ಮಂಗಲಗಿ ಟೋಲ್‌ನಲ್ಲಿ ಫಾಸ್ಟಾಗ್‌ ವ್ಯವಸ್ಥೆ

ಡಿಜಿಟಲ್‌ ಶುಲ್ಕ ಪಾವತಿಗೆ ಸರ್ಕಾರ ಉತ್ತೇಜನ ಹೆದ್ದಾರಿಯಲ್ಲಿ ವಾಹನ ದಟ್ಟಣೆ ಕಿರಿಕಿರಿ ತಪ್ಪಿಸಲು ಕ್ರಮ

Team Udayavani, Nov 24, 2019, 10:45 AM IST

24-November-4

„ಶಶಿಕಾಂತ ಬಂಬುಳಗೆ
ಬೀದರ:
ಟೋಲ್‌ ಪ್ಲಾಜಾಗಳಲ್ಲಿ ರಸ್ತೆ ಶುಲ್ಕ ಕಟ್ಟಲು ಇನ್ನುಮುಂದೆ ಸಾಲುಗಟ್ಟಿ ನಿಲ್ಲಬೇಕಿಲ್ಲ. ಸುಗಮ ಸಂಚಾರ, ನಗದು ರಹಿತ ವ್ಯವಸ್ಥೆಗಾಗಿ ಹೆದ್ದಾರಿಗಳಲ್ಲಿ ಸಂಚರಿಸುವ ವಾಹನಗಳಿಗೆ ಫಾಸ್ಟಾಗ್‌ (ಇ-ಟೋಲ್‌ ಸಂಗ್ರಹ) ಅಳವಡಿಕೆ ಕಡ್ಡಾಯ ಮಾಡಲಾಗಿದೆ. ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯ ಟೋಲ್‌ನಲ್ಲೂ ಈಗಾಗಲೇ ಫಾಸ್ಟಾಗ್‌ ವ್ಯವಸ್ಥೆ ಅಳವಡಿಸಿ ಶುಲ್ಕ ಸಂಗ್ರಹಿಸಲಾಗುತ್ತಿದ್ದ, ಹೊಸ ವ್ಯವಸ್ಥೆ ಬಗ್ಗೆ ಜಾಗೃತಿಯನ್ನೂ ಮೂಡಿಸಲಾಗುತ್ತಿದೆ. ಗರಿಷ್ಠ ಮುಖಬೆಲೆಯ ನೋಟು ಅಮಾನ್ಯ ಮೂಲಕ ನಗದು ರಹಿತ ವ್ಯವಸ್ಥೆಗೆ ಒತ್ತು ನೀಡುತ್ತ ಬಂದಿರುವ ಕೇಂದ್ರ ಸರ್ಕಾರ 2016ರಲ್ಲಿಯೇ ಫಾಸ್ಟಾಗ್‌ ಯೋಜನೆ ಜಾರಿಗೊಳಿಸಿ ಟೋಲ್‌ ಗಳಲ್ಲಿ ತಡೆ ರಹಿತ ಸಂಚಾರ ಮತ್ತು ನಗದು ರಹಿತ ವಹಿವಾಟಿಗೆ ಉತ್ತೇಜಿಸಿದೆ. ಈಗ ಡಿ. 1ರಿಂದ ಹೆದ್ದಾರಿಗಳಲ್ಲಿ ಓಡಾಡುವ ವಾಹನಗಳಿಗೆ ಫಾಸ್ಟಾಗ್‌ ಅಳವಡಿಕೆ ಕಡ್ಡಾಯಗೊಳಿಸಿದ್ದು, ಈ ವ್ಯವಸ್ಥೆ ಮೂಲಕವೇ ಸವಾರರು ಟೋಲ್‌ ಸುಂಕ ಕಟ್ಟಬೇಕಾಗಿದೆ. ಬೀದರ ಜಿಲ್ಲೆಯ ಹುಮನಾಬಾದ್‌ ತಾಲೂಕಿನ ಮಂಗಲಗಿ ಬಳಿಯ ಹೈದ್ರಾಬಾದ್‌- ಮುಂಬೈ ರಾಷ್ಟ್ರೀಯ ಹೆದ್ದಾರಿ (65)ಯಲ್ಲಿ 2017ರ ಅಕ್ಟೋಬರ್‌ನಲ್ಲಿ ಟೋಲ್‌ ಪ್ಲಾಜಾ ನಿರ್ಮಾಣ ಮಾಡಲಾಗಿದ್ದು, ಆರಂಭದಿಂದಲೇ ಫಾಸ್ಟ್ ಟ್ಯಾಗ್‌ ಮೂಲಕ ಟೋಲ್‌  ಸಂಗ್ರಹಿಸಲಾಗುತ್ತಿದೆ.

