ಮಾದಕ ವ್ಯಸನ ಅಂತಾರಾಷ್ಟ್ರೀಯ ಪಿಡುಗು

ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಪಿಡುಗು ಉಲ್ಬಣ ವ್ಯಸನಕ್ಕೆ ಯುವಜನತೆಯೇ ಹೆಚ್ಚು ಬಲಿ

Team Udayavani, Oct 16, 2019, 1:40 PM IST

16-October-14

ಬೀದರ: ಮಾದಕ ವ್ಯಸನವೆಂಬುದು ಇಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಪಿಡುಗಾಗಿ ಕಾಡುತ್ತಿದೆ. ಇದರಿಂದ ಯುವಜನರನ್ನು ಮುಕ್ತಗೊಳಿಸುವುದೇ ನಮ್ಮ ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆ ಎಂದು ನೆಹರೂ ಯುವ ಕೇಂದ್ರದ ಉಪನಿರ್ದೇಶಕ ಡಿ. ದಯಾನಂದ ಹೇಳಿದರು.

ನಗರದ ಬ್ರಿಮ್ಸ್‌ ಕಾಲೇಜಿನ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಾದಕ ವಸ್ತುಗಳ ವ್ಯಸನ ಮುಕ್ತ ಕುರಿತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಾದಕ ವಸ್ತುಗಳಿಗೆ ಇಂದು ಯುವಜನತೆ ಹೆಚ್ಚು ಬಲಿಯಾಗುತ್ತಿದ್ದಾರೆ. ಅದರಲ್ಲೂ ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಈ ಪಿಡುಗು ಉಲ್ಬಣಗೊಂಡಿದೆ. ಆದ್ದರಿಂದ ವಿಶೇಷವಾಗಿ ಈ ಭಾಗದ ಮುಗ್ಧ ಯುವಜನತೆಯನ್ನು ಮಾದಕ ವ್ಯಸನದಿಂದ ಮುಕ್ತಗೊಳಿಸಲು ಈ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ.

ಹಳ್ಳಿಗಳಲ್ಲಿ ಕೆಲವರು ಮಾದಕ ವ್ಯಸನವನ್ನೇ ದಿನನಿತ್ಯದ ಕಾರ್ಯ ಎಂದು ತಿಳಿದು ಪ್ರತಿದಿನ ಬೀಡಿ, ಸಿಗರೇಟ್‌, ಮದ್ಯ ಕುಡಿದು ತಮ್ಮ ಆರೋಗ್ಯ ಮತ್ತು ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಸಮುದಾಯ ಕೇಂದ್ರದ ನೌಕರರು ಹಳ್ಳಿಯಲ್ಲಿರುವ ಇಂತಹ ಜನತೆಯನ್ನು ವ್ಯಸನಮುಕ್ತ ಮಾಡುವ ಗುರಿ ಹೊಂದಬೇಕು. ಅದರಲ್ಲೂ ಯುವಕರನ್ನು ಸರಿದಾರಿಗೆ ತರಲು ನಿರಂತರ ಪ್ರಯತ್ನಿಸಬೇಕು ಎಂದು ತಿಳಿಸಿದರು. ಶಿವಯ್ಯ ಸ್ವಾಮಿ ಮಾತನಾಡಿ, ಮಾದಕ ವ್ಯಸನಗಳಿಗೆ ಬಲಿಯಾದ ವ್ಯಕ್ತಿ ಅದನ್ನು ಪಡೆಯುವವರೆಗೂ ಆತನಿಗೆ ಸಮಾಧಾನ ಇರುವುದಿಲ್ಲ. ಕಳ್ಳತನ ಮಾಡಿಯಾದರೂ, ಮನೆಯಲ್ಲಿಯ ವಸ್ತುಗಳನ್ನು ಮಾರಾಟ ಮಾಡಿಯಾದರೂ ಡ್ರಗ್ಸ್‌ ತೆಗೆದುಕೊಳ್ಳುತ್ತಾನೆ. ಇದರಿಂದ ತಾನು ಹಾಳಾಗುವುದಲ್ಲದೆ ಇಡೀ ಕುಟುಂಬದ ಸ್ವಾಸ್ಥ್ಯವನ್ನೇ ಹಾಳುಗೆಡವುತ್ತಾನೆ.ವಿದೇಶದಿಂದ ಭಾರತಕ್ಕೆ ಡ್ರಗ್ಸ್‌ ಕಳುಹಿಸುತ್ತಿದ್ದಾರೆ. ಭಾರತದ ಯುವಕರನ್ನು ಶಕ್ತಿಹೀನರನ್ನಾಗಿ ಮಾಡುವ ದೊಡ್ಡ ಹುನ್ನಾರ ನಡೆದಿದೆ. ಆದ್ದರಿಂದ ಗಡಿಯಲ್ಲಿ ವೀರಯೋಧರು ದೇಶವನ್ನು ಕಾಯುತ್ತಿದ್ದರೆ, ದೇಶದ ಒಳಗೆ ಆಂತರಿಕ ಶತ್ರುವಾದ ಈ ಡ್ರಗ್ಸ್‌ ಧಂದೇಕೋರರ ವಿರುದ್ಧ ನಿರಂತರ ಹೋರಾಡಬೇಕಾಗಿದೆ. ಇದರಿಂದ ಯುವಕರನ್ನು ಕಾಪಾಡಬೇಕಾಗಿದೆ ಎಂದರು.

