ನೆಲಕ್ಕುರುಳಿದ “ಚೌಡಮ್ಮ ನ ಬೇವಿನ ಮರ’
ಕೊಳಹಾಳು ಚೌಡಮ್ಮ ದೇಗುಲಕ್ಕೆ ಹೊಂದಿಕೊಂಡಿದ್ದ ಬೇವಿನ ಮರ ರಸ್ತೆ ಅಗಲೀಕರಣಕ್ಕೆ ಬಲಿ
Team Udayavani, Dec 22, 2019, 1:36 PM IST
ಭರಮಸಾಗರ: ರಾಷ್ಟ್ರೀಯ ಹೆದ್ದಾರಿ 4ರ ಕೊಳಹಾಳು ಚೌಡಮ್ಮ ದೇಗುಲವನ್ನು ಹೆದ್ದಾರಿ ಅಗಲೀಕರಣದ ಹಿನ್ನೆಲೆಯಲ್ಲಿ ನೆಲಸಮಗೊಳಿಸಲಾಗಿದೆ. ಇದರ ಬೆನ್ನಲ್ಲೇ ಸುಮಾರು 120 ವರ್ಷಗಳಷ್ಟು ಹಳೆಯದಾದ ಹಾಗೂ ದೇಗುಲಕ್ಕೆ ಹೊಂದಿಕೊಂಡಿದ್ದ “ಚೌಡಮ್ಮನ ಮರ’ ಎಂದೇ ಪ್ರಸಿದ್ಧಿ ಪಡೆದಿದ್ದ ಬೇವಿನ ಮರವನ್ನು ಶನಿವಾರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನೆಲಕ್ಕುರುಳಿಸಿತು.
ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ವೇಳೆ ಚಿತ್ರದುರ್ಗದಿಂದ ದಾವಣಗೆರೆವರೆಗಿನ ಮರಗಳನ್ನು ಕಡಿದು ಉರುಳಿಸಲಾಗಿತ್ತು. ಹೀಗೆ ನೆಲಕ್ಕುರುಳಿದ ಸುಮಾರು 100 ವರ್ಷಗಳ ಹಳೆಯದಾದ ಮರಗಳ ಸಂಖ್ಯೆ ನೂರರ ಗಡಿ ದಾಟಿತ್ತು. ಇದೇ ವೇಳೆ ಕೊಳಹಾಳು ಚೌಡಮ್ಮ ದೇಗುಲಕ್ಕೆ ಹೊಂದಿಕೊಂಡ ಬೇವಿನ ಮರವನ್ನು ಕೂಡ ಕಡಿಯಲು ಉದ್ದೇಶಿಸಲಾಗಿತ್ತು. ಆದರೆ ಗುತ್ತಿಗೆದಾರರು ದೇವಿ ಮಹಿಮೆಗೋ ಅಥವಾ ದೇವಿಯ ಕೃಪೆಗಾಗಿಯೋ ಇಲ್ಲಿನ ಮರಗಳನ್ನು ಕಡಿಯದೆ ದೇಗುಲಕ್ಕೆ ಐದು ಸಾವಿರ ರೂ. ಕಾಣಿಕೆ ನೀಡಿ ಮರ ಕಡಿಯುವುದಿಲ್ಲ ಎಂದು ತಿಳಿಸಿ ದೇವಿ ಆರ್ಶೀವಾದ ಪಡೆದು ಹೋಗಿದ್ದನ್ನು ಕೊಳಹಾಳು ಗ್ರಾಮದ ತಿಪ್ಪೇಸ್ವಾಮಿ ನೆನಪಿಸಿಕೊಂಡರು.
