ಇಬ್ಬರು ಬೈಕ್ ಕಳ್ಳರ ಬಂಧನ: ಆರು ಬೈಕ್ ವಶಕ್ಕೆ
Team Udayavani, Apr 28, 2022, 2:25 PM IST
ಮುದಗಲ್ಲ: ಪಟ್ಟಣದ ಬೇರೆ-ಬೇರೆ ಸ್ಥಳಗಳಲ್ಲಿ ಮತ್ತು ಕನ್ನಾಪೂರಹಟ್ಟಿ ಗ್ರಾಮದಲ್ಲಿ ಬೈಕ್ ಕಳ್ಳತನ ಮಾಡಿದ್ದ ಇಬ್ಬರು ಕಳ್ಳರನ್ನು ಸ್ಥಳೀಯ ಪೋಲಿಸರು ಬಂಧಿಸಿದ್ದಾರೆ.
ಬಂಧಿತನನ್ನು ಅಪ್ಪಾಜಿ ಸಂಗಪ್ಪ ದೊಡ್ಡಮನಿ ಹಾಗೂ ಶ್ರೀಧರ ಪರಸಪ್ಪ ಘಂಟೇರ ಮೇಗಳಪೇಟೆ ಎಂಬುವರನ್ನು ಬಂಧಿಸಿ ಅವರಿಂದ 2.80 ಲಕ್ಷ ರೂ. ಮೌಲ್ಯದ ಆರು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.
ಠಾಣೆ ಪಿಎಸ್ಐ ಪ್ರಕಾಶರೆಡ್ಡಿ ಡಂಬಳ್ ಹಾಗೂ ಸಿಬ್ಬಂದಿಗಳಾದ ಪಂಪಾವತಿ, ಅಡಿವೆಪ್ಪ, ಮಂಜುನಾಥ, ಅಮರೇಶ ಜತೆಗೆ ಪಟ್ಟಣದಲ್ಲಿ ಪೆಟ್ರೊಲಿಂಗ್ ಮಾಡುತ್ತಿರುವಾಗ ಮೆಗಳಪೇಟೆಯ ಅಂಕಲಿಮಠ ಕ್ರಾಸ್ ಹತ್ತಿರ ಸ್ಕೂಟಿ ಮೇಲೆ ಇಬ್ಬರು ಅನುಮಾನಸ್ಪವಾಗಿ ತಿರುಗಾಡುತ್ತಿದ್ದರು. ಅವರನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಕಳ್ಳತನ ವಿಷಯ ಬೆಳಕಿಗೆ ಬಂದಿದೆ.
ಈ ಹಿಂದೆ ಕಳ್ಳತನ ಪ್ರಕರಣಗಳನ್ನು ತಾಳೆಹಾಕಿದ ಪೊಲೀಸರು, ಪ್ರತ್ಯೇಕ ಕಡೆ, ಸಮಯದಲ್ಲಿ ಕಳ್ಳರು ತಮ್ಮ ಕೈ ಚಳಕದಿಂದ ಬೈಕ್ ಕದ್ದಿರುವುದನ್ನು ಪತ್ತೆ ಮಾಡಿದ್ದಾರೆ. ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಲಿಂಗಸುಗೂರು ಪೊಲೀಸ್ ಉಪವಿಭಾಗಾಧಿಕಾರಿ ಎಸ್.ಎಸ್. ಹುಲ್ಲೂರು ತಿಳಿಸಿದ್ದಾರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
ನೀತಿ ಸಂಹಿತೆ ನಡುವೆಯೂ ರಾಜ್ಯಕ್ಕೆ ನೆರವು ಎನ್ನುವ ಬಿಜೆಪಿಗೆ ನಾಚಿಕೆ ಇಲ್ಲವೇ? – ಖಂಡ್ರೆ