ಭಗವಂತನ ಲೀಲೆಗಳಿಂದ ಉತ್ತಮ ಸಂದೇಶ: ಸ್ವಾಮೀಜಿ


Team Udayavani, Dec 14, 2019, 6:31 PM IST

14-December-34

ಭದ್ರಾವತಿ: ಭಗವಂತನ ಪ್ರತಿಯೊಂದು ಲೀಲೆಗಳಲ್ಲೂ ಉತ್ತಮ ಸಂದೇಶಗಳು ಅಡಗಿರುತ್ತವೆ. ಆದರೆ ಅದನ್ನು ಶಾಸ್ತ್ರಗಳ ಹಿನ್ನೆಲೆಯಲ್ಲಿ ಸರಿಯಾಗಿ ಅರ್ಥೈಸಿಕೊಳ್ಳುವ ಪ್ರಯತ್ನ ಮಾಡಬೇಕು ಎಂದು ಉಡುಪಿ ಅದಮಾರು ಮಠದ ಶ್ರೀಗಳಾದ ಶ್ರೀ ಈಶಪ್ರಿಯತಿರ್ಥ ಸ್ವಾಮೀಜಿ ಹೇಳಿದರು.

ಅವರು ಜ.18ರಂದು ಉಡುಪಿಯ ಶ್ರೀಕೃಷ್ಣನ ಪರ್ಯಾಯ ಪೀಠವನ್ನು ಅಲಂಕರಿಸುತ್ತಿರುವ ಪ್ರಯುಕ್ತ ಪರ್ಯಾಯ ಉತ್ಸವಕ್ಕೆ ಭದ್ರಾವತಿ ಜನರಗೆ ಆಹ್ವಾನ ನೀಡುವ ಸಲುವಾಗಿ ಹಳೇನಗರದ ಶ್ರೀ ರಾಘವೇಂದ್ರಸ್ವಾಮಿ ಮತ್ತು ಶ್ರೀ ವಾದಿರಾಜ ಸ್ವಾಮಿಗಳ ಮಠಕ್ಕೆ ಆಗಮಿಸಿದ ವೇಳೆ ಅವರು ಆಶೀರ್ವಚನ ನೀಡಿದರು.ಬಾಲಗೋಪಾಲನಾಗಿ ಶ್ರೀಕೃಷ್ಣ ಗೋಪಾಲಕರನ್ನು ರಕ್ಷಿಸುವ ಸಲುವಾಗಿ ಸರೋವರದಲ್ಲಿದ್ದ ಕಾಳಂಗ ಸರ್ಪವನ್ನು ಮರ್ಧನ ಮಾಡಿದ. ಗೋವು ಎಂದರೆ ಕೇವಲ ಹಸು ಎಂಬುದಷ್ಟಕ್ಕೇ ಸೀಮಿತವಲ್ಲ. ವೇದಗಳನ್ನೂ ಸಹ ಗೋವು ಎನ್ನುತ್ತಾರೆ. ವೇದಗಳನ್ನು ಅಧ್ಯಯನ ಮಾಡುವ, ಅದರ ನೀತಿ ನಿಯಮಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ವೇದಗಳನ್ನು ಪಾಲನೆ ಮಾಡುವವರ ರಕ್ಷಣೆಯನ್ನು ಭಗವಂತ ಮಾಡುತ್ತಾನೆ ಎಂಬ ಸಂದೇಶವನ್ನು ಕಾಳಂಗ ಮರ್ಧನ ಲೀಲೆಯಿಂದ ಶ್ರೀಕೃಷ್ಣ ಜಗತ್ತಿಗೆ ಸಾರಿದ ಸಂದೇಶವಾಗಿದೆ ಎಂದರು.

