ಸಾಹಿತ್ಯ ಸಮ್ಮೇಳನಕ್ಕೆ ತಯಾರಿ
ಪುರಭವನದಲ್ಲಿ ನಡೆಯಲಿದೆ ಕನ್ನಡನುಡಿ ಜಾತ್ರೆ
Team Udayavani, Jun 28, 2019, 11:02 AM IST
ಭಾಲ್ಕಿ: ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುವ ಪುರಸಭೆ ಆವರಣ ಕಾಂಕ್ರಿಟ್ ಮುಂತಾದ ವಸ್ತುಗಳಿಂದ ಅಸ್ವಚ್ಛತೆಯಿಂದ ಕೂಡಿದೆ.
ಜಯರಾಜ ದಾಬಶೆಟ್ಟಿ
ಭಾಲ್ಕಿ: ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶುಕ್ರವಾರ ನಡೆಯಲಿರುವ ಸಾಹಿತ್ಯ ಸಮ್ಮೇಳನದ ವೇದಿಕೆ ಸಿದ್ಧ ಮಾಡುವಲ್ಲಿ ಪರಿಷತ್ ಪದಾಧಿಕಾರಿಗಳು ವಿಫಲರಾಗಿದ್ದಾರೆ. ಪಟ್ಟಣದ ಪುರಭವನದ ಆವರಣದಲ್ಲಿ 5ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಬೇಕು ಎಂದು ಕೆಲವು ದಿವಸಗಳ ಹಿಂದೆ ವೇದಿಕೆ ಸಿದ್ಧಮಾಡಲಾಗಿತ್ತು. ಶಾಸಕರ ನೇತೃತ್ವದಲ್ಲಿ ಸಭೆ ನಡೆಸಿ ಪುರಭವನ ಆವರಣ ಸ್ವಚ್ಛಗೊಳಿಸಿ ನುಡಿ ಜಾತ್ರೆಗೆ ಸಕಲ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಎಲ್ಲರೂ ಒಕ್ಕೂರಲಿನಿಂದ ನಿರ್ಣಯಿಸಿದ್ದರು. ಆದರೆ ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳ ಒಗ್ಗಟ್ಟಿನ ಕೊರತೆಯಿಂದಾಗಿ ಪುರಭವನದ ಅವರಣದ ವೇದಿಕೆ ಸಿದ್ಧತೆ ಮಾಡುವಲ್ಲಿ ಹಿನ್ನಡೆಯಾಗಿದ್ದು, ಇದರಿಂದ ತಾಲೂಕಿನ ಸಾಹಿತ್ಯಾಸಕ್ತರು ನಿರುತ್ಸಾಹಕ್ಕೆ ಒಳಗಾಗುವಂತಾಗಿದೆ.
ಪಟ್ಟಣದ ಪುರಭವನದ ಸುತ್ತಲೂ ಪ್ರತಿಷ್ಠಿತ ಗುತ್ತಿಗೆದಾರರೊಬ್ಬರು ಕಾಂಕ್ರಿಟ್, ಸಿಮೆಂಟ್ ಮುಂತಾದ ವಸ್ತುಗಳನ್ನು ಸಂಗ್ರಹಿಸಿಟ್ಟಿದ್ದಾರೆ. ಅವುಗಳನ್ನು ತೆರವುಗೊಳಿಸಿ ವೇದಿಕೆ ಸಿದ್ಧ ಮಾಡಬೇಕಾಗಿತ್ತು. ಆದರೆ ಸಾವಿರಾರು ಸಾಹಿತ್ಯಾಸಕ್ತರು ಸೇರುವ ಸ್ಥಳದಲ್ಲಿ ಬರೀ ಕಾಂಕ್ರಿಟ್ ಸೇರಿದಂತೆ ತ್ಯಾಜ್ಯ ಪದಾರ್ಥವೇ ತುಂಬಿಕೊಂಡಿದೆ. ಇದನ್ನು ತೆರವುಗೊಳಿಸಿ ನುಡಿ ಜಾತ್ರೆ ಸಂಭ್ರಮದಿಂದ ಆಚರಿಸಬೇಕು ಎನ್ನುವ ಮಾತು ಮರಿಚೀಕೆಯಾಗಿದೆ. ಈ ಹಿಂದಿನ ಕಸಾಪ ಅಧ್ಯಕ್ಷ ವಸಂತ ಹುಣಸನಾಳೆ ಅವರ ಅಧ್ಯಕ್ಷತೆಯಲ್ಲಿ ಎರಡು ತಾಲೂಕು ಸಮ್ಮೇಳನಗಳು ನಡೆದವು. ಎರಡೂ ಸಮ್ಮೇಳನಗಳಲ್ಲಿಯೂ ಎಲ್ಲರೂ ಒಗ್ಗಟ್ಟಿನಿಂದ ದುಡಿದಿದ್ದರು. ಆದರೆ ಈಗ ವೇದಿಕೆ ಸಿದ್ಧ ಮಾಡುವಲ್ಲಿಯೇ ವಿಫಲರಾದ ಕಾರಣ ಶುಕ್ರವಾರ ನಡೆಯುವ ಸಾಹಿತ್ಯ ಸಮ್ಮೇಳನ ಎಷ್ಟರ ಮಟ್ಟಿಗೆ ಯಶಸ್ವಿಯಾಗುವುದು ಎನ್ನುವುದು ಸಾಹಿತ್ಯಾಸಕ್ತರ ಚಿಂತನೆಯಾಗಿದೆ.
