ಅಂತ್ಯ ಕಾಲಕ್ಕೆ ಎಲ್ಲ ತೊರೆದು ಹೋಗಲೇಬೇಕು
Team Udayavani, Dec 8, 2018, 12:05 PM IST
ಬಸವಕಲ್ಯಾಣ: ದೇವನು ಸಮಾಜದಲ್ಲಿ ನಾಗರಿಕತೆ ಕಟ್ಟಿ ಬೆಳೆಸಲು ಅವಶ್ಯಕ ಇರುವ ಎಲ್ಲ ಸೌಕರ್ಯಗಳನ್ನು ನಿರ್ಮಿಸಿದ್ದು, ಅವುಗಳನ್ನು ಅನುಭವಿಸಲು ಕರಾರು ಮಾಡಿ ನಮ್ಮನ್ನು ಭೂಮಿ ಮೇಲೆ ಸೃಷ್ಟಿಸಿದ್ದಾನೆ. ಅದನ್ನು ಮೀರಿ ಒಂದು ನಿಮಿಷ ಕೂಡ ಜೀವಂತ ಇರಲು ಸಾಧ್ಯವಿಲ್ಲ ಎಂದು ಮಂಗಳೂರಿನ ಖ್ಯಾತ ಪ್ರವಚನಕಾರ ಮಹಮ್ಮದ್ ಕುಂಞ ಹೇಳಿದರು.
ನಗರದ ಸಭಾ ಭವನದಲ್ಲಿ ಜಮಾತೆ ಇಸ್ಲಾಂ ಹಿಂದ್ ಸಂಘಟನೆಯಿಂದ ಪ್ರವಾದಿ ಮುಹಮ್ಮದ್ (ಸ) ಸಂದೇಶ ಕುರಿತು ಹಮ್ಮಿಕೊಂಡ ಪ್ರವಚನ ಕಾರ್ಯಕ್ರಮದಲ್ಲಿ “ಮಾನವ ಜೀವನದ ವಾಸ್ತವಿಕತೆ’ ವಿಷಯ ಕುರಿತ ಅವರು ಮಾತನಾಡಿದರು. ದೇವರು ಒಂದು ಎಚ್ಚರಿಕೆ ಕೊಟ್ಟು ಕಳುಹಿಸಿದ್ದಾನೆ. ಮತ್ತು ದೇವರನ್ನು ನಿರಾಕರಿಸುವ ಜನರು ಬಹಳ ಸಂಖ್ಯೆಯಲ್ಲಿದ್ದಾರೆ. ಆದರೆ ಮರವಣವನ್ನು ನಿರಾಕರಿಸುವವರು ಈ ಮಣ್ಣಿನಲ್ಲಿ ಯಾರೂ ಇಲ್ಲ ಎಂದು ಹೇಳಿದರು.
ಸಮಯ ಮುಗಿದಮೇಲೆ ಎಲ್ಲವನ್ನೂ ಇಲ್ಲಿಯೇ ಬಿಟ್ಟು ಹೋಗಬೇಕು. ನಾವು ಜೀವಿತ ಅವಧಿಯಲ್ಲಿ ಮಾಡಿರುವ ಕರ್ಮಗಳು ಮಾತ್ರ ನಮ್ಮೊಂದಿಗೆ ಪರಲೋಕಕ್ಕೆ ಬರುತ್ತವೆ. ದೇವನ ನ್ಯಾಯಲಯದಲ್ಲಿ ಅವು ವಿಚಾರಣೆಗೆ ಒಳಪಡುತ್ತವೆ ಎಂಬ ಪ್ರಜ್ಞೆ ನಮ್ಮಲ್ಲಿ ಇರಬೇಕು ಎಂದರು.
