ಬೀದರನಲ್ಲಿ 2,777 ಹೆಕ್ಟೇರ್‌ ಬೆಳೆಹಾನಿ

ಚಿಟಗುಪ್ಪದಲ್ಲಿ 10 ಹೆಕ್ಟೇರ್‌ ಹೆಸರು, 10 ಹೆಕ್ಟೇರ್‌ ಉದ್ದು ಸೇರಿ 20 ಹೆಕ್ಟೇರ್‌ ಬೆಳೆ ಹಾಳಾಗಿದೆ.

Team Udayavani, Sep 17, 2021, 6:35 PM IST

ಬೀದರನಲ್ಲಿ 2,777 ಹೆಕ್ಟೇರ್‌ ಬೆಳೆಹಾನಿ

ಬೀದರ: ಜಿಲ್ಲೆಯಲ್ಲಿ ಕಳೆದ ಜು. ಮತ್ತು ಆಗಸ್ಟ್‌ ತಿಂಗಳಿನಲ್ಲಿ ಸುರಿದ ಭಾರಿ ಮಳೆಯಿಂದಾಗಿ 391 ಮನೆಗಳಿಗೆ ಭಾಗಶಃ ಹಾನಿಯಾಗಿದೆ. 2,777 ಹೆಕ್ಟೇರ್‌ ಪ್ರದೇಶದಲ್ಲಿನ ಬೆಳೆಗಳು ಹಾಳಾಗಿದ್ದು, ಒಟ್ಟಾರೆ 244 ಲಕ್ಷ ರೂ. ಹಾನಿಯ ಅಂದಾಜು ಮಾಡಲಾಗಿದೆ ಎಂದು ಕಂದಾಯ ಸಚಿವ ಆರ್‌. ಅಶೋಕ ತಿಳಿಸಿದ್ದಾರೆ.

ಎಂಎಲ್‌ಸಿ ವಿಜಯಸಿಂಗ್‌ ಅವರ ಪ್ರಶ್ನೆಗೆ ಲಿಖೀತ ಉತ್ತರ ನೀಡಿದ್ದಾರೆ. ಮಳೆಹಾನಿ ಕುರಿತು ಕೃಷಿ ಮತ್ತು ಕಂದಾಯ ಇಲಾಖೆಯಿಂದ ಜಂಟಿ ಸಮೀಕ್ಷೆ ನಡೆಸಲಾಗಿದೆ. ಶೇ.33ಕ್ಕಿಂತ ಅಧಿಕ ಬೆಳೆ ಹಾಳಾದ ಪ್ರಕರಣಗಳಲ್ಲಿ ಸಂಬಂಧಿಸಿದ ರೈತರಿಗೆ ಎಸ್‌ಆರ್‌ಡಿಎಫ್‌, ಎನ್‌ಡಿಆರ್‌ ಎಫ್‌ ಮಾರ್ಗಸೂಚಿ ಪ್ರಕಾರ ಗರಿಷ್ಠ 2 ಹೆಕ್ಟೇರ್‌ಗೆ ಸೀಮಿತಗೊಳಿಸಿ ಇನ್‌ಪುಟ್‌ ಸಬ್ಸಿಡಿ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಮಳೆಯಾಶ್ರಿತ ಬೆಳೆಗಳಿಗೆ ಪ್ರತಿ ಹೆಕ್ಟೇರ್‌ಗೆ 6,800, ನೀರಾವರಿ ಬೆಳೆಗೆ ಪ್ರತಿ ಹೆಕ್ಟೇರ್‌ಗೆ 13,500 ಮತ್ತು ಬಹು ವಾರ್ಷಿಕ ಬೆಳೆಗಳಿಗೆ ಹೆಕ್ಟೇರ್‌ಗೆ 18,000 ರೂ. ಪರಿಹಾರ ಸಿಗಲಿದೆ. ಪ್ರವಾಹ ಪರಿಹಾರಕ್ಕಾಗಿ ಆರ್ಥಿಕ ನೆರವು ಕೋರಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಹಾನಿ ವಿವರ: ಔರಾದ ತಾಲೂಕಿನಲ್ಲಿ 9.78 ಹೆಕ್ಟೇರ್‌ ಹೆಸರು, 9 ಹೆಕ್ಟೇರ್‌ ಉದ್ದು, 29.51 ಹೆಕ್ಟೇರ್‌ ತೊಗರಿ ಮತ್ತು 96.08 ಹೆಕ್ಟೇರ್‌ ಸೋಯಾ ಸೇರಿ ಒಟ್ಟು 144.4 ಹೆಕ್ಟೇರ್‌ ಬೆಳೆ ಹಾಳಾಗಿದೆ. ಕಮಲನಗರ ತಾಲೂಕಿನಲ್ಲಿ 8.11 ಹೆಕ್ಟೇರ್‌ ತೊಗರಿ ಮತ್ತು 3.41 ಹೆಕ್ಟೇರ್‌ ಸೋಯಾಬೀನ್‌ ಸೇರಿ 11.52 ಹೆಕ್ಟೇರ್‌ ಬೆಳೆ ಹಾಳಾಗಿದೆ. ಬೀದರ ತಾಲೂಕಿನಲ್ಲಿ ಹೆಸರು, ಉದ್ದು, ತೊಗರಿ, ಸೋಯಾ, ಕಬ್ಬು ಸೇರಿದಂತೆ ಯಾವುದೇ ಬೆಳೆ ಮಳೆಯಿಂದಾಗಿ ಹಾಳಾಗಿಲ್ಲ.