ಕಾಳಿಂಗ ಮರ್ಧನ ಲೀಲೆಯಲ್ಲಿ ಕಾಳಿಂಗ ಸರ್ಪ ಬೇರೆಡೆಗೆ ತೆರಳಲು ತನಗೆ ಗರುಡನ ಭಯವಿದೆ ಎಂದು ಹೇಳಿದಾಗ, ಕಾಳಿಂಗ ಸರ್ಪಕ್ಕೆ ಕೃಷ್ಣ ಅಭಯವನ್ನು ನೀಡಿ ನಿನ್ನ ತಲೆಯ ಮೇಲೆ ನಾನು ನರ್ತಿಸಿರುವುದರಿಂದ ತಲೆಯ ಮೇಲೆ ನನ್ನ ಪಾದದ ಚಿಹ್ನೆಬಿದ್ದಿದೆ. ಆದ್ದರಿಂದ ಗರುಡ ನಿನಗೆ ಏನನ್ನೂ ಮಾಡುವುದಿಲ್ಲ ಹೋಗುಎಂದು ಹೇಳುತ್ತಾನೆ. ಇದನ್ನು ನಾವು ಅವಲೋಕಿಸಿದಾಗ ಯಾರ ತಲೆಯಲ್ಲಿ ಭಗವಂತನ ಕುರಿತಾದ ಚಿಂತನೆಗಳು ಸದಾ ಜಾಗೃತವಾಗಿರುತ್ತವೆಯೋ ಅಂತಹವರಿಗೆ ಭಗವಂತ ಸದಾ ರಕ್ಷಣೆ ನೀಡುತ್ತಾನೆ ಎಂಬ ಸಂದೇಶ ಅಡಗಿದೆ ಎಂದು ವಿವರಿಸಿದರು.

ಶ್ರೀಕೃಷ್ಣನ ತೊಟ್ಟಿಲ ಪೂಜೆ: ಅನುಗ್ರಹ ಸಂದೇಶದ ನಂತರ ಶ್ರೀಗಳು ಮಠದಲ್ಲಿ ಕಾಳಿಂಗಮರ್ಧನ ಶ್ರೀಕೃಷ್ಣನ ತೊಟ್ಟಿಲ ಪೂಜೆ ನೆರವೇರಿಸಿ ಫಲಮಂತ್ರಾಕ್ಷತೆ ನೀಡಿದರು. ವಿವಿಧ ಸಂಘ-ಸಂಸ್ಥೆಗಳಿಂದ ಶ್ರೀಗಳಿಗೆ ಗೌರವ ಫಲಸಮರ್ಪಣೆ ಮಾಡಲಾಯಿತು. ಪಂಡಿತರಾದ ಗೋಪಾಲಾಚಾರ್‌, ಗಂಟೆನಾರಾಯಣಾಚಾರ್‌, ಶೇಷಗಿರಿ ಆಚಾರ್‌, ಅರ್ಚಕರಾದ ಸತ್ಯನಾರಾಯಣ್‌, ಮಾಧುರಾವ್‌, ಮಠದ ಮುಖ್ಯಸ್ಥರಾದ ಮುರಳೀಧರ ತಂತ್ರಿ, ಜಿ. ರಮಾಕಾಂತ, ವೆಂಕಟೇಶ್‌, ಜಯತೀರ್ಥ, ವಾಸು ಮತ್ತಿತರರು ಇದ್ದರು.

ಟಾಪ್ ನ್ಯೂಸ್

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು

it

Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

20-

Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ

Bidar; The man jumps into the water tank

Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು

Belagavi; ಬಸವಜಯ ಮೃತ್ಯುಂಜಯ ಸ್ವಾಮೀಜಿ ಭೆಟಿಯಾದ ಜಗದೀಶ್ ಶೆಟ್ಟರ್

Belagavi; ಬಸವಜಯ ಮೃತ್ಯುಂಜಯ ಸ್ವಾಮೀಜಿ ಭೇಟಿಯಾದ ಜಗದೀಶ್ ಶೆಟ್ಟರ್

20-

Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ

Bidar; The man jumps into the water tank

Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ

19-gobi

Gobi Manchurian ಬ್ಯಾನ್‌ ಎಫೆಕ್ಟ್: ಚಾಟ್ಸ್‌ ಮಾರಾಟ ಕುಸಿತ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

partner kannada movie

Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್‌’: ಟ್ರೇಲರ್‌, ಆಡಿಯೋದಲ್ಲಿ ಹೊಸಬರ ಚಿತ್ರ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು

it

Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.