ಪ್ಲಾಜಾದಲ್ಲಿರುವ ಒಟ್ಟು 8 ಪಥಗಳ ಪೈಕಿ ಒಂದು ಲೈನ್‌ ಹೊರತುಪಡಿಸಿ ಎಲ್ಲ ಮಾರ್ಗಗಳಲ್ಲಿ ಫಾಸ್ಟಾಗ್‌ ವ್ಯವಸ್ಥೆಯನ್ನು ಪೂರ್ಣ ಪ್ರಮಾಣದಲ್ಲಿ ಅಳವಡಿಸಲಾಗಿದೆ. ಪ್ರತಿ ನಿತ್ಯ 7 ಸಾವಿರ ಕಾರು ಸೇರಿದಂತೆ ಎಲ್ಲ ಬಗೆಯ ವಾಣಿಜ್ಯ ವಾಹನಗಳು ಈ ಟೋಲ್‌ ಪ್ಲಾಜಾ ಮೂಲಕ ಓಡಾಡುತ್ತಿದ್ದು, ಇದರಲ್ಲಿ ಶೇ. 20ರಷ್ಟು ವಾಹನಗಳು ಮಾತ್ರ ಫಾಸ್ಟಾಗ್‌ ಸೌಲಭ್ಯ ಹೊಂದಿವೆ.

ಪ್ಲಾಜಾಗಳಲ್ಲಿ ಸದ್ಯ ಟೋಲ್‌ ಪಾವತಿಗೆ ವಾಹನಗಳು ಸಾಲುಗಟ್ಟಿ ನಿಲ್ಲಬೇಕಾಗಿತ್ತು ಮತ್ತು ಚಿಲ್ಲರೆಗಾಗಿ ಕೆಲವೊಮ್ಮೆ ಕಿರಿಕಿರಿಯ ಘಟನೆಗಳು ಆಗುತ್ತಿದ್ದವು. ಸ್ವೆ „ಪಿಂಗ್‌ ಯಂತ್ರಗಳು ಸಹ ಕೈ ಕೊಡುತ್ತಿದ್ದವು. ಈಗ ಫಾಸ್ಟಾಗ್‌ ಕಡ್ಡಾಯದಿಂದ ಪ್ರಯಾಣಿಕರು ಕೆಲ ಸೆಕೆಂಡ್‌ಗಳಲ್ಲಿಯೇ ಪಾವತಿಸಿ ಸಂಚರಿಸಬಹುದು. ಇದರಿಂದ ಸಮಯ, ಇಂಧನ, ಹಣ ಉಳಿತಾಯವಾಗುವುದರ ಜತೆಗೆ ಫ್ಲಾಜಾ ಸಿಬ್ಬಂದಿಗಳಿಗೂ ಅನಗತ್ಯ ಕಿರಿಕಿರಿ ತಪ್ಪಿದಂತಾಗಲಿದೆ.

ಏನಿದು ಫಾಸ್ಟಾಗ್‌?
ನಗದು ರಹಿತ ವಹಿವಾಟು ಉತ್ತೇಜನಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಜಾರಿಗೆ ತಂದಿರುವ “ಇ-ಟೋಲ್‌ ಸಂಗ್ರಹ’ ವ್ಯವಸ್ಥೆಯೇ ಫಾಸ್ಟಾಗ್‌. ಈ ಸೌಲಭ್ಯ ಪಡೆಯಲು ವಾಹನ ಮಾಲೀಕರು ಬ್ಯಾಂಕ್‌ನಲ್ಲಿ ಫಾಸ್ಟಾಗ್‌ ಪ್ರಿಪೇಯ್ಡ ಖಾತೆ ತೆರೆದು, ಮುಂಗಡ ಹಣ ತುಂಬಬೇಕು. ಬಳಿಕ ವಾಹನದ ಮುಂಭಾಗದ ಗಾಜಿಗೆ ರೇಡಿಯೋ ತರಂಗಾಂತರಗಳನ್ನು ಒಳಗೊಂಡ ಫಾಸ್ಟಾಗ್‌ ಸ್ಟಿಕ್ಕರ್‌ ಅಂಟಿಸಲಾಗುವುದು. ಈ ಸ್ಟಿಕ್ಕರ್‌ ಹೊಂದಿರುವ ವಾಹನ ಟೋಲ್‌ ಸಮೀಪ ಬಂದ ಕೂಡಲೇ ಅಲ್ಲಿ ಅಳವಡಿಸಿರುವ ಟ್ಯಾಗ್‌ ರೀಡರ್‌ ಸಾಧನ ವಾಹನದ ಮೇಲಿನ ಸ್ಟಿಕ್ಕರ್‌ ಸ್ಕ್ಯಾನ್‌ ಮಾಡುತ್ತದೆ. ತಕ್ಷಣ ಮಾಲೀಕರ ಖಾತೆಯಿಂದ ಹಣ ಕಡಿತವಾಗಿ, ವಾಹನಗಳ ಸಂಚಾರಕ್ಕೆ ಇರುವ ತಡೆ ತೆರೆದುಕೊಳ್ಳುತ್ತದೆ. ಹಣ ಕಡಿತವಾದ ಸಂದೇಶ ವಾಹನ ಮಾಲೀಕರ ಮೊಬೈಲ್‌ಗೆ ಹಾಗೂ ಜಮೆಯಾದ ಸಂದೇಶ ಟೊಲ್‌ ಕೇಂದ್ರಕ್ಕೆ ರವಾನೆಯಾಗುತ್ತದೆ.

