ಕವಿತೆ ರಚನೆಗೆ ಅಧ್ಯಯನ ಅವಶ್ಯ


Team Udayavani, Oct 23, 2019, 6:12 PM IST

23-October-29

ಬೀದರ: ಕವಿಯಾದವನು ಸಮಾಜದ ತಪ್ಪುಗಳನ್ನು ತಿದ್ದುವ ವಿರೋಧ ಪಕ್ಷದ ನಾಯಕನಂತೆ ಕೆಲಸ ಮಾಡುತ್ತಾನೆ. ವಿದ್ಯಾರ್ಥಿಗಳು ಯಾವಾಗಲೂ ಓದುವ ಮತ್ತು ಏನಾದರೂ ಹೊಸದನ್ನು ಬರೆಯುವ ಗೀಳು ಹಚ್ಚಿಕೊಳ್ಳಬೇಕು ಎಂದು ಹಿರಿಯ ಸಾಹಿತಿ ಡಾ|ಜಗನ್ನಾಥ ಹೆಬ್ಟಾಳೆ ಸಲಹೆ ನೀಡಿದರು.

ನಗರದ ಕರ್ನಾಟಕ ಕಾಲೇಜಿನಲ್ಲಿ ನಡೆದ ಸಾಹಿತ್ಯ ವೇದಿಕೆ ಕಾರ್ಯಕ್ರಮ ಹಾಗೂ ಕವಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕವಿತೆಗಳನ್ನು ರಚನೆ ಮಾಡುವ ಸಾಹಿತಿಗಳಿಗೆ ನಿರಂತರ ಅಧ್ಯಯನ ಅವಶ್ಯಕ. ಒಬ್ಬ ಅಭಿಯಂತರ ಇಟ್ಟಿಗೆ, ಸಿಮೆಂಟ್‌ ಮತ್ತು ಕಾಂಕ್ರಿಟ್‌ನ್ನು ಸರಿಯಾಗಿ ಜೋಡಿಸಿ ಒಂದು ಸುಂದರವಾದ ಕಟ್ಟಡ ತಯಾರಿಸಿದಂತೆ ಕವಿಯಾದವನು ಶಬ್ದಗಳ ಸಂಪತ್ತು,
ಅಕ್ಷರಗಳ ಜೋಡಣೆಯ ಮುಖಾಂತರ ಕವಿತೆ ಬರೆದಾಗ ಮಾತ್ರ ಸಮೃದ್ಧವಾದ ಕವಿತೆ ಹೊರಬರುತ್ತದೆ ಎಂದರು.

