ಅನಾಥವಾದ ಕಪ್ಪು ಶಿಲಾ ಶಾಸನ
Team Udayavani, Jun 8, 2022, 4:18 PM IST
ಮಾನ್ವಿ: ಸಾರ್ವಜನಿಕರು, ಪುರಾತತ್ವ ಇಲಾಖೆ ಹಾಗೂ ತಾಲೂಕು ಆಡಳಿತದ ಅವಕೃಪೆಯಿಂದ ಕಪ್ಪು ಶಾಸನವೊಂದು ರಸ್ತೆ ಬದಿಯಲ್ಲಿ ಅನಾಥವಾಗಿ ಬಿದ್ದಿದೆ.
ಈ ಶಾಸನವು 5 ಅಡಿ ಎತ್ತರ ಒಂದೂವರೆ ಅಡಿ ಅಗಲ ಇದ್ದು ಚೌಕಾಕೃತಿ ಹೊಂದಿದೆ. ಶಾಸನದ ಮೂರೂ ಕಡೆಯಲ್ಲಿ ಕನ್ನಡ ಲಿಪಿ ಬರೆಯಲಾಗಿದೆ.
ಈ ಶಾಸನವು ಅಪ್ರಕಟಿತ ಶಾಸನವಾಗಿದೆ. ಅಶುದ್ಧ ಕನ್ನಡ ಭಾಷೆಯಲ್ಲಿದ್ದು 64 ಸಾಲುಗಳಿಂದ ಕೂಡಿದೆ. ಆರಂಭದಲ್ಲಿ ಶಾಸನದ ಕಾಲ ತಿಳಿಸಲಾಗಿದ್ದು ಶಾಲ್ಪದಿನಾಮ ಸಂವತ್ಸರದ ಕಾರ್ತಿಕ ಬಹುಳ ಪಂಚಮಿಯ ಆದಿತ್ಯವಾರದಂದು ಕ್ರಿ.ಶ.1751ರಿಂದ 1761ರ ಕಾಲಘಟ್ಟದಲ್ಲಿ ಸಲಾಬತ್ ಖಾನನೆಂಬ ಆಸಫ್ಜಾಹಿ ವಂಶದ ಸುಲ್ತಾನನನ್ನು ಹೈದ್ರಾಬಾದ್ ಪ್ರಾಂತ್ಯವನ್ನು ಆಳ್ವಿಕೆ ಮಾಡುತ್ತಿರುವಾಗ ಮೊಸಗೆ (ಮಸ್ಕಿ) ಸೀಮೆಯ ಮಾನುವೆ (ಮಾನ್ವಿ) ಸ್ಥಳದಲ್ಲಿ ಕೆರೆ ನಿರ್ಮಾಣ ಸಮಯದಲ್ಲಿ ಈ ಶಾಸನ ಬರೆಸಲಾಗಿದೆ.
ಶಾಸನದ ಎರಡನೇ ಬದಿಯಲ್ಲಿ ಮಾನುವೆ(ಮಾನ್ವಿ) ಸ್ಥಳದ ಬೀದಿ ಮೆರವಣಿಗೆ ಸಂದರ್ಭದಲ್ಲಿ ಬೀದಿ ಮೆರವಣಿಗೆಗೆ ತೊಡಕು ಇದ್ದುದರಿಂದ ಮಸೀದಿ ಸ್ಥಳಕ್ಕೆ ಒಡಂಬಡಿಕೆ ಪ್ರಕಾರ ಸ್ಥಳ ಬಿಟ್ಟು ಬಂದಿದ್ದರಿಂದ ಸಾಲಗುಂದ ಮಹಾನಾಡಿನ ಹಟಗಾರ, ಗೌಡ ಪ್ರಜೆಗಳಲ್ಲಿ ವಿನಂತಿಸಿಕೊಂಡು ಸ್ಥಳವನ್ನು ಮಾನ್ಯ ಮಾಡಿಸಿಕೊಂಡಿದ್ದ ಬಗ್ಗೆ ತಿಳಿಸುತ್ತದೆ. ಇದು ಸೂರ್ಯ-ಚಂದ್ರ ಇರುವವರೆಗೆ ಚಾಲ್ತಿಯಲ್ಲಿರುತ್ತದೆ ಹಾಗೂ ತಪ್ಪಿದ್ದಲ್ಲಿ ದಂಡ ತೆರಬೇಕಾಗುತ್ತದೆ ಎಂದು ತಿಳಿಸುತ್ತದೆ. ಮೂರನೇ ಬದಿಯಲ್ಲಿ ಅಂದಿನ ದಿನಗಳಲ್ಲಿ ಇದ್ದ ಊರಿನ ಪ್ರಮುಖರ ಹೆಸರುಗಳು, ಸಾಕ್ಷಿಗಳ ಹೆಸರುಗಳನ್ನು ಬರೆಯಲಾಗಿದೆ ಎನ್ನುತ್ತಾರೆ ಸಂಶೋಧಕ ಚನ್ನಬಸಪ್ಪ ಮಲ್ಕಂದಿನ್ನಿ.
ಪ್ರಾಚೀನ ಇತಿಹಾಸ ತಿಳಿಸುವ ಅನೇಕ ಪುರಾತನ ಕಲ್ಯಾಣಿಗಳು, ಶಾಸನಗಳು, ವೀರಗಲ್ಲುಗಳು, ಮಾಸ್ತಿಗಲ್ಲುಗಳು ಇದ್ದು ಅವುಗಳನ್ನು ಸರಿಯಾದ ರೀತಿಯಲ್ಲಿ ಸಂರಕ್ಷಿಸಿ ಉಳಿಸಬೇಕಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lokayukta; ಬೆಳ್ಳಂಬೆಳಗ್ಗೆ ರಾಜ್ಯದ ವಿವಿಧೆಡೆ ಭ್ರಷ್ಟರ ಬೇಟೆಗಿಳಿದ ಲೋಕಾಯುಕ್ತ
Bidar: 9 ಲಕ್ಷ ರೂ. ಮೌಲ್ಯದ ಕಚ್ಚಾ ಪಾನ್ ಮಸಾಲಾ, 3 ಲಕ್ಷ ರೂ. ಮೌಲ್ಯ ಸೀರೆ ಜಪ್ತಿ
ಹಾಲ್ ಟಿಕೆಟನ್ನೇ ತಿಂದು ಹಾಕಿದ ಕುರಿ… ನೊಂದು ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ
Bidar; ಖೂಬಾ ಪರ ಆರ್.ಅಶೋಕ್ ನೇತೃತ್ವದಲ್ಲಿ ಬಿಜೆಪಿ ಒಗ್ಗಟ್ಟು ಪ್ರದರ್ಶನ
Loksabha: ಬೀದರ್ ಕ್ಷೇತ್ರಕ್ಕೆ ಸಾಗರ ಖಂಡ್ರೆ ಹೆಸರು ಅಂತಿಮ; ಸಿಎಂ ಭೇಟಿಯಾದ ಈಶ್ವರ್
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