ಹೆದ್ದಾರಿ ಉದ್ದಗಲಕ್ಕೂ ಇದ್ದ ಮರಗಳ ಮಾರಣಹೋಮವೇ ನಡೆದು ಹೋದರೂ ಚೌಡಮ್ಮ ದೇಗುಲದ ಬೇವಿನ ಮರ ಮಾತ್ರ ಉಳಿದಿತ್ತು. ಹೀಗಾಗಿ ಕಳೆದ 15 ವರ್ಷಗಳ ಹಿಂದೆಯೇ ಕಡಿತಲೆಗೆ ಆಹುತಿ ಆಗಬೇಕಿದ್ದ ಈ ಬೇವಿನ ಮರದ ಸಾವಿನ ಅವಧಿ 15 ವರ್ಷಗಳಿಗೆ ವಿಸ್ತರಣೆ ಆಗಿತ್ತು. ಖ್ಯಾತ ಜ್ಯೋತಿಷಿಗಳ ಮೊರೆ ಹೋಗಿದ್ದ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಆಗಬಹುದಾದ ಅಡ್ಡಿ ಆತಂಕಗಳನ್ನು ಪೂಜೆ, ಹೋಮ ಹವನಗಳನ್ನು ನಡೆಸಿ ನಿವಾರಿಸಿಕೊಂಡು ದೇಗುಲ ಸ್ಥಳಾಂತರಿಸುವ ಕಾರ್ಯದಲ್ಲಿ ಯಶಸ್ವಿಯಾಗಿದ್ದರು. ಶನಿವಾರ ಅಂತಿಮವಾಗಿ ಬೇವಿನಮರವನ್ನು ನೆಲಕ್ಕೆ ಉರುಳಿಸಿದ್ದಾರೆ.
ಇಡೀ ದೇಗುಲವನ್ನು ಕೆಡವಿದ ಬಳಿಕ ಬೇವಿನ ಮರ ಅನಾಥವಾದಂತೆ ತೋರುತ್ತಿತ್ತು. ಜೆಸಿಬಿ ಬಳಸಿ ಮರದ ಎಲ್ಲಾ ಕೊಂಬೆಗಳನ್ನು ಒಂದೊಂದಾಗಿ ಉರುಳಿಸಲಾಯಿತು. ಸಂಜೆ ವೇಳೆಗೆ ಇಡೀ ಮರ ನೆಲಕ್ಕೆ ಬಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gadag; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ
B. Y. Raghavendra: “ಕಾಂಗ್ರೆಸ್ ನಾಯಕರ ಮನಸ್ಥಿತಿಗೆ ತಕ್ಕಂತೆ “ಚೊಂಬು’ ಜಾಹೀರಾತು’
Neha Case: ನೇಹಾ ಅಮಾನುಷ ಹತ್ಯೆಗೆ ಜೆ.ಪಿ.ಹೆಗ್ಡೆ ಖಂಡನೆ
Hubli; ನನ್ನ ಮಗಳು ಹೊಲಸು ಕೆಲಸ ಮಾಡಿಲ್ಲ…: ನೇಹಾ ತಾಯಿ ಗೀತಾ ಹಿರೇಮಠ ಹೇಳಿಕೆ
Muddebihal: ನೇಹಾ ಕೊಲೆ ಖಂಡಿಸಿ ಪ್ರತಿಭಟನೆ: ಮುಸ್ಲಿಂ ಮುಖಂಡರು ಭಾಗಿ
MUST WATCH
ಹೊಸ ಸೇರ್ಪಡೆ
Gadag; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ
B. Y. Raghavendra: “ಕಾಂಗ್ರೆಸ್ ನಾಯಕರ ಮನಸ್ಥಿತಿಗೆ ತಕ್ಕಂತೆ “ಚೊಂಬು’ ಜಾಹೀರಾತು’
Lok Sabha Election 2024: ಝಾರ್ಖಂಡ್, ಛತ್ತೀಸ್ಗಢದಲ್ಲಿ ಗೆಲುವು ಯಾರಿಗೆ?
ಗ್ಯಾಂಗ್ ಸ್ಟರ್ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್ ಮನೆಯಿಂದ ಕ್ಯಾಬ್ ಬುಕ್: ಯುವಕ ಅರೆಸ್ಟ್
Hubli; ಆಡಳಿತ ಪಕ್ಷದಿಂದಲೇ ತನಿಖೆ ದಾರಿ ತಪ್ಪಿಸುವ ಕೆಲಸ: ನೇಹಾ ತಂದೆ ನಿರಂಜನಯ್ಯ ಆರೋಪ