ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ
•ಮಾಜಿ ಸಚಿವ ಶಿವಕುಮಾರ ಇಡಿ ವಶಕ್ಕೆ ಖಂಡಿಸಿ ಕೇಂದ್ರ ಸರ್ಕಾರ ವಿರುದ್ಧ ಆಕ್ರೋಶ
Team Udayavani, Sep 5, 2019, 11:47 AM IST
ಭಾಲ್ಕಿ: ಮಾಜಿ ಸಚಿವ ಡಿ.ಕೆ.ಶಿವಕುಮಾರ ಅವರನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದಿರುವುದನ್ನು ಖಂಡಿಸಿ ಕಾಂಗ್ರೆಸ್ ಪಕ್ಷದಿಂದ ಪ್ರತಿಭಟನೆ ನಡೆಸಲಾಯಿತು.
ಭಾಲ್ಕಿ: ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಚಿವ ಡಿ.ಕೆ. ಶಿವಕುಮಾರ ಅವರನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದಿರುವುದನ್ನು ಖಂಡಿಸಿ ಪಟ್ಟಣದ ಮಹಾತ್ಮಾ ಗಾಂಧಿ ವೃತ್ತದಲ್ಲಿ ಕಾಂಗ್ರೆಸ್ ಪಕ್ಷದಿಂದ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಮಾತನಾಡಿ, ಕೇಂದ್ರ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿವೆ. ಕಾಂಗ್ರೆಸ್ ನಾಯಕರ ಮೇಲೆ ಉದ್ದೇಶ ಪೂರ್ವಕ ಕೇಂದ್ರದ ತನಿಖಾ ಸಂಸ್ಥೆಗಳ ಮೂಲಕ ವಿಚಾರಣೆ ಹೆಸರಿನಲ್ಲಿ ಕಿರುಕುಳ ನೀಡಲಾಗುತ್ತಿದೆ. ಕೇಂದ್ರ ಸರ್ಕಾರ ಇಡಿ, ಸಿಬಿಐ ಮತ್ತು ಐಟಿ ಸಂಸ್ಥೆಗಳನ್ನು ದುರ್ಬಳಕ್ಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದರು.
ಪ್ರಭಾವಿ ಕಾಂಗ್ರೆಸ್ ನಾಯಕರನ್ನು ಮಣಿಸುವ ನಿಟ್ಟಿನಲ್ಲಿ ಸರ್ಕಾರ ಮುಂದಾಗಿದೆ. ಡಿ.ಕೆ. ಶಿವಕುಮಾರ ಬಿಜೆಪಿಗೆ ಬರಬೇಕು. ಬಾರದೇ ಇದ್ದರೆ ನಿಮ್ಮ ರಾಜಕೀಯ ಜೀವನ ನಾವು ಮುಗಿಸುತ್ತೇವೆ ಎಂದು ಧಮಕಿ ಹಾಕುತ್ತಿದ್ದಾರೆ. ಆದರೆ, ಡಿಕೆಶಿ ನನಗೆ ಎಷ್ಟೇ ಕಷ್ಟ ಬಂದರು ಕಾಂಗ್ರೆಸ್ ಪಕ್ಷ ಬಿಡುವುದಿಲ್ಲ. ಸತ್ತರು ಜೈಲಿನಲ್ಲಿ ಸಾಯುತ್ತೇನೆ ಎಂದು ಹೇಳಿದ್ದಾರೆ. ಡಿ.ಕೆ. ಶಿವಕುಮಾರ ಅವರನ್ನು ಮಣಿಸಲು ಬಂಧಿಸಿ ಜೈಲಿಗೆ ಹಾಕುತ್ತಿರುವುದು ಖಂಡಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಹಾಗೂ ಯುವ ಕಾಂಗ್ರೆಸ್ ಮುಖಂಡರು ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಡಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಸೀರ್ ಅಹ್ಮದ್, ಯುವ ಕಾಂಗ್ರೆಸ್ ಅಧ್ಯಕ್ಷ ಮಹಾದೇವ ಸ್ವಾಮಿ, ಎಪಿಎಂಸಿ ಅಧ್ಯಕ್ಷ ಬಾಬುರಾವ ಪಾಟೀಲ, ಪುರಸಭೆ ಮಾಜಿ ಅಧ್ಯಕ್ಷ ವಿಶಾಲ ಪೂರಿ, ಅನೀಲ ಲೋಖಂಡೆ, ಪ್ರಕಾಶ ಮಾಶಟ್ಟೆ, ಅಶೋಕ ಮಡ್ಡೆ, ಶೇಖರ ವಂಕೆ, ರಮೇಶ ಲೋಖಂಡೆ, ವಿಲಾಸ ಮೋರೆ, ಸುಭಾಷ ಕಾರಾಮುಂಗೆ, ಅನೀಲ ಸುಂಟೆ, ವಿಜಯಕುಮಾರ ರಾಜಭವನ, ಸಂತೋಷ ಬಿ.ಜಿ.ಪಾಟೀಲ, ಶಿವಕುಮಾರ ದೇಶಮುಖ, ಶಾಲಿವಾನ ಪಾಟೀಲ, ಸಂಗಮೇಶ ವಾಲೆ, ಕಪೀಲ ಕಲ್ಯಾಣೆ, ಅಶೋಕ ಬಾವಗೆ, ಮಾಣಿಕಪ್ಪ ರೇಷ್ಮೆ, ಖಾಜಾ ಮಿರ್ದೇ, ಓಂಕಾರ ಮೋರೆ, ನಿಜಾಮೊದ್ದಿನ್, ಕೆ.ಡಿ. ಗಣೇಶ, ಮಹಾದೇವ ಬೇಲುರೆ, ಬಸವರಾಜ ಕುಪ್ಪೆ, ಶಂಕರ ಭೋರಾಳೆ, ವಿಠuಲ ಪಾಟೀಲ, ಲಿಂಗರಾಜ ಖಂಡಾಳೆ, ಧೊಂಡಿಬಾ, ರಾಜಕುಮಾರ ಬೌಧೆ, ಜೈಪಾಲ, ಅಶೊಕ ಗಾಯಕವಾಡ, ಪಂಚಶೀಲ ಪಾಟೀಲ, ಶಿವ ಪೆದ್ದೆ, ಧರ್ಮು ವಂಕೆ, ಶೇಖ್ ಲಿಯಾಖತ್, ಮಹೇಬಬ್ ನಕೀಬ್, ಎಲ್.ಜಿ. ಗುಪ್ತಾ, ರಾಜಕುಮಾರ ಪಾಟೀಲ, ಬಾಲಾಜಿ, ನಿತ್ಯಾನಂದ, ಶಿವ ಮಡಿವಾಳ, ಓಂಕಾರ ಭಾತಂಬ್ರಾ, ಮುಸ್ತಾಕ್, ಟಿಂಕು ರಾಜಭವನ, ಪ್ರಶಾಂತ, ಬುದ್ದಾನಂದ, ಫಯುಮ್ ಚೌದ್ರಿ, ಸಿದ್ರಾಮ ಭೂರೆ, ಸತೀಶ ಬಿರಾದಾರ, ಪಂಢರಿ ಮೇತ್ರೆ, ಜಲೀಲ್ ಚೌದ್ರಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
MUST WATCH
ಹೊಸ ಸೇರ್ಪಡೆ
Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ
Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ
Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್ಸಿ ಮೀಸಲಾತಿ ಹೇಳಿಕೆಗೆ ವಿರೋಧ
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