ಭಾಲ್ಕಿಯಲ್ಲಿ 331.82 ಹೆಕ್ಟೇರ್‌ ಹೆಸರು, 355 ಹೆಕ್ಟೇರ್‌ ಉದ್ದು, 405 ಹೆಕ್ಟೇರ್‌ ತೊಗರಿ ಮತ್ತು 827 ಹೆಕ್ಟೇರ್‌ ಸೋಯಾ ಸೇರಿ ಒಟ್ಟು 1919 ಹೆಕ್ಟೇರ್‌ ಬೆಳೆ ಹಾಳಾಗಿದೆ. ಬಸವಕಲ್ಯಾಣದಲ್ಲಿ 22.54 ಹೆಕ್ಟೇರ್‌ ಹೆಸರು, 15.68 ಹೆಕ್ಟೇರ್‌ ಉದ್ದು, 181.52 ಹೆಕ್ಟೇರ್‌ ತೊಗರಿ, 230 ಹೆಕ್ಟೇರ್‌ ಸೋಯಾ ಸೇರಿ ಒಟ್ಟು 450 ಹೆಕ್ಟೇರ್‌ ಗಳಷ್ಟು ಬೆಳೆ ಹಾಳಾಗಿದೆ. ಹುಲಸೂರಿನಲ್ಲಿ 4.68 ಹೆಕ್ಟೇರ್‌ ತೊಗರಿ ಮತ್ತು 41 ಹೆಕ್ಟೇರ್‌ ಸೋಯಾ ಹಾಳಾಗಿದೆ. ಮಳೆಯಿಂದ ಹಾಳಾಗಿರುವ ಕ್ಷೇತ್ರ ಒಟ್ಟು 45 ಹೆಕ್ಟೇರ್‌. ಹುಮನಾಬಾದನಲ್ಲಿ 16 ಹೆಕ್ಟೇರ್‌ ಹೆಸರು, 13 ಹೆಕ್ಟೇರ್‌ ಉದ್ದು, 9 ಹೆಕ್ಟೇರ್‌ ತೊಗರಿ ಮತ್ತು 12 ಹೆಕ್ಟೇರ್‌ ಸೋಯಾ ಸೇರಿ ಒಟ್ಟು 50 ಹೆಕ್ಟೇರ್‌ ಬೆಳೆ ಹಾಳಾಗಿದೆ.

