ಧನ್ನೂರಾ (ಕೆ)ವಾಡಿ ವ್ಯಕ್ತಿಗೆ ಕೋವಿಡ್ -ಅಧಿಕಾರಿಗಳ ಭೇಟಿ
Team Udayavani, May 16, 2020, 12:20 PM IST
ಬಸವಕಲ್ಯಾಣ: ಧನ್ನೂರ (ಕೆ) ವಾಡಿ ಗ್ರಾಮಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು
ಬಸವಕಲ್ಯಾಣ: ಹುಮನಾಬಾದ್ ತಾಲೂಕಿನ ಹುಣಸಗೇರಾ ಗ್ರಾಮದಲ್ಲಿ ಕೋವಿಡ್ ದೃಢಪಟ್ಟ ಬೆನ್ನಲ್ಲೇ ಬಸವಕಲ್ಯಾಣ ತಾಲೂಕಿನ ಧನ್ನೂರಾ (ಕೆ) ವಾಡಿ ಗ್ರಾಮದ 35 ವರ್ಷದ ವ್ಯಕ್ತಿಯಲ್ಲಿ ಕೋವಿಡ್ ದೃಢ ಪಟ್ಟಿದ್ದು, ಗ್ರಾಮೀಣ ಭಾಗದಲ್ಲಿ ಆತಂಕ ಸೃಷ್ಟಿಯಾಗಿದೆ.
ಧನ್ನೂರ(ಕೆ) ವಾಡಿ ಗ್ರಾಮದ ವ್ಯಕ್ತಿ ಮೇ 6ರಂದು ರಾತ್ರಿ ಮುಂಬೈನ ಮಾನಾಪುರ ಕಾಲೋನಿಯಿಂದ ಮೇ 7ರಂದು ಬೆಳಗ್ಗೆ ಬಂಗ್ಲಾದಿಂದ ಆಟೋದಲ್ಲಿ ಧನ್ನೂರ (ಕೆ) ವಾಡಿ ಗ್ರಾಮಕ್ಕೆ ಬಂದಿದ್ದಾನೆ. ಮೇ 9ರಂದು ಧನ್ನೂರಾ ಗ್ರಾಮದ ಪಿಎಚ್ಸಿ ಕೇಂದ್ರದಲ್ಲಿ ಗಂಟಲು ದ್ರವ್ಯ ಪಡೆದು ಕ್ವಾರಂಟೈನಲ್ಲಿ ಇಡಲಾಗಿತ್ತು, ಆದರೆ ಮೇ 15ರಂದು ಬಂದ ವರದಿ ಆತನಿಗೆ ಸೋಂಕು ಇರುವುದನ್ನು ತಿಳಿಸಿದೆ. ವಿಷಯ ತಿಳಿದು ಬಸವಕಲ್ಯಾಣ ಸಹಾಯಕ ಆಯುಕ್ತ ಭಂವರ್ಸಿಂಗ್ ಮೀನಾ, ತಹಶೀಲ್ದಾರ್ ಸಾವಿತ್ರಿ ಶರಣು ಸಲಗರ, ತಾಪಂ ಇಒ ಮಡೋಳಪ್ಪ ಪಿ.ಎಸ್, ಗ್ರಾಮೀಣ ಪಿಎಸ್ಐ ವಾಸೀಂ ಪಟೇಲ್ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಗ್ರಾಮವನ್ನು ಸೀಲ್ಡೌನ್ ಮಾಡಿ ಜನ-ವಾಹನ ಸಂಚಾರವಾಗದಂತೆ ನೋಡಿಕೊಳ್ಳಬೇಕೆಂದು ಗ್ರಾಮೀಣ ಪಿಎಸ್ಐ ವಾಸೀಂ ಪಟೇಲ್ ಅವರಿಗೆ ಸೂಚಿಸಿದರು. ನಂತರ ಗ್ರಾಮದಲ್ಲಿ ಅಗ್ನಿ ಶಾಮಕ ಠಾಣೆ ಸಿಬ್ಬಂದಿ ಔಷಧ ಸಿಂಪಡಣೆ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL 2024; ಧೋನಿ ಐಪಿಎಲ್ ಭವಿಷ್ಯದ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಸುರೇಶ್ ರೈನಾ
Jai Shri Ram ಎಂದು ಕೂಗಿದ್ದಕ್ಕೆ ಅನ್ಯಕೋಮಿನ ಯುವಕರಿಂದ ಹಲ್ಲೆ
Shimoga; ಕೆ.ಎಸ್. ಈಶ್ವರಪ್ಪರನ್ನು ಭೀಷ್ಮರಿಗೆ ಹೋಲಿಸಿದ ಋಷಿಕುಮಾರ ಸ್ವಾಮೀಜಿ
Madhya pradesh Lok Sabha 20204: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್- ಬಿಜೆಪಿ ನೇರ ಹಣಾಹಣಿ
Vijayapura; ವಿಕಸಿತ ಭಾರತದಲ್ಲಾಗಿರುವ ಅಭಿವೃದ್ಧಿ ಏನು: ಕೆಪಿಸಿಸಿ ವಕ್ತಾರ ಗಣಿಹಾರ ಪ್ರಶ್ನೆ