ಸರ್ಕಾರಿ ಭೂಮಿಯಲ್ಲೂ ಹೆಡೆ ಎತ್ತಿವೆ ಅಕ್ರಮ ಲೇಔಟ್ಗಳು
ಕಂದಾಯ ಅಧಿಕಾರಿಗಳ ನೇರ ಭಾಗಿಯಾಗಿರುವ ಶಂಕೆ
Team Udayavani, Aug 22, 2019, 10:20 AM IST
ಲೇಔಟ್ (ಸಂಗ್ರಹ ಚಿತ್ರ)
•ದುರ್ಯೋಧನ ಹೂಗಾರ
ಬೀದರ: ಬೀದರ ತಾಲೂಕಿನಲ್ಲಿ 500 ಎಕರೆಗೂ ಅಧಿಕ ಭೂಮಿಯಲ್ಲಿ ಅನಧಿಕೃತ ಲೇಔಟ್ಗಳು ತಲೆ ಎತ್ತಿದ್ದು, ಈ ಪೈಕಿ 154 ಎಕರೆ ಸರ್ಕಾರಿ ಭೂಮಿಯಲ್ಲಿ ಕರ್ನಾಟಕ ಭೂ ಕಂದಾಯ ಕಾಯ್ದೆ ಉಲ್ಲಂಘಿಸಿ ಅನಧಿಕೃತ ಲೇಔಟ್ ನಿರ್ಮಿಸಿರುವ ಸಂಗತಿ ಬೆಳಕಿಗೆ ಬಂದಿದೆ.
ಜಿಲ್ಲಾಡಳಿತ ಈಗಾಗಲೇ ಬೀದರ ತಾಲೂಕಿನ 157 ಅನಧಿಕೃತ ಲೇಔಟ್ ಗುರುತಿಸಿ ನೋಟಿಸ್ ಕೂಡ ನೀಡಿದೆ. ತಾಲೂಕಿನ ವಿವಿಧಡೆ ಕರ್ನಾಟಕ ಭೂ ಕಂದಾಯ ಕಾಯ್ದೆ ನಿಯಮ ಉಲ್ಲಂಘಿಸಿ ಕೃಷಿ ಭೂಮಿಗಳನ್ನು ಕೃಷಿಯೇತರ ಭೂಮಿಯನ್ನಾಗಿಸಿ ಪರಿವರ್ತಿಸಿ ಕಾನೂನು ಉಲ್ಲಂಘಿಸಲಾಗಿದೆ. ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 192-ಎ ಕಾಯ್ದೆ ಉಲ್ಲಂಘಿಸಿ ನೂರಾರು ಎಕರೆ ಪ್ರದೇಶದಲ್ಲಿ ಲೇಔಟ್ಗಳನ್ನು ನಿರ್ಮಿಸಿ ಮಾರಾಟ ಮಾಡಲಾಗುತ್ತಿದ್ದು, ಸಾರ್ವಜನಿಕರು ಅನಧಿಕೃತ ಲೇಔಟ್ಗಳಲ್ಲಿ ನಿವೇಶನ ಖರೀದಿಸಬಾರದು ಎಂದು ಈ ಹಿಂದೆಯೇ ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿತ್ತು. ಅಲ್ಲದೆ, ಅನಧಿಕೃತ ಲೇಔಟ್ಗಳಲ್ಲಿನ ತಯಾರಿಸಿದ ಖಾತೆಗಳನ್ನು ಕೂಡ ರದ್ದು ಮಾಡುವಂತೆ ಸಂಬಂಧಿಸಿದ ಇಲಾಖೆಗಳಿಗೆ ಜಿಲ್ಲಾಧಿಕಾರಿಗಳು ಕಟ್ಟು ನಿಟ್ಟಿನ ಆದೇಶ ನೀಡಿದರು. ನಿವೇಶನ ಖರೀದಿಸಿದಲ್ಲಿ ಖರೀದಿದಾರರೇ ಇದಕ್ಕೆ ನೇರ ಹೊಣೆಗಾರರು ಎಂದು ಕೂಡ ಎಚ್ಚರಿಕೆ ನೀಡಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಸರ್ಕಾರಿ ಭೂಮಿ ಮಾಯ: ಸದ್ಯ ಜಿಲ್ಲಾಡಳಿತ ನೀಡಿರುವ ನೋಟಿಸ್ ಆಧಾರದಲ್ಲಿ ನೋಡುವುದಾದರೆ ತಾಲೂಕಿನ 154 ಎಕರೆ ಭೂಮಿಯಲ್ಲಿ ನಿವೇಶನ ಹಾಕಿರುವುದು ಕಂಡು ಬಂದಿದೆ.
ಕೆಲ ಕಂದಾಯ ಇಲಾಖೆ ಅಧಿಕಾರಿಗಳು ಅಕ್ರಮದಲ್ಲಿ ಭಾಗಿಯಾಗಿರುವ ಕಾರಣಕ್ಕೆ ದೊಡ್ಡ ಪ್ರಮಾಣದಲ್ಲಿ ಭೂಮಿ ಕಬಳಿಸಿ ಅನಧಿಕೃತ ನಿವೇಶನ ಸೃಷ್ಟಿಗೆ ಕಾರಣರಾಗಿದ್ದಾರೆ ಎಂಬ ಆರೋಪಗಳು ಜನರಿಂದ ಕೇಳಿ ಬರುತ್ತಿವೆ.
