳನ್ನು ಎನ್ ಕೌಂಟರ್ ನಲ್ಲಿ...
-
ಹೈದರಾಬಾದ್: ಇಲ್ಲಿನ 26 ವರ್ಷದ ಪಶುವೈದ್ಯೆಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎಲ್ಲಾ ನಾಲ್ವರು ಆರೋಪಿಗಳನ್ನು ಎನ್ ಕೌಂಟರ್...
-
ಹೈದರಾಬಾದ್ : ದೇಶವನ್ನೆ ತಲ್ಲಣಗೊಳಿಸಿದ್ದ ದಿಶಾ ಅತ್ಯಾಚಾರ, ಕೊಲೆ ಪ್ರಕರಣ ಸಂಬಂಧಿಸಿದಂತೆ ನಾಲ್ವರು ಅರೋಪಿಗಳನ್ನು ಪೊಲೀಸ್ ಎನ್ ಕೌಂಟರ್ ನಲ್ಲಿ ಹತ್ಯೆಗೈಯಲಾಗಿದೆ. ಆರಂಭಿಕ...
-
ಕುಂದಾಪುರ: ರಾಜ್ಯದ ನಿರ್ವಸಿತ ಮೀನುಗಾರರಿಗೆ ಆಶ್ರಯ ಕಲ್ಪಿಸುವ ಮತ್ಸ್ಯಾಶ್ರಯ ಯೋಜನೆಯನ್ನು ಮೀನುಗಾರರ ಬೇಡಿಕೆಯಂತೆ ರಾಜೀವ್ ಗಾಂಧಿ ವಸತಿ ನಿಗಮದ ಬದಲು ಮತ್ತೆ...