ಕಾಲೇಜಿನ ಪ್ರಾಚಾರ್ಯ ಡಾ| ಕಲ್ಪನಾ ದೇಶಪಾಂಡೆ ಮಾತನಾಡಿ, ತಪ್ಪಾಗುತ್ತೆ ಎಂದು ಕವಿತೆ ರಚನೆ ಮಾಡುವುದನ್ನು ನಿಲ್ಲಿಸಬಾರದು. ಎಡವಿ ಎಡವಿ ನಡೆಯಲು ಕಲಿತಂತೆ ತಪ್ಪುಗಳನ್ನು ತಿದ್ದಿಕೊಂಡು ಕವಿತೆ ರಚನೆ ಮಾಡಬೇಕು. ಅಂತಹ ಕವಿತೆಯೇ ಸಮಾಜದಲ್ಲಿ ಶ್ರೇಷ್ಠತೆ ಪಡೆದುಕೊಳ್ಳುತ್ತದೆ. ಕವಿ ರಚಿಸಿದ ಕವಿತೆ ಸಮಾಜವನ್ನು ಒಡೆಯುವಂತೆ ಇರದೇ ಸಮಾಜದ ಓರೆಕೋರೆಗಳನ್ನು ತಿದ್ದುವಂತಿರಬೇಕು ಎಂದು ಕರೆ ನೀಡಿದರು. ಪ್ರಾಧ್ಯಾಪಕ ಡಾ| ಮಹಾನಂದ ಮಡಕಿ ಮಾತನಾಡಿ, ಕಾವ್ಯ ಎಂಬುದು ಕೇವಲ ಶಬ್ದ ಮತ್ತು ಅಕ್ಷರಗಳ ಸಹಯೋಗವಲ್ಲ. ಬದಲಾಗಿ ಅದು ಭಾವನಾತ್ಮಕ ವಿಚಾರಗಳ ಸಂಗಮವಾಗಿದೆ. ಕವಿತೆ ರಚಿಸುವ ಕವಿಯು ಪ್ರಜಾಪತಿಯಾಗಿ ಆ ಕಾವ್ಯಕ್ಕೆ ಆತನೇ ಸೃಷ್ಟಿಕರ್ತನಾಗುತ್ತಾನೆ. ಕವಿಯಾದವನು ನಡೆ-ನುಡಿಗಳನ್ನು ಒಂದಾಗಿಸಿಕೊಂಡು ಬದುಕಬೇಕು. ಕವಿ ಕೇವಲ ಪ್ರಚಾರಕ್ಕಾಗಿ ಕವಿತೆ ರಚಿಸದೆ ಸಮಾಜದ ಏಳ್ಗೆಗಾಗಿ ರಚಿಸಬೇಕು ಎಂದರು.

ಆಂಗ್ಲ ವಿಭಾಗದ ಮುಖ್ಯಸ್ಥೆ ಗೀತಾ ರಾಗಾ ಸ್ವಾಗತಿಸಿದರು. ಸಂಗೀತಾ ಮಾನಾ ನಿರೂಪಿಸಿದರು. ಪ್ರೊ|ಗೀತಾ ಪೋಸ್ತೆ ವಂದಿಸಿದರು. ಕವಿಗೋಷ್ಠಿಯಲ್ಲಿ ಪ್ರಮುಖರಾದ ಮಹಾರುದ್ರ ಡಾಕುಳಗೆ, ಡಾ|ಸುನೀತಾ ಕೂಡ್ಲಿಕರ್‌, ಗೀತಾ ಪೋಸ್ತೆ, ಡಾ| ಸುರೇಖಾ ಬಿರಾದಾರ, ರೂಪಾ ಗುಡ್ಡಾ, ಪವನಕುಮಾರ, ಪ್ರಾರ್ಥನಾ, ಓಂಕಾರ ಪಾಟೀಲ, ಜಯಪ್ರಕಾಶ, ಡೆಬೋರಾ, ಸುಪ್ರಿಯಾ, ಶೇರಿಲ್‌, ಶಿವರಾಣಿ, ಜೋಸ್ನಾ, ದಿಶಾನ್‌ ಮತ್ತು ಇಫ್ರಾ ಇನ್ನಿತರರು ಕವಿತೆ ವಾಚನ ಮಾಡಿದರು.

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಾದೇಶಿಕ ಕೇಂದ್ರ, ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಸಂಘ, ಕರ್ನಾಟಕ ಸಾಹಿತ್ಯ ಸಂಘ ಹಾಗೂ ಸ್ನಾತಕ್ಕೋತ್ತರ ಕನ್ನಡ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರದ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಲಾಗಿತ್ತು.

ಟಾಪ್ ನ್ಯೂಸ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Minchu

Bidar; ಬಿರುಗಾಳಿ‌ ಸಹಿತ ಭಾರಿ ಮಳೆ :ಸಿಡಿಲು ಬಡಿದು‌ ರೈತ ಸಾವು

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Minchu

Bidar; ಬಿರುಗಾಳಿ‌ ಸಹಿತ ಭಾರಿ ಮಳೆ :ಸಿಡಿಲು ಬಡಿದು‌ ರೈತ ಸಾವು

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.