ತರಕಾರಿಯಲ್ಲಿ ಭರಪೂರ ಲಾಭ ಕಂಡ ರೈತ

7 ಎಕರೆ ಭೂಮಿಯಲ್ಲಿ ಹನಿ ನೀರಾವರಿ ವ್ಯವಸ್ಥೆ ವರ್ಷಕ್ಕೆ 5ರಿಂದ 5.50 ಲಕ್ಷ ಆದಾಯ

Team Udayavani, Feb 23, 2020, 11:32 AM IST

23-February-08

ಬೀದರ: ತರಕಾರಿ ಬೆಳೆಯಿರಿ ಎಂದರೆ ಉಳುಮೆ ಮಾಡಬೇಕು, ನಾಟಿ ಮಾಡಬೇಕು, ಕಾಯಿ ಕಡಿಯಬೇಕು, ಮಾರುಕಟ್ಟೆಗೆ ಕಳಿಸಬೇಕು, ಬಾಗವಾನರಿಗೆ ಅಡ್ಡಾದಿಡ್ಡಿ ದರಕ್ಕೆ ತರಕಾರಿ ಕೊಟ್ಟು ಕೈ ಜಾಡಿಸಿಕೊಂಡು ಬರಬೇಕು. ಗಾಳಿಗಿ ಗುದ್ದಿ ಮೈ ನೋಯಿಸಿಕೊಂಡಂತೆ ಎಂದು ಹೇಳುವ ರೈತರೆ ಈಗಿನ ಕಾಲದಲ್ಲಿ ಹೆಚ್ಚು. ಆದರೆ, ಇವುಗಳನ್ನೆಲ್ಲ ನಿಭಾಯಿಸಿಯೂ ತರಹೇವಾರಿ ತರಕಾರಿ ಬೆಳೆದು ಇನ್ನೊಬ್ಬ ವೃದ್ಧ ರೈತ ಸೈ ಎನ್ನಿಸಿಕೊಂಡಿದ್ದಾರೆ.

ಹುಮನಾಬಾದ ತಾಲೂಕಿನ ಉಡಬಾಳ ಗ್ರಾಮದ ರೈತ ನಾರಾಯಣರಾವ್‌ ಭಂಗಿ ಐದು ವರ್ಷಗಳಿಂದ ಒಂದು ಎಕರೆಯಿಂದ ತರಕಾರಿ ಬೆಳೆಯಲು ಪ್ರಾರಂಭಿಸಿ ಇಂದು ಏಳು ಎಕರೆ ವರೆಗೆ ಬೆಳೆ ಬೆಳೆಯುತ್ತಿದ್ದಾರೆ. ತರಕಾರಿಗೆ ಹೇಳಿ ಮಾಡಿಸಿದಂಥ ಕಪ್ಪು ಮಣ್ಣಿನ ಜಮೀನು ಇದ್ದು, ಬಾವಿ ಮೂಲಕ ನೀರಾವರಿ ಮಾಡುತ್ತಿದ್ದಾರೆ.

ತರಕಾರಿ ಬೆಳೆಯುವ ಮೊದಲು ಕಬ್ಬು, ಜೋಳ, ಕಡಲೆಯಂಥ ಕೃಷಿ ಬೆಳೆಗಳನ್ನೇ ಬೆಳೆಯುತ್ತಿದ್ದೆ. ಖರ್ಚು ಲಾಭ ಅಷ್ಟಕ್ಕಷ್ಟೇ ಆಗುತ್ತಿತ್ತು. ಹೀಗಾದರೆ ಕುಟುಂಬ ನಿಭಾಯಿಸುವುದು, ಮಕ್ಕಳ ವಿದ್ಯಾಭ್ಯಾಸ, ಮಕ್ಕಳಿಗೆ ನೌಕರಿ ಕೊಡಿಸಲು ಆಗುವುದಿಲ್ಲ. ಇನ್ನೂ ಹೆಚ್ಚಿನ ಹಣ ಸಂಪಾದನೆ ಮಾಡಬೇಕೆಂಬ ಛಲದಿಂದ ಊರೂರು ಸುತ್ತಿ ತರ ತರಹದ ಬೆಳೆಗಳನ್ನು ಬೆಳೆದ ರೈತರ ತೋಟಗಳಿಗೆ ಹೋಗಿ ನೋಡಿ ಚರ್ಚಿಸಿ, ಲೆಕ್ಕ ಹಾಕಿ ನೋಡಿದಾಗ ತರಕಾರಿ ಬೆಳೆಯುವುದೇ ಸೂಕ್ತ ಎಂದು ನಿರ್ಧರಿಸಿದೆ ಎನ್ನುತ್ತಾರೆ ಭಂಗಿ.