ಡಾ| ಪಲ್ಲವಿ ಕೇಸರಿ ಮಾತನಾಡಿ, ಸಮುದಾಯ ಆರೋಗ್ಯದ ನೌಕರರು ಗ್ರಾಮಗಳಿಗೆ ತೆರಳಿ ಪ್ರಾಮಾಣಿಕತೆಯಿಂದ ದುಡಿಯಬೇಕು. ಮಾದಕ ವ್ಯಸನಕ್ಕೆ ಒಳಗಾದ ಯುವಕರಲ್ಲಿ ಮಾದಕ ವಸ್ತುಗಳಿಂದ ಆಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಬೇಕು. ಒಬ್ಬ ವ್ಯಕ್ತಿ ಒಂದು ಸಾರಿ ವ್ಯಸನಕ್ಕೆ ಅಂಟಿಕೊಂಡರೆ ಆತ ಬಿಡುವುದು ಬಹಳ ಕಷ್ಟ. ಅದರಿಂದ ದೂರ ಉಳಿಯುವಂತೆ ಯುವಕರಿಗೆ ತಿಳಿಸಿದರು.

ಕಾನೂನು ಬಾಹೀರವಾಗಿ ಅನೇಕ ಜನರು ಮಾದಕ ವಸ್ತುಗಳನ್ನು ಅಂಗಡಿಗಳಲ್ಲಿ ಮಾರಾಟ ಮಾಡಿ ಜನರನ್ನು ಹಾಗೂ ಈ ಸಮಾಜವನ್ನು ಹಾಳು ಮಾಡುತ್ತಿರುವುದು ವಿಷಾದನೀಯ. ಆದ್ದರಿಂದ ಸಮಾಜದ ಸ್ವಾಸ್ಥ್ಯ  ಕಾಪಾಡುವುದು ನಮ್ಮ ನಿಮ್ಮೆಲ್ಲರ
ಹೊಣೆಯಾಗಿದೆ ಎಂದರು.

ನೆಹರೂ ಯುವ ಕೇಂದ್ರದ ಯುವ ಸಮನ್ವಯಾಧಿಕಾರಿ ಪಿ.ಶ್ರೀನಿವಾಸ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಂತಪ್ಪ ಡೋಣಿ, ಬ್ರಿಮ್ಸ್‌ನ ನಿರ್ದೇಶಕ ಡಾ| ಎಸ್‌.ವಿ.ಕ್ಷೀರಸಾಗರ, ಡಾ| ದಿಲೀಪ ರಾಠೊಡ ಮಾತನಾಡಿದರು. ಡಾ| ಕೀರ್ತಿ, ಪ್ರೊ| ಈರಣ್ಣ ಲೋಣಿ, ರುಕ್ಮಿಣಿ ಜಿ., ಶ್ರೀ ನವನಾಥ ಖೇಡೆ, ಡಾ| ರಾಹುಲ್‌ ಬೇದ್ರೆ, ಡಾ| ಅಶೋಕ ಶೆಳಕೆ, ಪ್ರೊ| ಶಶಿಕಾಂತ, ಗುರುನಾತ ಉದಗೀರೆ, ಪ್ರೊ| ಅಮುಲ್‌ ಕಾಂಬಳೆ, ಜೈಶ್ರೀ ಮೇತ್ರೆ ಅನೇಕರು ಉಪಸ್ಥಿತರಿದ್ದರು.

ನ್ಯಾಷನಲ್‌ ಇನ್ಸ್‌ಟಿ ಟ್ಯೂಟ್‌ ಆಫ್‌ ಸೋಸಿಯಲ್‌ ಡಿಫೆನ್ಸ್‌ ನವದೆಹಲಿ, ಸಾಮಾಜಿನ ನ್ಯಾಯ ಇಲಾಖೆ, ಯುವ ಹಾಗೂ ಕ್ರೀಡಾ ಇಲಾಖೆ, ನೆಹರೂ ಯುವ ಕೇಂದ್ರ, ಬ್ರಿಮ್ಸ್‌ ಡಿಪಾರ್ಟ್‌ಮೆಂಟ್‌ ಆಫ್‌ ಕಮ್ಯುನಿಟಿ ಮೆಡಿಸೈನ್‌ ಮತ್ತು ಇಗ್ನೋ ಸ್ಟಡಿ ಸೆಂಟರ್‌ ಬ್ರಿಮ್ಸ್‌, ಕರುಣಾಮಯ ಯುವಕ ಸಂಘ ನಾವದಗೇರಿ ಇವರ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

1-weqwewq

Belur: ದೈತ್ಯ ‘ಕರಡಿ’ ಆನೆ ಕೊನೆಗೂ ಸೆರೆ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್‌

LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.