ಬಕ್ರೀದ್ ಆಚರಣೆಗೆ ಸಹಕರಿಸಲು ಮನವಿ
Team Udayavani, Jul 25, 2020, 9:33 AM IST
ಬೀದರ: ಜಿಲ್ಲೆಯಲ್ಲಿ ಈದ್ ಉಲ್ ಅದಾ (ಬಕ್ರೀದ್) ಹಬ್ಬವನ್ನು ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಶಾಂತಿಯುತವಾಗಿ ಆಚರಣೆಗೆ ಜಿಲ್ಲಾಡಳಿತ ಸಹಕಾರ ನೀಡಬೇಕು ಎಂದು ಜಮಾಅತೆ ಇಸ್ಲಾಮೀ ಹಿಂದ್ ಜಿಲ್ಲಾ ಘಟಕ ಮನವಿ ಮಾಡಿದೆ.
ಸಂಘಟನೆ ಜಿಲ್ಲಾಧ್ಯಕ್ಷ ಮುಹಮ್ಮದ್ ನಿಝಾಮುದ್ದೀನ್ ನೇತೃತ್ವದಲ್ಲಿ ಪ್ರಮುಖರು ಜಿಲ್ಲಾಕಾರಿ ಆರ್. ರಾಮಚಂದ್ರನ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಆ. 1ರಿಂದ 3ರವರೆಗೆ ಮುಸ್ಲಿಂ ಬಾಂಧವರ ಎರಡನೇ ಪ್ರಮುಖ ಹಬ್ಬ ಈದ್ ಉಲ್ ಅದಾ ಆಚರಸಲಾಗುತಿದೆ. ಕುರ್ಬಾನಿ (ಪ್ರಾಣಿ ಬಲಿ) ಈ ಹಬ್ಬದ ಮುಖ್ಯ ಮತ್ತು ಕಡ್ಡಾಯ ಆರಾಧನೆಯಾಗಿದೆ. ಈ ಸಂಬಂಧ ಕುರಿ, ಮೇಕೆ ಮತ್ತು ಅನುಮತಿಸಿದ ದೊಡ್ಡ ಪ್ರಾಣಿಗಳ ಖರೀದಿ, ಸಾಗಣೆಗೆ ಹಾಗೂ ಕುರ್ಬಾನಿಗೆ ಜಿಲ್ಲಾಡಳಿತ ಸಹಕರಿಸಬೇಕು ಎಂದು ಕೋರಿದ್ದಾರೆ.
ಈ ಹಬ್ಬವು ರೈತರು, ವ್ಯಾಪಾರಸ್ಥರು, ಕುರೈಷಿಗಳ ಆದಾಯ ಹಾಗೂ ಜೀವನಾಧಾರದ ಜೊತೆ ಸಂಬಂಧ ಹೊಂದಿದೆ. ಮುಸ್ಲಿಮರು ಈ ಸಂದರ್ಭದಲ್ಲಿ ಕಡ್ಡಾಯವಾಗಿ ಸಾಮಾಜಿಕ ಅಂತರ, ಸ್ವಚ್ಛತೆ, ಮಾಸ್ಕ್ ಧರಿಸುವುದು, ಕೈತೊಳೆಯುವುದು ಸೇರಿದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಪಾಲಿಸುವರು ಎಂದು ತಿಳಿಸಿದ್ದಾರೆ.
ಹಬ್ಬದ ದಿನದಂದು ಮುಸ್ಲಿಮರು (ಮಕ್ಕಳು ಮತ್ತು ಹಿರಿಯರು ಹೊರತುಪಡಿಸಿ) ಮಸೀದಿ, ಈದ್ಗಾ ಹಾಗೂ ಬಯಲು ಪ್ರದೇಶದಲ್ಲಿ ನಮಾಜ್ ಮಾಡುವರು. ಈ ವೇಳೆ ಮುಂಜಾಗ್ರತೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು. ಸಾಂಪ್ರದಾಯಕವಾಗಿ ಪರಸ್ಪರ ಅಪ್ಪಿಕೊಂಡು ಹಬ್ಬದ ಶುಭಾಶಯ ಹೇಳುವುದಿಲ್ಲ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ರಾಜ್ಯ ಸಲಹಾ ಮಂಡಳಿ ಸದಸ್ಯ ಮುಹಮ್ಮದ್ ಅಸಿಫುದ್ದೀನ, ಜಿಲ್ಲಾ ಉಪಾಧ್ಯಕ್ಷ ಮುಹಮ್ಮದ್ ಆರಿಫುದ್ದೀನ, ಮುಜ್ತಬಾ ಖಾನ್, ಸದಸ್ಯ ರಫೀಕ್ ಅಹ್ಮದ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dakshina Kannada; ಕ್ಯಾಪ್ಟನ್ ಬ್ರಿಜೇಶ್ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ
Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್ ಗೆಲುವು ಕಾಣುವಾಸೆ..
Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ
DCvsGT; ಪಂತ್ ನಾಯಕತ್ವಕ್ಕೆ ಅಗ್ನಿಪರೀಕ್ಷೆ: ತವರಿನ “ಕೋಟ್ಲಾ’ದಲ್ಲಿ ಗುಜರಾತ್ ಎದುರಾಳಿ
ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?