ಚಿಟಗುಪ್ಪದಲ್ಲಿ 10 ಹೆಕ್ಟೇರ್‌ ಹೆಸರು, 10 ಹೆಕ್ಟೇರ್‌ ಉದ್ದು ಸೇರಿ 20 ಹೆಕ್ಟೇರ್‌ ಬೆಳೆ ಹಾಳಾಗಿದೆ. ಮಳೆಯಿಂದಾಗಿ ಜಿಲ್ಲೆಯಲ್ಲಿ ಒಟ್ಟಾರೆ 390 ಹೆಕ್ಟೇರ್‌ ಹೆಸರು, 402 ಹೆಕ್ಟೇರ್‌ ಉದ್ದು, 638 ಹೆಕ್ಟೇರ್‌ ತೊಗರಿ ಮತ್ತು 1,210 ಹೆಕ್ಟೇರ್‌ ಸೋಯಾ ಸೇರಿ ಒಟ್ಟು 2,641 ಹೆಕ್ಟೇರ್‌ ಬೆಳೆ ಹಾಳಾಗಿದೆ.ಇದನ್ನು ಹೊರತುಪಡಿಸಿ ಔರಾದ್‌ ತಾಲೂಕಿನಲ್ಲಿ 28 ಹೆಕ್ಟೇರ್‌, ಕಮಲನಗರ ತಾಲೂಕಿನಲ್ಲಿ 45 ಹೆಕ್ಟೇರ್‌, ಬಸವಕಲ್ಯಾಣ ತಾಲೂಕಿನಲ್ಲಿ 44 ಹೆಕ್ಟೇರ್‌, ಹುಲಸೂರು ತಾಲೂಕಿನಲ್ಲಿ 7 ಹೆಕ್ಟೇರ್‌ ತೋಟಗಾರಿಕೆ ಬೆಳೆಗಳೂ ಹಾಳಾಗಿವೆ.

ಟಾಪ್ ನ್ಯೂಸ್

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

dk-suresh

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-aaaa

Lokayukta; ಬೆಳ್ಳಂಬೆಳಗ್ಗೆ ರಾಜ್ಯದ ವಿವಿಧೆಡೆ ಭ್ರಷ್ಟರ ಬೇಟೆಗಿಳಿದ ಲೋಕಾಯುಕ್ತ

Raw paan masala worth Rs 9 lakh, saree worth Rs 3 lakh seized in Bidar

Bidar: 9 ಲಕ್ಷ ರೂ. ಮೌಲ್ಯದ ಕಚ್ಚಾ ಪಾನ್ ಮಸಾಲಾ, 3 ಲಕ್ಷ ರೂ. ಮೌಲ್ಯ ಸೀರೆ ಜಪ್ತಿ

ಹಾಲ್ ಟಿಕೆಟನ್ನೇ ತಿಂದು ಹಾಕಿದ ಕುರಿ… ನೊಂದು ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ

ಹಾಲ್ ಟಿಕೆಟನ್ನೇ ತಿಂದು ಹಾಕಿದ ಕುರಿ… ನೊಂದು ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ

1-qwewqe

Bidar; ಖೂಬಾ ಪರ ಆರ್.ಅಶೋಕ್ ನೇತೃತ್ವದಲ್ಲಿ ಬಿಜೆಪಿ ಒಗ್ಗಟ್ಟು ಪ್ರದರ್ಶನ

ಬೀದರ್ ಕ್ಷೇತ್ರಕ್ಕೆ ಸಾಗರ ಖಂಡ್ರೆ ಹೆಸರು ಅಂತಿಮ; ಸಿಎಂ -ಡಿಸಿಎಂ ಭೇಟಿಯಾದ ಈಶ್ವರ್

Loksabha: ಬೀದರ್ ಕ್ಷೇತ್ರಕ್ಕೆ ಸಾಗರ ಖಂಡ್ರೆ ಹೆಸರು ಅಂತಿಮ; ಸಿಎಂ ಭೇಟಿಯಾದ ಈಶ್ವರ್

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

7-brijesh

Brijesh Chowta; ಎ.4: ಅಧಿಕೃತ ನಾಮಪತ್ರ ಸಲ್ಲಿಕೆ; ಕ್ಯಾ| ಚೌಟರ ಆಸ್ತಿ ಇಷ್ಟು !

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

6-good-friday

Good Friday: ಕ್ರೈಸ್ತರಿಂದ ಕೊನೆಯ ಭೋಜನದ ಸ್ಮರಣೆ

Kannada Cinema: ತೆರೆಗೆ ಬಂತು ಯುವ, ತಾರಿಣಿ

Kannada Cinema: ತೆರೆಗೆ ಬಂತು ಯುವ, ತಾರಿಣಿ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.