ಚಿಟಗುಪ್ಪಾ, ಮನ್ನಾಏಖೆಳ್ಳಿ, ಕಲಬುರಗಿ, ಹೈದ್ರಾಬಾದ್‌ಗೆ ತರಕಾರಿ ಕಳಿಸಿ ಮಾರಾಟ ಮಾಡಲಾಗುತ್ತಿದೆ. ತೋಟಗಾರಿಕೆ ಇಲಾಖೆಯಿಂದ
7 ಎಕರೆಗೆ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಲ್ಲಿ ಹನಿ ನೀರಾವರಿಗೆ ಮತ್ತು ಮಲ್ಚಿಂಗ್‌ ಗೆ ಸಹಾಯಧನ ಪಡೆದಿದ್ದೇನೆ. ಬೆಳೆಗೆ ಮಲ್ಚಿಂ ಗ್‌, ಡ್ರಿಪ್‌ ಮಾಡಿಸಿದ್ದರಿಂದ ಖರ್ಚು ಕಡಿಮೆಯಾಗಿ ಬಹು ಬೆಳೆ ಪದ್ಧತಿಯಿಂದ ಉತ್ಪನ್ನ ಜಾಸ್ತಿಯಾಗುತ್ತಿದೆ ಎನ್ನುತ್ತಾರೆ ಅವರು. ಹೆಚ್ಚಿನ ಮಾಹಿತಿಗೆ ನಾರಾಯಣರಾವ್‌ ಭಂಗಿ ಮೊ: 9448584932ಗೆ ಸಂಪರ್ಕಿಸಬಹುದು.

5 ವರ್ಷದಿಂದ ಕಲ್ಲಂಗಡಿ, ಗೋಬಿ, ಟೊಮ್ಯಾಟೊ, ಬದನೆ, ಹೀರೆಕಾಯಿ, ಹಾಗಲ ತರಕಾರಿ ಬೆಳೆಯುತ್ತಿದ್ದೇನೆ. ಇದರಲ್ಲೇ ನನಗೆ ಲಾಭ ಎನಿಸಿದೆ. ದಿನಕ್ಕೆ 1500ರಿಂದ 2000 ರೂ. ವರ್ಷಕ್ಕೆ 5 ರಿಂದ 5.50 ಲಕ್ಷಗಳ ವರೆಗೆ ಆದಾಯ ಬರುತ್ತಿದೆ. ಖರ್ಚು ವರ್ಷಕ್ಕೆ 2-3 ಲಕ್ಷ ರೂಪಾಯಿ ಬರುತ್ತಿದೆ. ನೌಕರದಾರರಿಗೆ ವೇತನ ಬಂದಂತೆ ನನಗೂ ಕೃಷಿಯಿಂದ ವೇತನ ಬರುತ್ತಿದೆ. ಇದಕ್ಕೆಲ್ಲ ಅಧಿಕಾರಿಗಳು ಮತ್ತು ಪ್ರಗತಿಪರ ರೈತರರೇ ನನಗೆ ಪ್ರೇರಣೆ. “ಆಕಳು, ಎಮ್ಮೆಗಳಿಂದ ಹೊಲಕ್ಕೆ ಗೊಬ್ಬರ, ಮನೆಗೆ ಹಾಲು ಆಗುತ್ತದೆ.
ನಾರಾಯಣರಾವ್‌ ಭಂಗಿ, ರೈತ

ಟಾಪ್ ನ್ಯೂಸ್

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

16

ನೀತಿ ಸಂಹಿತೆ ನಡುವೆಯೂ ರಾಜ್ಯಕ್ಕೆ ನೆರವು ಎನ್ನುವ ಬಿಜೆಪಿಗೆ ನಾಚಿಕೆ ಇಲ್ಲವೇ? – ಖಂಡ್ರೆ

Minchu

Rain; ಬೀದರ್,ಕೊಪ್ಪಳದಲ್ಲಿ ಸಿಡಿಲಿನ ಆರ್ಭಟಕ್ಕೆ ಇಬ್ಬರು ಮೃತ್ಯು

Bidar; ಪ್ರೇಯಸಿ ಮದುವೆ ದಿನವೇ ಪ್ರಿಯಕರನ ಶವ ಪತ್ತೆ

Bidar; ಪ್ರೇಯಸಿ ಮದುವೆ ದಿನವೇ ಪ್ರಿಯಕರನ ಶವ ಪತ್ತೆ

rape

Bidar; ಯುವಕನಿಂದ ಅಪ್ರಾಪ್ತ ವಯಸ್ಕಳ ರೇಪ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

10-screenshot

Students Notes: ಸ್ಕ್ರೀನ್‌ ಶಾರ್ಟ್‌ಗಳೆಂದು ಪುಸ್ತಕವಾಗದಿರಲಿ

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.