ಫಾಸ್ಟಾಗ್‌ ಇಲ್ಲದಿದ್ರೆ ದುಪ್ಪಟ್ಟು ಶುಲ್ಕ
ಟೋಲ್‌ನ ಒಂದು ಕಡೆ ಮಾತ್ರ ಇತರ ಪಾವತಿ ವ್ಯವಸ್ಥೆಗೆ ಅವಕಾಶ ನೀಡಲಾಗಿದೆ. ಇಲ್ಲಿ ಫಾಸ್ಟಾಗ್‌ ಇಲ್ಲದ ವಾಹನಗಳು ಸರತಿ ಸಾಲಿನಲ್ಲಿ ಕಾಯಬೇಕಾಗಿದೆ. ಉಳಿದ ಎಲ್ಲ ಲೈನ್‌ (ಪಥ)ಗಳಲ್ಲಿ ಫಾಸ್ಟಾಗ್‌ ಗಳು ಮಾತ್ರ ಇರಲಿವೆ. ಈ ಪಥದಲ್ಲಿ ಫಾಸ್ಟಾಗ್‌ ವ್ಯವಸ್ಥೆ ಅಳವಡಿಸದೇ ಇರುವ ವಾಹನವಾದರೆ ಟೋಲ್‌ ಮೊತ್ತದ ದುಪ್ಪಟ್ಟು ಹಣ ಪಾವತಿಸಬೇಕಾಗುತ್ತದೆ. ಫಾಸ್‌ಟ್ಯಾಗ್‌ಗಳನ್ನು ಫ್ಲಾಜಾ, ಪೆಟ್ರೋಲ್‌ ಬಂಕ್‌ ಮತ್ತು ಬ್ಯಾಂಕ್‌ಗಳಲ್ಲಿ ಅಗತ್ಯ ದಾಖಲೆಗಳನ್ನು ಕೊಟ್ಟು ಖರೀದಿಸಬೇಕಿದೆ. ಇನ್ನೂ ಹೊಸ ವಾಹನಗಳಿಗೆ ಫಾಸ್ಟಾಗ್‌ ಇದ್ದರೆ ಮಾತ್ರ ನೋಂದಣಿ ಮಾಡಲಾಗುತ್ತಿದೆ.

ವಾಹನ ಸವಾರರಲ್ಲಿ ಜಾಗೃತಿ
ಮಂಗಲಗಿ ಪ್ಲಾಜಾದಲ್ಲಿ ಈ ಹಿಂದೆಯೇ ಫಾಸ್ಟಾಗ್‌ ವ್ಯವಸ್ಥೆ ಅಳವಡಿಸಿದ್ದು, ಈಗ ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸಲಾಗಿದೆ. ನಿತ್ಯ ಸಂಚರಿಸುವ 7 ಸಾವಿರ ವಾಹನಗಳಲ್ಲಿ ಶೇ.20ರಷ್ಟು ವಾಹನಕ್ಕೆ ಮಾತ್ರ ಹೊಸ ಸೌಲಭ್ಯ ಇದೆ. ಇಲ್ಲಿ ನಿತ್ಯ 30 ವಾಹನಗಳಿಗೆ ಫಾಸ್ಟಾಗ್‌ ಅಳವಡಿಸಲಾಗುತ್ತಿದೆ. ಕೇಂದ್ರ ಸರ್ಕಾರ ಹೊಸ ವ್ಯವಸ್ಥೆ ಕಡ್ಡಾಯ ಮಾಡಿರುವ ಹಿನ್ನೆಲೆಯಲ್ಲಿ ವಾಹನ ಸವಾರರಲ್ಲಿ ಕನ್ನಡ ಸೇರಿ ತ್ರಿಭಾಷೆ ಮತ್ತು ಬ್ಯಾನರ್‌ಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ.
ಅರುಣಕುಮಾರ,
ವ್ಯವಸ್ಥಾಪಕ ಟೋಲ್‌ ಪ್ಲಾಜಾ

ಟಾಪ್ ನ್ಯೂಸ್

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.