ಸೂರ್ಯಕಾಂತಿಗೆ ಕೊರಿಹುಳ ಬಾಧೆ: ಬೆಳೆಗಾರರಲ್ಲಿ ಆತಂಕ
Team Udayavani, Dec 24, 2021, 5:01 PM IST
ಮುದಗಲ್ಲ: ಹಿಂಗಾರು ಬೆಳೆ ಸೂರ್ಯಕಾಂತಿಗೆ ಕೊರಿಹುಳ ಕಾಣಿಸಿಕೊಂಡ ಪರಿಣಾಮ ರೈತರಲ್ಲಿ ಆತಂಕ ಮನೆ ಮಾಡಿದೆ.
ಹಿಂಗಾರಿ ಹಂಗಾಮಿನಲ್ಲಿ ತಿಂಗಳುಗಟ್ಟಲೆ ಸುರಿದ ಮಳೆಯಿಂದ ವಾತಾವರಣದಲ್ಲಿ ತಂಪೇರಿ ಸೂರ್ಯಕಾಂತಿಗೆ ಹುಳು ಕಾಣಿಸಿಕೊಂಡಿತ್ತು. ಆಗ ಕೀಟಬಾಧೆ ಕಾಟ ಕಡಿಮೆ ಯಾಗಬಹುದು ಎಂದುಕೊಂಡಿದ್ದ ರೈತರಿಗೆ ನೋಡು ನೋಡುತ್ತಲೇ 10- 15 ದಿನದಲ್ಲಿಯೇ ಕೊರಿಹುಳ ಹೊಲ ಪೂರ್ತಿಯಾಗಿ ಸೂರ್ಯಕಾಂತಿ ಗಿಡದ ಎಲೆ ತಿಂದಿವೆ. ಈಗ ಹೂವು ಬಿಡುವ ಸಂದರ್ಭದಲ್ಲಿರುವುದರಿಂದ ಹುಳು ನಿಯಂತ್ರಣಕ್ಕೆ ಯಾವುದೇ ಔಷಧಿ ಸಿಂಪಡಣೆ ಮಾಡಲು ಬರುವುದಿಲ್ಲ ಎಂಬುವುದು ಕೃಷಿ ತಜ್ಞರ ಸಲಹೆ.
ಎಲೆ ಹಿಂಬದಿಯಲ್ಲಿ ಕಾಣುವ ಹುಳು ಮೂರು-ನಾಲ್ಕು ದಿನಗಳಲ್ಲಿಯೇ ಎಲೆಯ ಕಾಂಡತಿಂದು ಬರಿ ಕಟ್ಟಿಗೆ ಉಳಿಸಿವೆ. ಇದರಿಂದ ಸೂರ್ಯಕಾಂತಿ ಇಳುವರಿ ಕಡಿಮೆಯಾಗಿ ರೈತರು ನಷ್ಟ ಅನುಭವಿಸುವಂತಾಗಿದೆ ಎಂದು ಹಡಗಲಿ, ಕನ್ನಾಳ, ದೆಸಾಯಿ ಭೋಗಾಪೂರ, ಛತ್ತರ ರೈತರು ತಮ್ಮ ಅಳಲು ತೊಡಿಕೊಂಡಿದ್ದಾರೆ.
ಈ ಬಾರಿ ಎಣ್ಣೆ ಬೆಲೆ ಹೆಚ್ಚಳವಾಗಿ ಮಾರುಕಟ್ಟೆಯಲ್ಲಿ ಸೂರ್ಯಕಾಂತಿಗೆ ಒಳ್ಳೆಯ ಬೆಲೆ ಸಿಕ್ಕಿತ್ತು. ಇದನ್ನೆ ನಂಬಿದ ರೈತರು ಸುಮಾರು ಆರುನೂರು ಹೆಕ್ಟೇರ್ ಪ್ರದೇಶದಲ್ಲಿ ಸೂರ್ಯಕಾಂತಿ ಬಿತ್ತನೆ ಮಾಡಿದ್ದಾರೆ. ತೇವಾಂಶ ಹೆಚ್ಚಳವಾಗಿ ಹೂಳು ಮತ್ತು ರೋಗ ಬಾಧೆಗೆ ಸೂರ್ಯಕಾಂತಿ ತುತ್ತಾಗಿದೆ ಎಂದು ಹಡಗಲಿ ಗ್ರಾಮದ ಹನುಮಂತಪ್ಪ ಪತ್ರಿಕೆಗೆ ತಿಳಿಸಿದ್ದಾರೆ.
ಹಿಂಗಾರಿಗೆ ಸುರಿದ ಅಧಿಕ ಮಳೆಯಿಂದ ವಾತಾವರಣದಲ್ಲಿ ವ್ಯತ್ಯಾಸ ಉಂಟಾಗಿ ಕೀಟ ಉತ್ಪತ್ತಿಗೆ ಕಾರಣವಾಗಿದೆ. ಕೆಲವೆಡೆ ಕೊರಿಹೂಳು ಕಾಣಿಸಿಕೊಂಡ ಪರಿಣಾಮ ಸೂರ್ಯಕಾಂತಿ ಬೆಳೆಹಾಳಾಗಿದೆ. -ಆಕಾಶ ದಾನಿ, ಕೃಷಿ ಅಧಿಕಾರಿ, ರೈತ ಸಂಪರ್ಕ ಕೇಂದ್ರ ಮುದಗಲ್ಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lokayukta; ಬೆಳ್ಳಂಬೆಳಗ್ಗೆ ರಾಜ್ಯದ ವಿವಿಧೆಡೆ ಭ್ರಷ್ಟರ ಬೇಟೆಗಿಳಿದ ಲೋಕಾಯುಕ್ತ
Bidar: 9 ಲಕ್ಷ ರೂ. ಮೌಲ್ಯದ ಕಚ್ಚಾ ಪಾನ್ ಮಸಾಲಾ, 3 ಲಕ್ಷ ರೂ. ಮೌಲ್ಯ ಸೀರೆ ಜಪ್ತಿ
ಹಾಲ್ ಟಿಕೆಟನ್ನೇ ತಿಂದು ಹಾಕಿದ ಕುರಿ… ನೊಂದು ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ
Bidar; ಖೂಬಾ ಪರ ಆರ್.ಅಶೋಕ್ ನೇತೃತ್ವದಲ್ಲಿ ಬಿಜೆಪಿ ಒಗ್ಗಟ್ಟು ಪ್ರದರ್ಶನ
Loksabha: ಬೀದರ್ ಕ್ಷೇತ್ರಕ್ಕೆ ಸಾಗರ ಖಂಡ್ರೆ ಹೆಸರು ಅಂತಿಮ; ಸಿಎಂ ಭೇಟಿಯಾದ ಈಶ್ವರ್
MUST WATCH
ಹೊಸ ಸೇರ್ಪಡೆ
Bike thief: ಬಜಪೆ ಪೊಲೀಸರಿಂದ ಅಂತರ್ ಜಿಲ್ಲಾ ಬೈಕ್ ಕಳ್ಳನ ಬಂಧನ
Ex-IPS officer ಸಂಜೀವ್ ಭಟ್ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ
Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ
Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್
Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