ಟೌನಹಾಲ್ ಆವರಣದಲ್ಲಿರುವ ಕಾಂಕ್ರಿಟ್ ಸೇರಿದಂತೆ ಮುಂತಾದ ತ್ಯಾಜ್ಯ ಪದಾರ್ಥಗಳು ಕೆಲವೇ ಕ್ಷಣದಲ್ಲಿ ತೆರವುಗೊಳಿಸುತ್ತೇವೆ. ಇದನ್ನೆಲ್ಲ ತೆರವುಗೊಳಿಸಿ ಸುಂದರ ವಾತಾವರಣ ನಿರ್ಮಾಣ ಮಾಡುತ್ತೇವೆ ಎನ್ನುತ್ತಾರೆ ಕಸಾಪ ಕಾರ್ಯದರ್ಶಿ ರಮೇಶ ಚಿದ್ರಿ. ಆದರೆ ಇದುವರೆಗೆ ಈ ಕಾರ್ಯ ನಡೆಯದಿರುವುದು ಸಾಹಿತ್ಯಾಭಿಮಾನಿಗಳಿಗೆ ಬೇಸರ ತರಿಸಿದೆ.
ಕನ್ನಡ ನುಡಿ ಹಬ್ಬ ಒಳ್ಳೆಯ ವಾತಾವರಣದಲ್ಲಿ ಚೆನ್ನಾಗಿ ನಡೆಯಬೇಕು. ಆದರೆ ಸಾವಿರಾರು ಸಾಹಿತ್ಯಾಸಕ್ತರು ಸೇರುವ ನುಡಿಜಾತ್ರೆ ವೇದಿಕೆ ಆವರಣ ಅಸ್ವಚ್ಛತೆಯಿಂದ ಕೂಡಿರುವುದು ನಮಗೆ ಬೇಸರ ತಂದಿದೆ ಎನ್ನುತ್ತಾರೆ ಅಖೀಲ ಭಾರತ ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಯುವ ಅಧ್ಯಕ್ಷ ಸಂತೋಷ ಹಡಪದ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP members: 2 ಕೋಟಿ ಪತ್ತೆ; ಬಿಜೆಪಿಯ ಮೂವರ ಮೇಲೆ ಕೇಸ್
Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ
ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ
Lok Sabha Election: ಕಾಂಗ್ರೆಸ್ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ
Udupiಗೆ ಸರಕಾರಿ ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್ ಕಾಲೇಜು: ಜಯಪ್ರಕಾಶ್ ಹೆಗ್ಡೆ
MUST WATCH
ಹೊಸ ಸೇರ್ಪಡೆ
BJP members: 2 ಕೋಟಿ ಪತ್ತೆ; ಬಿಜೆಪಿಯ ಮೂವರ ಮೇಲೆ ಕೇಸ್
Telangana Election 2024: ಕಳೆಗುಂದಿದ ಬಿಆರ್ಎಸ್: ಕಾಂಗ್ರೆಸ್-ಬಿಜೆಪಿ ಕಾದಾಟ
Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ
ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ
Lok Sabha Election: ಕಾಂಗ್ರೆಸ್ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