ಕಲ್ಲುಗಳು ಮಾಯ: ಬೀದರ ತಾಲೂಕಿನಲ್ಲಿನ ಅನಧಿಕೃತ ಲೇಔಟ್ಗಳ ಕುರಿತು ಜಿಲ್ಲಾಡಳಿತ ನೋಟಿಸ್ ನೀಡುತ್ತಿರುವುದನ್ನು ಗಮನಿಸಿದ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿನ ಅನಧಿಕೃತ ಲೇಔಟ್ಗಳ ಮಾಲೀಕರು ತಮ್ಮ ಭೂಮಿಯಲ್ಲಿ ಹೂಳಿದ್ದ ಗುರುತು ಕಲ್ಲುಗಳನ್ನು ಕಿತ್ತು ಹಾಕಿದ್ದಾರೆ ಎಂದುತಿಳಿದು ಬಂದಿದೆ. ಈಗಾಗಲೇ ಸಾರ್ವಜನಿಕರಿಗೆ ನೋಟರಿ ಮೂಲಕ ನಿವೇಶನ ಮಾರಾಟ ಮಾಡಿದ್ದು, ಇದೀಗ ಮಣ್ಣು ಸುರಿದು ಕಲ್ಲುಗಳನ್ನು ಮುಚ್ಚಿರುವುದು ನಿವೇಶನ ಖರೀದಿಸಿದವರ ಆತಂಕ ಹೆಚ್ಚಾಗುವಂತೆ ಮಾಡಿದೆ. ಖರೀದಿದಾರರು ಲೇಔಟ್ಗೆ ಭೇಟಿ ನೀಡಿದರೆ ಕೆಲ ದಿನ ಸುಮ್ಮನೆ ಇರಿ. ನಂತರ ಎಲ್ಲವೂ ಸರಿ ಮಾಡಿಕೊಡುತ್ತೇವೆ ಎಂದು ಮಾಲೀಕರು ಖರೀದಿದಾರರಿಗೆ ಭರವಸೆ ನೀಡುತ್ತಿರುವುದಾಗಿ ಹೆಸರು ಹೇಳದ ನಿವೇಶನ ಖರೀದಿದಾರರೊಬ್ಬರು ಮಾಹಿತಿ ನೀಡಿದ್ದಾರೆ.
ಖರೀದಿದಾರರಿಗೆ ಆತಂಕ: ವಿವಿಧ ಸರ್ವೆ ಸಂಖ್ಯೆಗಳಲ್ಲಿ ನಿವೇಶನ ಖರೀದಿಸಿದ ಸಾರ್ವಜನಿಕರು ಸದ್ಯ ಆತಂಕಕ್ಕೆ ಒಳಗಾಗಿದ್ದಾರೆ. ಕಷ್ಟ ಪಟ್ಟು ದುಡಿದ ಹಣದಿಂದ ಮನೆ ನಿರ್ಮಿಸಿಕೊಳ್ಳುವ ಕನಸ್ಸು ಈಡೇರುವುದು ಕಷ್ಟ ಸಾಧ್ಯ ಎಂದು ತಿಳಿದುಕೊಂಡ ಅವರು, ಜಿಲ್ಲಾಡಳಿತವೇ ಮುಂದಾಗಿ ನಿವೇಶನ ಖರೀದಿಗೆ ನೀಡಿದ ಹಣ ಮರಳಿಸಲು ಕ್ರಮ ವಹಿಸಬೇಕು ಎಂದು ನಿವೇಶನ ಖರೀದಿದಾರರು ಆಗ್ರಹಿಸಿದ್ದಾರೆ.
ಲೇಔಟ್ಗಳು ಸೃಷ್ಟಿಯಾಗಿ ನಿವೇಶನಗಳ ಖಾತೆ ನಕಲು ತಯಾರುಗುವ ಮೊದಲು ಜಿಲ್ಲಾಡಳಿತ ಗಮನಕ್ಕೆ ಯಾಕೆ ಬಂದಿಲ್ಲ? ಇದಕ್ಕೂ ಮೊದಲು ಕಂದಾಯ ಇಲಾಖೆ ಅಧಿಕಾರಿಗಳು ಮೌನ ವಹಿಸಿದ್ದರೆ? ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಬಲಿಯಾಗುವಂತಾಗಿದೆ. ಮೊದಲು ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡು ನಿವೇಶನ ಖರೀದಿಸಿದವರ ನೆರವಿಗೆ ಜಿಲ್ಲಾಡಳಿತ ಧಾವಿಸಬೇಕು ಎಂದು ಮನವಿ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ
ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ
Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!
Kushtagi:ವಿದ್ಯುತ್ದೀಪದ ಕಂಬಗಳಿಗೆ ಬಲ್ಬ್ ಅಳವಡಿಸುವ ವೇಳೆ ಅವಘಡ; ಪುರಸಭೆ ಸಿಬ್ಬಂದಿಗೆ ಗಾಯ
Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್ರಿಂದ ಪರಿಶೀಲನೆ
MUST WATCH
ಹೊಸ ಸೇರ್ಪಡೆ
Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ
ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ
Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!
Kushtagi:ವಿದ್ಯುತ್ದೀಪದ ಕಂಬಗಳಿಗೆ ಬಲ್ಬ್ ಅಳವಡಿಸುವ ವೇಳೆ ಅವಘಡ; ಪುರಸಭೆ ಸಿಬ್ಬಂದಿಗೆ ಗಾಯ
Festivals: ಹಬ್ಬಗಳು ಮರೆಯಾಗುತ್ತಿವೆಯೇ?