ಸಂಸ್ಕೃತಿ ಚಿಂತಕ ಹಾಗೂ ಸಾಹಿತಿ ರಂಜಾನ್ ದರ್ಗಾ ಮಾತನಾಡಿ, ಜಗತ್ತಿನಲ್ಲಿ ಏಕದೇವೋಪಾಸನೆ ಧರ್ಮ ಯಾವುದಾದರೂ ಇದ್ದರೆ, ಅದು ಇಸ್ಲಾಂ ಧರ್ಮ ಮತ್ತು ಬಸವ ಧರ್ಮವಾಗಿದೆ. ಮುಹಮ್ಮದ್ ಪೈಗಂಬರ್ ಹಾಗೂ ಬಸವಣ್ಣನವರು ಬಡವರ ಪರ ಹೋರಾಡಿದವರು. ಯಾರು ತಪ್ಪು ದಾರಿಗೆ ಹೋಗುತ್ತಾರೊ, ಅವರಿಗೆ ತಿಳಿ ಹೇಳುವ ಕಾರ್ಯವನ್ನು ಬಸವಣ್ಣನವರು ಮಾಡಿದ್ದರು ಎಂದು ಹೇಳಿದರು.
ಶಾಸಕ ಬಿ.ನಾರಾಯಣರಾವ್ ಹಾಗೂ ಸಹಾಯಕ ಆಯುಕ್ತ ಜ್ಞಾನೇಂದ್ರಕುಮಾರ ಗಂಗವಾರ ಮಾತನಾಡಿದರು. ಅಸ್ಲಾಂ ಜನಾಬ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಜರತ್ ರಾಜ್ ಬಾಗ್ ಸವಾರ ದರ್ಗಾದ ಖ್ವಾಜಿ ಜಿಯಾಉಲ್ ಹಸನ್ ಜಾಗಿರ್ದಾರ್, ಮಾಜಿ ಶಾಸಕ ಎಂ.ಜಿ. ಮುಳೆ, ನಗರಸಭೆ ಅಧ್ಯಕ್ಷ ಮೀರ ಅಜರ್ ಅಲಿ ನವರಂಗ, ಸಿಎಂಸಿ ಸಹಾಯಕ ಆಯುಕ್ತ ಸುರೇಶ ಬಬಲಾದ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಶರಣಬಸಪ್ಪಾ ಬಿರಾದಾರ್, ಅರ್ಜುನ ಕನಕ, ನೀಲಕಂಠ ರಾಠೊಡ, ಪ್ರಭುಲಿಂಗಯ್ನಾ ಟಂಕಸಾಲಿ ಮಠ, ವೀರಶೆಟ್ಟಿ ಮಲಶೆಟ್ಟೆ, ಚಂದ್ರಕಾಂತ ಮೇತ್ರೆ, ರಾಜು ಮಂಠಾಳೆ, ಮಿಲಿಂದ ಗೂರುಜಿ ಹಾಗೂ ಮತ್ತಿತರರು ಇದ್ದರು. ಅಸ್ಲಾಂ ಜನಾಬ್ ಸ್ವಾಗತಿಸಿದರು. ಇಸುಫೋದ್ದಿನ್ ನಿಲಂಗೆ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lokayukta; ಬೆಳ್ಳಂಬೆಳಗ್ಗೆ ರಾಜ್ಯದ ವಿವಿಧೆಡೆ ಭ್ರಷ್ಟರ ಬೇಟೆಗಿಳಿದ ಲೋಕಾಯುಕ್ತ
Bidar: 9 ಲಕ್ಷ ರೂ. ಮೌಲ್ಯದ ಕಚ್ಚಾ ಪಾನ್ ಮಸಾಲಾ, 3 ಲಕ್ಷ ರೂ. ಮೌಲ್ಯ ಸೀರೆ ಜಪ್ತಿ
ಹಾಲ್ ಟಿಕೆಟನ್ನೇ ತಿಂದು ಹಾಕಿದ ಕುರಿ… ನೊಂದು ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ
Bidar; ಖೂಬಾ ಪರ ಆರ್.ಅಶೋಕ್ ನೇತೃತ್ವದಲ್ಲಿ ಬಿಜೆಪಿ ಒಗ್ಗಟ್ಟು ಪ್ರದರ್ಶನ
Loksabha: ಬೀದರ್ ಕ್ಷೇತ್ರಕ್ಕೆ ಸಾಗರ ಖಂಡ್ರೆ ಹೆಸರು ಅಂತಿಮ; ಸಿಎಂ ಭೇಟಿಯಾದ ಈಶ್ವರ್
MUST WATCH
ಹೊಸ ಸೇರ್ಪಡೆ
Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ
Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ
Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ
ʼAadujeevithamʼ Twitter review: ಪೃಥ್ವಿರಾಜ್ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?
Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